Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಟಲಿ ವಿಮಾನ ಹತ್ತಿದ ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಚಿತ್ರದ ಬಳಿಕ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ಎಂದರೆ 'ಧೀರ ರಣವಿಕ್ರಮ'. ಈ ಚಿತ್ರ ಹಲವಾರು ಕಾರಣಗಳಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಕೆರಳಿಸಿದೆ.
ಮೊದಲನೆಯದು ಜಯಣ್ಣ ಕಂಬೈನ್ಸ್ ಚಿತ್ರ ಎಂಬುದು. ಇನ್ನೊಂದು ಪವನ್ ಒಡೆಯರ್ ಅವರ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಬಗ್ಗೆ ನಿರೀಕ್ಷೆಗಳು ಸಾಕಷ್ಟಿವೆ. ಇತ್ತೀಚೆಗೆ ಬಳ್ಳಾರಿಯಲ್ಲಿ ರೈಲ್ವೆ ಸ್ಟೇಷನ್ ಸನ್ನಿವೇಶದಲ್ಲಿ ಹಲವಾರು ಭೋಗಿಗಳನ್ನು ರಚಿಸಿ ರು.80 ಲಕ್ಷ ವೆಚ್ಚದಲ್ಲಿ ಭರ್ಜರಿ ಕ್ಲೈಮಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. [ಧೀರ ರಣವಿಕ್ರಮ ವಿಲನ್ ವಿಕ್ರಮ್ ಸಿಂಗ್]
ಇದಕ್ಕೆ ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮ ಅವರು ವಿನೂತನ ಸಾಹಸ ಸನ್ನಿವೇಶಗಳನ್ನು ಸಂಯೋಜಿಸಿದ್ದಾರೆ. ಇದೀಗ ಕೆಲವು ಮಾತಿನ ಭಾಗ ಹಾಗೂ ಹಾಡಿಗಾಗಿ ಇಟಲಿ ದೇಶವನ್ನು ಸುತ್ತಿ ಬರಲಿದ್ದಾರೆ 'ರಣವಿಕ್ರಮ'.
ನಿರ್ದೇಶಕ ಪವನ್ ಒಡೆಯರ್ ಅವರು ಬೆಂಗಳೂರು, ಹಂಪಿ, ಮೆಟ್ರೊ ರೈಲು, ತುಂಗಭದ್ರ ನದಿ ದಂಡೆ ಹಾಗೂ ಇನ್ನಿತರ ಸ್ಥಳಗಳಲ್ಲಿ 80ಕ್ಕೂ ಅಧಿಕ ದಿವಸಗಳ ಚಿತ್ರೀಕರಣ ಮಾಡಿದ್ದಾರೆ.
ಜಯಣ್ಣ ಹಾಗೂ ಭೋಗೇಂದ್ರ ಅವರ ಮತ್ತೊಂದು ಮಹೋನ್ನತ ಚಿತ್ರವಿದು. ವೈಧಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ, ಸುರೇಶ್ ಅವರ ಸಂಕಲನ, ರವಿ ವರ್ಮ ಅವರ ಸಾಹಸವನ್ನು ಒಳಗೊಂಡಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾರಾಗಿ ಅಂಜಲಿ ಹಾಗೂ ಆದ ಶರ್ಮ ಇದ್ದಾರೆ. ಹಿಂದಿ ಸಿನಿಮಾದ ಪ್ರಖ್ಯಾತ ಖಳ ನಟ ವಿಕ್ರಮ್ ಸಿಂಗ್, ಪೋಷಕ ಪಾತ್ರಗಳಲ್ಲಿ ದಿನೇಶ್ ಮಂಗಳೂರು, ಮುಖ್ಯಮಂತ್ರಿ ಚಂದ್ರು, ಡಾಕ್ಟರ್ ಗಿರೀಶ್ ಕಾರ್ನಾಡ್, ಅವಿನಾಶ್, ರಂಗಾಯಣ ರಘು, ಅಶೋಕ್, ಸುಧ ಬೆಳವಾಡಿ, ಶ್ರೀಧರ್ ಕೇಸರಿ, ಲಕ್ಷ್ಮಣ್ ರವಿವರ್ಮಾ ಹಾಗೂ ಇತರರು ಇದ್ದಾರೆ. (ಫಿಲ್ಮಿಬೀಟ್ ಕನ್ನಡ)