Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ 'ದನ' ಕಾಯ್ಲಿಲ್ಲ.! ಪ್ರಿಯಾಮಣಿ ತಿರುಗಿ ನೋಡ್ಲಿಲ್ಲ.! ಯಾಕೆ?
ಅಂದು ಮೇ 6, ಶುಕ್ರವಾರ. ಕನಕಪುರದ ಶ್ರೀ ಕಂಕೇರಮ್ಮ ದೇವಸ್ಥಾನದಲ್ಲಿ ಜಾತ್ರೆ. ಆ ಜಾತ್ರೆ ಜೊತೆಗೆ ಜನರಿಗೆ ಮನರಂಜನೆ ನೀಡಲು ಪಣ ತೊಟ್ಟಿದ್ದು 'ದನ ಕಾಯೋನು' ಚಿತ್ರತಂಡ.
ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ 'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಿಗದಿ ಆಗಿತ್ತು. ನಾಯಕ ನಟ ದುನಿಯಾ ವಿಜಯ್ ಹಾಗೂ ಪ್ರಿಯಾಮಣಿ ರವರನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ಕನಕಪುರವೇ ಅಲ್ಲಿ ನೆರೆದಿತ್ತು. ಆದ್ರೆ, ಜನರ ಆಸೆ ಈಡೇರಲಿಲ್ಲ. [ವಿವಾದದಲ್ಲಿ ಸಿಲುಕಿದ ಯೋಗರಾಜ್ ಭಟ್ಟರ 'ದನ ಕಾಯೋನು']
'ದನ ಕಾಯೋನು' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ನಾಯಕ ನಟ ದುನಿಯಾ ವಿಜಯ್ ಬರಲಿಲ್ಲ. ಇನ್ನೂ ನಾಯಕ ನಟಿ ಪ್ರಿಯಾಮಣಿ ಅಂತೂ ಅತ್ತ ತಿರುಗಿ ನೋಡಲೇ ಇಲ್ಲ. ಅದಕ್ಕೆ ಕಾರಣವೇನು ಎಂಬುದು ಕೂಡ ತಿಳಿದುಬಂದಿಲ್ಲ. ಚಿತ್ರತಂಡ ಈ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. [ಯೋಗರಾಜ್ ಭಟ್ ಮತ್ತು ದುನಿಯಾ ವಿಜಿ ವಿರುದ್ಧ ಕೇಸ್ ದಾಖಲು]
ವಿ.ಹರಿಕೃಷ್ಣ ಸಂಗೀತ ನಿರ್ದೇಶನದ 'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಮಾಡಿ, ಸಮಾರಂಭದಲ್ಲಿ ಮಿಂಚಿದ್ದು 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಮಾತ್ರ.
ತಮ್ಮೂರಿನಲ್ಲೇ, ಅದರಲ್ಲೂ ಜಾತ್ರೆಯ ನಡುವೆಯೇ 'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಆಗ್ಬೇಕು ಎಂಬ ಆಸೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ರವರಿಗಿತ್ತು. ಅವರ ಆಸೆ ಈಡೇರಿತು. ನಿರ್ದೇಶಕ ಯೋಗರಾಜ್ ಭಟ್ ಕೈಜೋಡಿಸಿದ್ರು. ಆದ್ರೆ, ಚಿತ್ರದ ನಾಯಕ ಹಾಗೂ ನಾಯಕಿಯೇ ಅಲ್ಲಿ ಗೈರಾಗಿದ್ದು ಜನರಿಗೆ ಮಾತ್ರ ನಿರಾಸೆ ಆಯ್ತು.