Don't Miss!
- Finance ಬಯೋಕಾನ್ ರಾಜಕೀಯ ದೇಣಿಗೆ ನೀಡಿಲ್ಲ ಎಂದ ಕಿರಣ್ ಮಜುಂದಾರ್ ಶಾ: ಹಾಗಿದ್ರೆ 6 ಕೋಟಿ ರೂ. ಯಾರದ್ದು?
- News ಕನ್ನಡ ನಾಮಫಲಕ: ಬಲವಂತದ ಕ್ರಮ ಬೇಡ ಎಂದ ಕೋರ್ಟ್
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು..
ಸಿನಿಮಾಗಳಿಗೆ ಛಾಯಾಗ್ರಹಣ ಮಾಡುತ್ತಿದ್ದ ಎಸ್.ಕೃಷ್ಣ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಅಚಾನಕ್ಕಾಗಿರಬಹುದು. ಆದ್ರೆ, ನಿರ್ದೇಶಕನಾಗಬೇಕು ಎಂಬ ಕನಸು ಅವರಿಗೆ ಮೊದಲಿನಿಂದಲೂ ಇತ್ತು.
ಹಾಗೆ, ಡೈರೆಕ್ಟರ್ ಸೀಟ್ ನಲ್ಲಿ ಕೂತರೆ... ಮೊದಲು ಇದೇ ಸಿನಿಮಾ ಮಾಡಬೇಕು ಅಂತ 'ಹೆಬ್ಬುಲಿ' ಸ್ಕ್ರಿಪ್ಟ್ ರೆಡಿ ಮಾಡಿಟ್ಟುಕೊಂಡಿದ್ದರಂತೆ ಎಸ್.ಕೃಷ್ಣ. ಆದರೂ, ಅವರು ಮೊದಲು ಆಕ್ಷನ್ ಕಟ್ ಹೇಳಿದ್ದು 'ಗಜಕೇಸರಿ' ಚಿತ್ರಕ್ಕೆ.['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]
ತಮ್ಮ ಸಿನಿ ಜರ್ನಿ ಹಾಗೂ 'ಹೆಬ್ಬುಲಿ' ಚಿತ್ರದ ಬಗ್ಗೆ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್.ಕೃಷ್ಣ ಹೇಳಿದಿಷ್ಟು....
ನಿರ್ದೇಶಕ ಆಗಿದ್ದು ಹೇಗೆ.?
''ನಿರ್ದೇಶಕ ಆಗಿದ್ದೇ ಸಡನ್ ಡಿಸಿಷನ್. ಒಂದು ದಿನ ಜಯಣ್ಣ ಫೋನ್ ಮಾಡಿ, ''ಒಂದು ಸಿನಿಮಾ ಡೈರೆಕ್ಟ್ ಮಾಡ್ತೀಯಾ'' ಅಂತ ಕೇಳಿದರು. ''ಯೋಚನೆ ಮಾಡಿ ಹೇಳ್ತೀನಿ'' ಅಂದೆ. ''ಟೈಮ್ ಇಲ್ಲ ದೇವಸ್ಥಾನದಲ್ಲಿ ಇದ್ದೀನಿ...ಈಗಲೇ ಹೇಳಬೇಕು'' ಅಂದರು. ಆಗ, ''ಸರಿ'' ಅಂದೆ. 'ಗಜಕೇಸರಿ' ಶುರು ಆಯ್ತು. ಅಲ್ಲಿಂದ ನನ್ನ ನಿರ್ದೇಶನದ ಜರ್ನಿ ಸ್ಟಾರ್ಟ್ ಆಯ್ತು'' - ಎಸ್.ಕೃಷ್ಣ[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]
'ಹೆಬ್ಬುಲಿ' ಸ್ಕ್ರಿಪ್ಟ್ ರೆಡಿ ಇತ್ತು
''ಹೆಬ್ಬುಲಿ' ನನ್ನ ನಿರ್ದೇಶನದ ಮೊದಲ ಸಿನಿಮಾ ಆಗ್ಬೇಕಿತ್ತು. 'ಗಜಕೇಸರಿ' ಮೊದಲೇ 'ಹೆಬ್ಬುಲಿ' ಸ್ಕ್ರಿಪ್ಟ್ ರೆಡಿ ಇತ್ತು'' - ಎಸ್.ಕೃಷ್ಣ ['ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!]
ಸುದೀಪ್ ರಿಂದ ಕಲಿಯುವುದು ಬಹಳ ಇದೆ
''ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಸರ್ ಜೊತೆ ಕೆಲಸ ಮಾಡುವಾಗ ಕಲಿತಿದ್ದು 'ಹೆಬ್ಬುಲಿ' ಚಿತ್ರದಲ್ಲಿ ಸಹಾಯ ಆಯ್ತು. 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಸರ್ ರವರಿಂದ ತುಂಬಾ ಕಲಿತಿದ್ದೇನೆ'' - ಎಸ್.ಕೃಷ್ಣ
ಎಲ್ಲರ ಶ್ರಮ ಕಾರಣ
''ಸಿನಿಮಾ ಶುರು ಆಗುವ ಆರು ತಿಂಗಳ ಹಿಂದಿನಿಂದ ತುಂಬಾ ಹೋಮ್ ವರ್ಕ್ ಮಾಡಿದ್ವಿ. ನನ್ನ ಟೆಕ್ನಿಕಲ್ ಟೀಮ್ ನನಗೆ ತುಂಬಾ ಸಪೋರ್ಟ್ ಮಾಡಿದರು. ಇವತ್ತು ಸಿನಿಮಾ ಚೆನ್ನಾಗಿ ಬಂದಿದೆ ಅಂದ್ರೆ ಅದಕ್ಕೆ ಎಲ್ಲರ ಶ್ರಮ ಕಾರಣ'' - ಎಸ್.ಕೃಷ್ಣ