Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಂತ' ಚಿತ್ರದ ಅಂತರಂಗ ಬಿಚ್ಚಿಟ್ಟ ಅಂಬರೀಶ್
ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ಅಂತ' ನೀವು ನೋಡಿರಬಹುದು. ಆ ಚಿತ್ರದಲ್ಲಿ ಅಂಬರೀಶ್ ಉಗುರು ಕೀಳುವ ದೃಶ್ಯ ನಿಮಗೆ ನೆನಪಿರಬಹುದು.
ಅಂಬರೀಶ್ ರವರ ಉಗುರು ಕೀಳುವ ದೃಶ್ಯ ನೋಡಿ, ನೀವೆಲ್ಲಾ 'ಅಂತ' ಚಿತ್ರದ ವಿಲನ್ ಗಳಿಗೆ ಶಾಪ ಹಾಕಿರ್ತೀರಾ. ಆದ್ರೆ, ಈ ಸನ್ನಿವೇಶ ಬೇಡವೇ ಬೇಡ ಅಂತ ಅಂದು ಅಂಬರೀಶ್ ಪ್ರತಿಭಟಿಸಿದ್ದರಂತೆ.
''ಯಾಕೆ ಇಂತಹ ಹಿಂಸೆಯ ಸನ್ನಿವೇಶಗಳನ್ನ ಇಡುತ್ತೀರಾ. ನನ್ನ ಕೈಯಲ್ಲಿ ಇದೆಲ್ಲಾ ನೋಡೋಕೆ ಆಗಲ್ಲ. ಈ ಸೀನ್ ಬೇಡ'' ಅಂತ 'ಅಂತ' ಚಿತ್ರದ ನಿರ್ದೇಶಕರಿಗೆ ಅಂಬರೀಶ್ ಹೇಳಿದ್ದರಂತೆ.
ಈಗ ಈ ವಿಚಾರವನ್ನ ನಾವು ಹೇಳುವುದಕ್ಕೆ ಹಾಗೂ ಅಂಬರೀಶ್ ನೆನಪಿಸಿಕೊಳ್ಳುವುದಕ್ಕೆ ಕಾರಣ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರವರ ಅಪ್ಪಟ ಅಭಿಮಾನಿ ಸುರೇಶ್. [ಅಂಧ ಅಭಿಮಾನಿ ಸೋನಿಯಾ ಗಾಂಧಿಗಾಗಿ ಏನು ಮಾಡಿದ ಗೊತ್ತಾ?]
ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಸೋನಿಯಾ ಗಾಂಧಿ ರವರಿಗೆ ಜೈಲು ಶಿಕ್ಷೆ ಆಗ್ಬಾರ್ದು ಎಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತ ಸುರೇಶ್, ತಮ್ಮ ಕೈ ಬೆರಳುಗಳನ್ನ ಕತ್ತರಿಸಿಕೊಂಡು ತಿಮ್ಮಪ್ಪನ ಹುಂಡಿಗೆ ಅರ್ಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರೂ ಆಗಿರುವ ಮಂಡ್ಯ ಮೂಲದ ಸುರೇಶ್ ರವರ ಈ ಅಭಿಮಾನದ ಪರಾಕಾಷ್ಟೆ ಬಗ್ಗೆ ತಿಳಿದ ಅಂಬರೀಶ್ ನಿನ್ನೆ ಸುರೇಶ್ ರವರನ್ನ ತಮ್ಮ ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ಕರೆಸಿಕೊಂಡರು.['ಮಂಡ್ಯದ ಗಂಡು' ಅಂಬರೀಶ್ ಮನೆಯಲ್ಲಿ ಬುದ್ಧಾವತಾರ]
ಸುರೇಶ್ ರವರ ಕೈಬೆರಳು ಕಟ್ ಆಗಿರುವುದನ್ನ ನೋಡಿ ದಿಗ್ಭ್ರಾಂತರಾದ ಅಂಬರೀಶ್ ಸುರೇಶ್ ರವರಿಗೆ ಬುದ್ಧಿ ಮಾತು ಹೇಳಿದರು. ಜೊತೆಗೆ ತಮ್ಮ 'ಅಂತ' ಸಿನಿಮಾದ ಅಂತರಂಗ ಬಿಚ್ಚಿಟ್ಟರು.
''ಅಂತ' ಸಿನಿಮಾದಲ್ಲಿ ಉಗುರು ಕೀಳಿಸಿಕೊಂಡಂತೆ ನಟಿಸುವುದೇ ಕಷ್ಟವಾಗಿತ್ತು. ಇನ್ನೂ ನೀನು ನಿಜವಾಗಿಯೂ ಕಟ್ ಮಾಡಿಕೊಂಡಿದ್ಯಲ್ಲಾ. ನಿನಗೆ ಏನು ಹೇಳೋದಪ್ಪಾ. ಇಂತಹ ಹಿಂಸಾತ್ಮಕ ಹರಕೆಗಳನ್ನ ದಯವಿಟ್ಟು ಹೊರಬೇಡಿ. ಅಭಿಮಾನ ತೋರಿಸುವ ಹಾಗಿದ್ರೆ ಸಮಾಜಮುಖಿ ಕೆಲಸ ಮಾಡಿ. ಈ ತರಹ ಹಿಂಸಾತ್ಮಕ ಮಾರ್ಗ ಬೇಡ'' ಅಂತ ಅಂಬರೀಶ್ ಮನವಿ ಮಾಡಿದರು. (ಫಿಲ್ಮಿಬೀಟ್ ಕನ್ನಡ)