Don't Miss!
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣಲೀಲಾ ತಂಡಕ್ಕೆ ಸಹೃದಯತೆ ತೋರಿದ ಕ್ರೇಜಿಸ್ಟಾರ್
ಶಶಾಂಕ್ ನಿರ್ದೇಶನದ ಕೃಷ್ಣಲೀಲಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಸುದ್ದಿಯನ್ನು ಈಗಾಗಲೇ ಓದಿರುತ್ತೀರಿ.
ಕನ್ನಡ ಚಿತ್ರೋದ್ಯಮದಲ್ಲಿ ಇತರ ಕಲಾವಿದರನ್ನು ಪ್ರೋತ್ಸಾಹಿಸುವ ಉತ್ತಮ ಕೆಲಸ ನಡೆಯುತ್ತಿದೆ. ಕೃಷ್ಣಲೀಲಾ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಹಾಡು ಹಾಡಿದ್ದು ಇದಕ್ಕೆ ಕೊಡಬಹುದಾದ ಉದಾಹರಣೆ.
ಈಗಾಗಲೇ ಪುನೀತ್ ರಾಜಕುಮಾರ್ ಕೃಷ್ಣಲೀಲಾ ಚಿತ್ರ ವೀಕ್ಷಿಸಿ ಚಿತ್ರ ತಂಡವನ್ನು ಬೆನ್ನುತಟ್ಟಿದ್ದಾಯಿತು. ಈಗ ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ಅವರ ಸರದಿ. (ಕೃಷ್ಣಲೀಲಾ ಚಿತ್ರವಿಮರ್ಶೆ)
ಮೊನ್ನೆ ಬುಧವಾರದಂದು (ಏ 15) ರವಿಚಂದ್ರನ್ ಬೆಂಗಳೂರು ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಓರಿಯನ್ ಮಾಲ್ ನಲ್ಲಿ ಕೃಷ್ಣಲೀಲಾ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ಮುಗಿದ ನಂತರ ತನ್ನ ಮನೆಗೆ ಚಿತ್ರತಂಡವನ್ನು ಕರೆದೊಯ್ದು ರವಿಚಂದ್ರನ್ ಸಹೃದಯತೆಯನ್ನೂ ತೋರಿದ್ದಾರೆ. ['ಕೃಷ್ಣಲೀಲಾ' ಬಗ್ಗೆ ರವಿಚಂದ್ರನ್ ಹೀಗೆಂದರು!]
ರವಿಚಂದ್ರನ್ ಚಿತ್ರ ನೋಡಿ ಬೆನ್ನುತಟ್ಟಿದ್ದು ಹೀಗೆ..
ಕೃಷ್ಣ ಲೀಲಾ ತಪ್ಪುಗಳೇ ಇಲ್ಲದ ಸಿನಿಮಾ
ಶಶಾಂಕ್ ನಿರ್ದೇಶನದ ಕೃಷ್ಣ ಲೀಲಾ ತಪ್ಪುಗಳೇ ಇಲ್ಲದ ಸಿನಿಮಾ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರೂಪಣೆ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ.
ಕಲಾವಿದರ ನಟನೆ ಸೂಪರ್
ಚಿತ್ರದ ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಅಜೇಯ್ ರಾವ್ , ಮಯೂರಿ ಮತ್ತು ರಂಗಾಯಣ ರಘು ಅಭಿನಯ ಶ್ಲಾಘನೀಯ ಎಂದು ರವಿಮಾಮ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ನಿಜ ಮನುಷ್ಯರನ್ನು ನೋಡಿದ ಹಾಗಾಯಿತು
ಕೇವಲ ಸಿನಿಮೀಯ ಮತ್ತು ಅತಿರಂಜಿತ ಕಥಾ ಚಿತ್ರಗಳೇ ಬರುತ್ತಿರುವ ಈ ಹೊತ್ತಿನಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ನಿಜವಾದ ಮನುಷ್ಯರನ್ನು ನೋಡಿದ ಹಾಗಾಯಿತು ಎಂದು ಚಿತ್ರದ ನಿರೂಪಣೆಯನ್ನು ರವಿಚಂದ್ರನ್ ಪ್ರಶಂಸಿದ್ದಾರೆ.
ಮನೆಗೆ ಕರೆದೊಯ್ದ ರವಿ
ಚಿತ್ರ ವೀಕ್ಷಿಸಿದ ನಂತರ ನಾಯಕ ಅಜೇಯ್ ರಾವ್, ನಿರ್ದೇಶಕ ಶಶಾಂಕ್, ಛಾಯಾಗ್ರಾಹಕ ಶೇಖರ್ ಚಂದ್ರು ಮತ್ತು ಸಂಗೀತ ನಿರ್ದೇಶಕ ವಿ ಶ್ರೀಧರ್ ರವರನ್ನು ತಮ್ಮ ಮನೆಗೆ ಕರೆದೊಯ್ದು ಸತ್ಕರಿಸುವ ಮೂಲಕ ರವಿಚಂದ್ರನ್ ಎಂದಿನ ತಮ್ಮ ಸಹೃದಯತೆಯನ್ನು ಮೆರೆದಿದ್ದಾರೆ.
ಪುನೀತ್ ಬೆನ್ನುತಟ್ಟಿದ್ದರು
ಶಶಾಂಕ್ ನಿರ್ದೇಶನದ ಜೊತೆಗೆ ನನಗೆ ಮೊದಲು ಇಷ್ಟ ಆಗಿದ್ದು ಬ್ಯೂಟಿಫುಲ್ ಸ್ಕ್ರಿಪ್ಟ್. ಅಜೇಯ್ ಪರ್ಫಾಮೆನ್ಸ್ ನೋಡಿ ತುಂಬಾ ಖುಷಿ ಆಯ್ತು. ರಂಗಾಯಣ ರಘು, ಅಚ್ಯುತ್ ರಾವ್, ಹೀರೋಯಿನ್ ಎಲ್ಲರ ಪರ್ಫಾಮೆನ್ಸ್ ಚೆನ್ನಾಗಿದೆ. ಸಾಧು ಕೋಕಿಲ ಒಂದು ಹಾಡಲ್ಲಿ ಬರುತ್ತಾರೆ. ಆ ಹಾಡು ನನಗೆ ತುಂಬಾ ಇಷ್ಟ.