Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ ಬರಲಿದೆ ತಮಿಳಿನ ಗಲ್ಲಿ ಕ್ರಿಕೆಟ್ ಚಿತ್ರ
ಗಲ್ಲಿ ಕ್ರಿಕೆಟ್, ನವಿರಾದ ಪ್ರೇಮಕಥಾನಕ, ಸ್ನೇಹಿತರ ಸವಾಲುಗಳನ್ನು ಹೊಂದಿದ್ದ ಹಾಸ್ಯಪ್ರಧಾನ ಕಥಾ ಹಂದರವಿದ್ದ 'ಚೆನ್ನೈ 600028 ತಮಿಳು ಚಿತ್ರ 2007ರಲ್ಲಿ ಭರ್ಜರಿ ಯಶಸ್ಸುಗಳಿಸಿತ್ತು, ಈಗ ಈ ಚಿತ್ರ ಬಾಲಿವುಡ್ ಗೆ ಹಾರಿ ನಂತರ ಬೆಂಗಳೂರಿನ ಗಾಂಧಿನಗರಕ್ಕೆ ಬಂದಿದೆ. ರಿಮೇಕ್ ನಿರ್ದೇಶಕ ಪ್ರದೀಪ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ.
ನೀನಾಸಂ
ಸತೀಶ
ಅವರು
ನಟಿಸಿದ್ದ
ಅಂಜದ
ಗಂಡು
ಚಿತ್ರ
ಮಕಾಡೆ
ಮಲಗಿದ
ಮೇಲೆ
ಪ್ರದೀಪ್
ರಾಜ್
ಅವರು
ಚೆನ್ನೈ
600028
ಚಿತ್ರವನ್ನು
ಕನ್ನಡಕ್ಕೆ
ಭಟ್ಟಿ
ಇಳಿಸುತ್ತಿದ್ದಾರೆ.
ಕನ್ನಡ
ಅವೃತ್ತಿಗೆ
ಇನ್ನೂ
ಹೆಸರಿಟ್ಟಿಲ್ಲವಂತೆ.
ಕಿರಾತಕ,
ಮಿ.
420,
ರಜನಿಕಾಂತಾ
ಚಿತ್ರಗಳನ್ನು
ನಿರ್ದೇಶಿಸಿರುವ
ಪ್ರದೀಪ್
ಈ
ಬಾರಿ
ಕ್ರಿಕೆಟ್
ಕಥೆಯೊಂದಿಗೆ
ಬರುತ್ತಿದ್ದಾರೆ.
ಚಿತ್ರದ
ತಾರಾಗಣ
ಆಯ್ಕೆ
ನಡೆದಿದೆಯಾದರೂ
ಪ್ರಧಾನ
ಪಾತ್ರಗಳಲ್ಲಿ
ಜೈ
ಕಾರ್ತೀಕ್(ಜೆಕೆ),
ಧ್ರುವ
ಶರ್ಮ,
ರಾಜೀವ್
ಹಾಗೂ
ಚಂದನ್
ನಟಿಸುವುದು
ಗ್ಯಾರಂಟಿಯಾಗಿದೆ.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಎದುರಾಳಿಗಳ ಎಸೆತವನ್ನು ಹಿಗ್ಗಾ ಮುಗ್ಗ ಚೆಚ್ಚುತ್ತಿದ್ದ ರಾಜೀವ್ ಅವರು ಈ ಚಿತ್ರದಲ್ಲೂ ಕ್ರಿಕೆಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದವರೂ ಕೂಡಾ ಗಲ್ಲಿ ಕ್ರಿಕೆಟ್ ತಂಡದ ಸದಸ್ಯರೇ. ಸಂಜನಾ ಹಾಗೂ ಶಿವಾನಿ ಚಿತ್ರದ ನಾಯಕಿಯರು. ಸಾಧುಕೋಕಿಲ, ಚಿಕ್ಕಣ್ಣ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಿಂದಿ ವರ್ಷನ್ ನಲ್ಲಿ ದಿಗಂತ್: ಚೆನ್ನೈ 600028 ಚಿತ್ರದ ಹಿಂದಿ ರಿಮೇಕ್ 'ಫಟಕ್' ನಲ್ಲಿ ದಿಗಂತ್ ನಟಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.ದಿಗಂತ್ ಜತೆಗೆ ನಟ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ ಕಪೂರ್ ನಟಿಸುತ್ತಿದ್ದಾರೆ.'ಡೇವಿಡ್' ಚಿತ್ರ ಖ್ಯಾತಿಯ ವಿಜಯ್ ನಂಬಿಯಾರ್ ಅವರ ಸಹ ನಿರ್ಮಾಣದ ಈ ಚಿತ್ರವನ್ನು ಅವರ ಸಹಾಯಕ ಯಜಾದ್ ನಿರ್ದೇಶಿಸುತ್ತಿದ್ದಾರೆ. ಸಿದ್ಧಾಂತ್ ಮೂಲ ಚಿತ್ರದಲ್ಲಿದ್ದ ಶಿವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ದಿಗಂತ್ ಅವರು ಜೈ ಪಾತ್ರಧಾರಿಯಾಗಿದ್ದಾರೆ. ಕನ್ನಡದಲ್ಲಿ ಯಾರು ಶಿವ, ಯಾರು ಜೈ ಪಾತ್ರಧಾರಿ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಮೂಲ ಚಿತ್ರದ 'ಕಥೆ': ಚೆನ್ನೈ 600028 ಎಂಬುದು ಚೆನ್ನೈನ ಮಂಡವೇಲಿ ಪ್ರದೇಶ ಪಿನ್ ಕೋಡ್ ನಂಬರ್ ಈ ಪ್ರದೇಶದಲ್ಲಿ ಕಥೆ ನಡೆಯುವುದರಿಂದ ಈ ಹೆಸರು ಇಡಲಾಗಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ಜೈ, ಶಿವ, ನಿತಿನ್, ಅರವಿಂದ್, ಪ್ರೇಮ್ ಜಿ ಅಮರನ್, ಅಜ್ಯ್, ಪ್ರಸನ್ನ ಮುಂತಾದವರು ನಟಿಸಿದ್ದರು. ಎಸ್ ಪಿಬಿ ಚರಣ್ ನಿರ್ಮಾಣದ ಈ ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶನ ಮಾಡಿದ್ದರು. ಭರ್ಜರಿ ಯಶಸ್ಸು ಗಳಿಸಿದ ಈ ಚಿತ್ರ ಈಗಾಗಲೇ ಶ್ರೀಲಂಕಾದಲ್ಲಿ ಸೂಪರ್ ಸಿಕ್ಸ್ ಹಾಗೂ ಬೆಂಗಾಲಿಯಲ್ಲಿ ಲೆ ಛಕ್ಕಾ ಎಂಬ ಹೆಸರಿನಲ್ಲಿ ತೆರೆ ಕಂಡಿದೆ.