Don't Miss!
- News Voter Guide: ಮತದಾನ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್
ಕನ್ನಡ ಚಿತ್ರರಂಗದಲ್ಲಿ 'ಡಬ್ಬಿಂಗ್' ಬೇಕೋ.? ಬೇಡ್ವೋ.? ಎಂಬ ಕುರಿತು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಡಬ್ಬಿಂಗ್ ವಿವಾದ ಸಿ.ಸಿ.ಐ ಮೆಟ್ಟಿಲು ಏರಿದ್ಮೇಲಂತೂ, 'ಡಬ್ಬಿಂಗ್' ವಿರುದ್ಧ ದನಿ ಎತ್ತಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಹೀಗಿರುವಾಗಲೇ, ಇದೇ ಶುಕ್ರವಾರ (ಮಾರ್ಚ್ 3) ಕನ್ನಡಕ್ಕೆ ಡಬ್ ಆಗಿರುವ ತಮಿಳಿನ ಹಿಟ್ ಸಿನಿಮಾ 'ಸತ್ಯದೇವ್ ಐಪಿಎಸ್' ಬಿಡುಗಡೆ ಆಗಲಿದೆ. ಸ್ಯಾಂಡಲ್ ವುಡ್ ನಲ್ಲಿ ಇಂತಹ ಡಬ್ಬಿಂಗ್ ಚಟುವಟಿಕೆ ವಿರೋಧಿಸಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ....
ಡಬ್ಬಿಂಗ್ ನಮ್ಮ ಸಂಸ್ಕೃತಿ ಅಲ್ಲ.!
''ಆತ್ಮೀಯ
ಕನ್ನಡಿಗರೇ..
ಕನ್ನಡಾಭಿಮಾನಿಗಳೇ,
ಚಿತ್ರ
ಪ್ರೇಮಿಗಳೇ,
ಡಬ್ಬಿಂಗ್
ನಮ್ಮ
ಸಂಸ್ಕೃತಿಯಲ್ಲ.
ನಾವು
ಅದನ್ನು
ವಿರೋಧಿಸುತ್ತೇವೆ.
ನಮ್ಮ
ಮತ್ತು
ಕನ್ನಡಾಭಿಮಾನಿಗಳಾದ
ನೀವು
ಸಹ
ಇದನ್ನು
ವಿರೋಧಿಸುವಿರಿ
ಎಂದು
ನಂಬಿದ್ದೇವೆ''
-
ಪ್ರಜ್ವಲ್
ದೇವರಾಜ್,
ನಟ
['ಕನ್ನಡದ
ಹೆಸರಲ್ಲಿ
ಅನಾಚಾರ':
'ಡಬ್ಬಿಂಗ್'
ವಿರುದ್ಧ
ಗುಡುಗಿದ
ನಟ
ಜಗ್ಗೇಶ್.!]
ನೀವೂ ಕೈ ಜೋಡಿಸಿ
'ನಮ್ಮ ನಿರ್ಮಾಪಕರಿಗೂ, ಪ್ರದರ್ಶಕರಿಗೂ, ವಿತರಿಕರಿಗೂ ಇದನ್ನು ತಿಳಿಸುವೆವು.. ಮತ್ತು ಡಬ್ಬಿಂಗ್ ಗೆ ಅವಕಾಶ, ಪ್ರೋತ್ಸಾಹ ನೀಡುವ ಎಲ್ಲರಿಂದ ದೂರ ಉಳಿಯುವೆವು. ಇದಕ್ಕೆ ನೀವು ಸಹ ಕೈ ಜೋಡಿಸಿ'' - ಪ್ರಜ್ವಲ್ ದೇವರಾಜ್, ನಟ [ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ]
ಡಬ್ಬಿಂಗ್ ನ ಹೊರಗಿಡಿ
''ಇದೆಲ್ಲ ಸ್ವಾಭಿಮಾನಿ ಕನ್ನಡಿಗನ ಕೆಲಸವಲ್ಲ. ಡಾ.ರಾಜ್, ಡಾ.ವಿಷ್ಣು, ಡಾ.ಅಂಬರೀಶ್ ಅವರನ್ನೆಲ್ಲ ಅಣ್ಣ ಎಂದು ಹಣ, ಹೆಸರು ಸಿಕ್ಕ ಮೇಲೆ ಕನ್ನಡದ ತಲೆ ಕಾಯುವ ಬದಲು ತಲೆ ತೆಗೆಯಲು ನಿಂತ ಕೆಲ ಮೀರ್ ಸಾಧಕರದು. ಇಂತಹವರನ್ನು ಮತ್ತು ಡಬ್ಬಿಂಗ್ ಅನ್ನು ನಮ್ಮಂತೆ ನೀವೂ ಸಹ ಹೊರಗಿಡಿ'' - ಪ್ರಜ್ವಲ್ ದೇವರಾಜ್, ನಟ
ಬೆರಕೆ, ಕಲಬೆರಕೆ ಅಳಿಯಲಿ
''ಕನ್ನಡ ಕಲಾವಿದರು, ತಂತ್ರಜ್ಞರು, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಸಹಕರಿಸಿ.. ಬೆರಕೆ, ಕಲಬೆರಕೆ ಅಳಿಯಲಿ.. ಶಾಸ್ತ್ರೀಯ ಕನ್ನಡ ಉಳಿಯಲಿ.. ಜೈ ಕನ್ನಡ'' - ಎಂದು ಫೇಸ್ ಬುಕ್ ನಲ್ಲಿ ನಟ ಪ್ರಜ್ವಲ್ ದೇವರಾಜ್ ಬರೆದುಕೊಂಡಿದ್ದಾರೆ.['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]