Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ ದರ್ಶನ್ ಫ್ಯಾನ್ಸ್
ಕಳೆದ ಫೆಬ್ರವರಿ 16, ದರ್ಶನ್ ಹುಟ್ಟುಹಬ್ಬದಂದು ನಡೆದ ರಾದ್ಧಾಂತ ನೆನಪಿದ್ಯಾ. ಪ್ರತಿವರ್ಷದಂತೆ ಈ ವರ್ಷ ಕೂಡ ಸುದ್ದಿ ವಾಹಿನಿಗಳು ದರ್ಶನ್ ಬರ್ತಡೆ ಕವರ್ ಮಾಡುವುದಕ್ಕೆ ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ನಿವಾಸಕ್ಕೆ ಆಗಮಿಸಿದ್ದರು.
ಬರ್ತಡೆ ಸಂಭ್ರಮಾಚರಣೆಯನ್ನ ಶೂಟ್ ಮಾಡಿದ ನಂತರ ದರ್ಶನ್ ರವರನ್ನ ಮಾತನಾಡಿಸುವುದಕ್ಕೆ ಖಾಸಗಿ ವಾಹಿನಿಯ ವರದಿಗಾರರೊಬ್ಬರು ಮುಂದಾಗಿದ್ದಾರೆ. ದರ್ಶನ್ ಪ್ರತಿಕ್ರಿಯೆ ನೀಡುವುದಕ್ಕೆ ಮುನ್ನವೇ, ಅಲ್ಲೇ ಇದ್ದ ದರ್ಶನ್ 'ಭಕ್ತ'ರೊಬ್ಬರು ಅಭಿಮಾನ ಪರಾಕಾಷ್ಟೆ ಮೆರೆದ ಪರಿಣಾಮ ಮಾಧ್ಯಮದವರ ಮೇಲೆ ಕಲ್ಲು ತೂರಾಟ ನಡೆದಿತ್ತು. ಖಾಸಗಿ ವಾಹಿನಿಯ ಓ.ಬಿ ವ್ಯಾನ್ ಕೂಡ ಜಖಂಗೊಂಡಿತ್ತು.
ಇಂತದ್ದೇ ಪ್ರಕರಣ ನೆನಪಿಸುವಂತಹ ಘಟನೆ ಇಂದು ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದಿದೆ. 'Mr.ಐರಾವತ' ಚಿತ್ರದ ಬಿಗ್ ಓಪನ್ನಿಂಗ್ ಕುರಿತು ಸುದ್ದಿ ಮಾಡುವ ಸಲುವಾಗಿ ಎಲ್ಲಾ ಸುದ್ದಿ ವಾಹಿನಿಗಳು ಇಂದು ಬೆಳ್ಳಗೆ 8 ಗಂಟೆಗೆ ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ಹಾಜರಿತ್ತು. [ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]
ಅಷ್ಟೊತ್ತಿಗಾಗಲೇ, ಟಿಕೆಟ್ ಸೋಲ್ಡ್ ಔಟ್ ಆಗಿದ್ರಿಂದ ಕೆಲ ಅಭಿಮಾನಿಗಳು ಥಿಯೇಟರ್ ಮುಂಭಾಗದಲ್ಲಿ ಗದ್ದಲ ಸೃಷ್ಟಿಸಿದ್ದರು. ಇನ್ನೂ ಕೆಲವರು, ತಮ್ಮನ್ನ ಮಾಧ್ಯಮದವರು ಚಿತ್ರೀಕರಿಸಲಿ ಅನ್ನುವ ಕಾರಣಕ್ಕೆ ಸುಖಾ ಸುಮ್ಮನೆ ಕಿರುಚಾಡಿ, ಕುಣಿಯುತ್ತಿದ್ದರು.
ಇದ್ದಕ್ಕಿದ್ದಂತೆ ಯಾರಿಗೆ ಅದೇನಾಯ್ತೋ ಗೊತ್ತಿಲ್ಲ. ನೋಡನೋಡುತ್ತಿದ್ದಂತೆ ಚಿತ್ರೀಕರಣ ನಡೆಸುತ್ತಿದ್ದ ಖಾಸಗಿ ವಾಹಿನಿ ಸುದ್ದಿ ವಾಹಿನಿ ಕ್ಯಾಮರಾಮ್ಯಾನ್ ಮತ್ತು ವರದಿಗಾರರ ಮೇಲೆ ದರ್ಶನ್ 'ಭಕ್ತರು' ಹಲ್ಲೆಗೆ ಯತ್ನಿಸಿದ್ದಾರೆ. [ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?]
ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಮಾಧ್ಯಮದವರ ಮೇಲೆ ಸಿಟ್ಟು ಅದೇಕೋ..? ಬಲ್ಲವರು ಯಾರು..?