Don't Miss!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಬಚ್ಚನ್ 'ಸನ್ನಿಧಿ'ಯಿಂದ ದೀಪಾ ಔಟ್
ಸುದೀಪ್ ನಟನೆ, ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರದಿಂದ ದೀಪಾ ಸನ್ನಿಧಿ ಔಟ್ ಆಗಿದ್ದಾರೆ. ಬಚ್ಚನ್ ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದ ದೀಪಾ, ಈಗ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅರೇ, ಮೂವರಲ್ಲಿ ಮೊದಲು ಆಯ್ಕೆಯಾಗಿದ್ದೇ ದೀಪಾ ತಾನೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರ 'ಹೌದು'. ಆದರೆ ಈಗ ಹೊರಹೋಗಿರುವುದೂ ಹೌದು.
ಬಚ್ಚನ್ ಚಿತ್ರಕ್ಕೆ ದೀಪಾ ಸನ್ನಿಧಿ, ಪಾರುಲ್ ಯಾದವ್ ಹಾಗೂ ಜಾಕಿ ಭಾವನಾ ಆಯ್ಕೆಯಾಗಿದ್ದರು. ಅವರಲ್ಲಿ ಮೊದಲು ಆಯ್ಕೆಯಾಗಿದ್ದೇ ದೀಪಾ, ನಂತರ ಪಾರುಲ್ ಬಂದರು. ಜಾಕಿ ಖ್ಯಾತಿಯ ಭಾವನಾ ಜಾಗಕ್ಕೆ ನಯನತಾರಾ ಬರಬೇಕಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕೈಎತ್ತಿದ ನಯನತಾರಾ ಬದಲಿಗೆ ಬಂದವರು ಭಾವನಾ. ಈಗ ದೀಪಾ ಔಟ್!
ಈ ವಿಷಯವನ್ನು ನಟಿ ದೀಪಾ ಸನ್ನಿಧಿ ಹಾಗೂ ನಿರ್ದೇಶಕ ಶಶಾಂಕ್ ಇಬ್ಬರೂ ಹೌದೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಯಾಕೆ ಎಂಬುದೀಗ ಎಲ್ಲರ ಕುತೂಹಲ. ಅದಕ್ಕೆ ಕೂಡ ಈ ಇಬ್ಬರೂ ಕಾರಣವನ್ನು ವಿವರಿಸಿದ್ದಾರೆ. ಇಬ್ಬರೂ ಕೊಟ್ಟಿರುವ ಸ್ಪಷ್ಟೀಕರಣ ಒಂದೇ ಆಗಿರುವುದರಿಂದ ಯಾವುದನ್ನು ಹೇಳಿದರೂ ಒಂದೇ, ಓದಿಕೊಳ್ಳಿ...
"ಈ ಮೊದಲು ಇದ್ದಂತೆ ದೀಪಾ ಪಾತ್ರವಿಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ ಈಗ ಆ ಪಾತ್ರ ದೀಪಾ ಸನ್ನಿಧಿಗೆ ಸೂಟ್ ಆಗುವುದಿಲ್ಲ. ಈ ವಿಷಯವನ್ನು ನಟಿ ದೀಪಾ ಸನ್ನಿಧಿ ಹಾಗೂ ನಿರ್ದೇಶಕ ಶಶಾಂಕ್ ಇಬ್ಬರೂ ಪರಸ್ಪರ ಕುಳಿತು ಚರ್ಚಿಸಿದ್ದಾರೆ. ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ದೀಪಾ ನಟಿಸುವುದಿಲ್ಲ ಎಂಬುದು ಪಕ್ಕಾ ಸುದ್ದಿ. ದೀಪಾ ಜಾಗಕ್ಕೆ ಸದ್ಯ ಯಾರೂ ಆಯ್ಕೆಯಾಗಿಲ್ಲ.
ಈ ವಿಷಯ ನಟಿ ಹಾಗೂ ನಿರ್ದೇಶಕ ಇಬ್ಬರ ಕಡೆಯಿಂದಲೂ ಎಳ್ಳಷ್ಟೂ ಸಂಶಯಕ್ಕೆ ಅವಕಾಶವಿಲ್ಲದಂತೆ ಹೊರಬಿದ್ದಿದೆ. ಆದರೆ ಗಾಂಧಿನಗರದಲ್ಲಿ ಮಾತ್ರ ಬೇರೆಯದೇ ಸುದ್ದಿ ಓಡಾಡುತ್ತಿದೆ. 'ದೀಪಾ ಸನ್ನಿಧಿಯನ್ನು ಚಿತ್ರದಿಂದ ಹೊರಹಾಕಲು ಸೂಚಿಸಿದ್ದು ಬಚ್ಚನ್ ನಾಯಕ ಸುದೀಪ್' ಎಂಬುದು ಗಾಂಧಿನಗರದ ವರ್ತಮಾನ.
ಆದರೆ ಇದನ್ನು ದೀಪಾ ಆಗಲಿ, ಶಶಾಂಕ್ ಆಗಲೀ ಎಲ್ಲೂ ಹೇಳಿಲ್ಲ. ಆದರೂ ಹೀಗೆ ಸುದ್ದಿ ಹಬ್ಬಿರುವುದು ಹೌದು. ಈ ಸುದ್ದಿಗೆ ಸುದೀಪ್ ಅವರನ್ನು ಕೇಳುವ ಧೈರ್ಯವನ್ನು ಯಾರೂ ಮಾಡಿಲ್ಲ. ಅಷ್ಟಕ್ಕೂ ಸುದೀಪ್ ಅವರನ್ನು ಯಾಕೆ ಕೇಳಬೇಕು ಹೇಳಿ? ಹೊರಹಾಕಿದ ನಿರ್ದೇಶಕ, ಹೊರಬಂದ ನಟಿ ಇಬ್ಬರೂ ಸ್ಟಷ್ಟವಾಗಿ ಹೇಳಿದ ಮೇಲೆ ಇದಕ್ಕೆ ಫುಲ್ ಸ್ಟಾಪ್ ಹಾಕುವುದೇ ಒಳ್ಳೆಯದು, ನೀವೇನಂತೀರಾ? (ಒನ್ ಇಂಡಿಯಾ ಕನ್ನಡ)