twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ಬೆಂಬಲಿಸಿ ಕನ್ನಡ ಚಿತ್ರಗಳಿಗೆ ತೊಂದರೆ ಕೊಟ್ಟರೆ ಹುಷಾರ್.!

    |

    'ಬಾಹುಬಲಿ-2' ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. 'ಬಾಹುಬಲಿ-2' ಅಬ್ಬರ ಕನ್ನಡ ನೆಲದಲ್ಲಿ ತುಂಬಾನೇ ಜೋರಾಗಿದೆ. ಇದರಿಂದಲೇ, ಕನ್ನಡ ಸಿನಿಮಾಗಳಿಗೆ 'ಬಾಹುಬಲಿ-2' ಕಂಟಕವಾಗಿದೆ. ['ಬಾಹುಬಲಿ'ಗೆ ಬಲಿಯಾಯ್ತು ಕನ್ನಡ ಚಿತ್ರ: ಇದು ನಿರ್ದೇಶಕರ ನೋವಿನ 'ರಾಗ']

    ಕರ್ನಾಟಕದಲ್ಲಿ 'ಬಾಹುಬಲಿ-2' 300ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗುತ್ತಿದೆ. ಇದರಿಂದ ಕನ್ನಡ ಚಿತ್ರಗಳಿಗೆ ಥಿಯೇಟರ್ ಪ್ರಾಬ್ಲಂ ಎದುರಾಗಿದೆ. ಕನ್ನಡದ 'ರಾಗ', 'ರಾಜಕುಮಾರ', 'ಚಕ್ರವರ್ತಿ' ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆಯಾಗಿದೆ.

    'ಬಾಹುಬಲಿ-2' ಸಿನಿಮಾಗಾಗಿ ಕನ್ನಡದ ಚಿತ್ರಗಳ ಎತ್ತಂಗಡಿ ಆಗುತ್ತಿದೆ. ಕನ್ನಡ ಸಿನಿಮಾಗಳು ಚೆನ್ನಾಗಿ ಓಡುತ್ತಿದ್ರೂ, ಅದನ್ನ ತೆಗೆದು 'ಬಾಹುಬಲಿ-2' ಚಿತ್ರವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಗಮನಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

    [ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು 'ಬಾಹುಬಲಿ'ಯ ಪಟ್ಟಾಭಿಷೇಕ ದೃಶ್ಯ!
    ]

    ಕನ್ನಡ ಸಿನಿಮಾಗಳಿಗೆ ತೊಂದರೆ ಕೊಡಬೇಡಿ

    ಕನ್ನಡ ಸಿನಿಮಾಗಳಿಗೆ ತೊಂದರೆ ಕೊಡಬೇಡಿ

    ನಿನ್ನೆ (ಏಪ್ರಿಲ್ 26) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಾ.ರಾ.ಗೋವಿಂದು ಸುದ್ದಿಗೋಷ್ಠಿ ನಡೆಸಿದ್ರು. ''ಬಾಹುಬಲಿ-2' ಸಿನಿಮಾ ಬಂದಿದೆ ಎನ್ನುವ ದೃಷ್ಠಿಯಿಂದ ಕನ್ನಡದ ಒಳ್ಳೆಯ ಸಿನಿಮಾಗಳಿಗೆ ತೊಂದರೆ ಕೊಡಬೇಡಿ'' ಅಂತ ಸಾ.ರಾ.ಗೋವಿಂದು ಪ್ರದರ್ಶಕರಿಗೆ ಹೇಳಿದ್ದಾರೆ.[ಚೆನ್ನೈನಲ್ಲಿ ಕೇಳೋರೇ ಇಲ್ಲ.. ಬೆಂಗಳೂರಲ್ಲಿ 'ಬಾಹುಬಲಿ'ಯೇ ಎಲ್ಲಾ.!]

    ನಮ್ಮ ಗಮನಕ್ಕೆ ತನ್ನಿ

    ನಮ್ಮ ಗಮನಕ್ಕೆ ತನ್ನಿ

    ''ಬಾಹುಬಲಿ-2' ಸಿನಿಮಾಗಾಗಿ ಕನ್ನಡದ ಸಿನಿಮಾಗಳನ್ನ ಕಾರಣವಿಲ್ಲದೆ ಚಿತ್ರಮಂದಿರಗಳಿಂದ ಕಿತ್ತು ಹಾಕಿದ್ರೆ ಅಂತಹ ಸಿನಿಮಾ ತಂಡಗಳು ತಕ್ಷಣವೇ ನಮ್ಮ ಗಮನಕ್ಕೆ ತನ್ನಿ'' - ಸಾ.ರಾ.ಗೋವಿಂದು

    ಹುಷಾರ್...

    ಹುಷಾರ್...

    ''ಕನ್ನಡ ಸಿನಿಮಾಗಳಿಗೆ ತೊಂದರೆ ಕೊಟ್ಟು, ಕನ್ನಡ ಚಿತ್ರಗಳನ್ನ ಪ್ರದರ್ಶನ ಮಾಡುವುದಕ್ಕೆ ಸಹಕಾರ ಕೊಡದಿದ್ದರೆ ಪ್ರತಿಭಟನೆ ನಡೆಸಲಾಗುವುದು'' - ಸಾ.ರಾ.ಗೋವಿಂದು[ಇಂದು ರಾತ್ರಿಯಿಂದಲೇ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನ: ಟಿಕೆಟ್ ಬೆಲೆ ಅಬ್ಬಬ್ಬಾ.!]

    ಕನ್ನಡದ ಕಾಳಜಿ ಇರಲಿ

    ಕನ್ನಡದ ಕಾಳಜಿ ಇರಲಿ

    ''ಊರ್ವಶಿ ಚಿತ್ರಮಂದಿರ ಕರ್ನಾಟಕದಲ್ಲಿ ಇದ್ದು, ಕನ್ನಡದ ಬಗ್ಗೆ ಕಾಳಜಿ ಇಟ್ಟುಕೊಂಡಿಲ್ಲ. ಕನ್ನಡ ಚಿತ್ರಗಳು ಅಂದ್ರೆ ತಾತ್ಸಾರ ಭಾವನೆಯಿಂದ ನೋಡುತ್ತಾರೆ'' - ಸಾ.ರಾ.ಗೋವಿಂದು

    ಆತಂಕಕಾರಿ ಬೆಳವಣಿಗೆ

    ಆತಂಕಕಾರಿ ಬೆಳವಣಿಗೆ

    ಕನ್ನಡ ನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ಬೆಲೆ ಇಲ್ಲ ಅಂದ್ರೆ ಹೇಗೆ.? ಕನ್ನಡದ ಒಳ್ಳೆಯ ಸಿನಿಮಾಗಳು ಹೀಗೆ ಬಲಿಯಾದ್ರೆ ಮುಂದೆ ಒಳ್ಳೆ ಸಿನಿಮಾಗಳನ್ನ ಮಾಡಬೇಕು ಎಂದುಕೊಂಡವರು ಸಹ ಹಿಂದೇಟು ಹಾಕುತ್ತಾರೆ.

    English summary
    'Do not disturb good kannada films due to 'Baahubali-2' release' says KFCC President Sa.Ra.Govindu
    Thursday, April 27, 2017, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X