Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೆಂಪಮ್ಮನ ಕೋರ್ಟ್ ಕೇಸ್'ನಲ್ಲಿ 'ಎಡಕ್ಕಲ್ಲು' ಚಂದ್ರಶೇಖರ್
ಚಂದ್ರಶೇಖರ್ ನೆನಪಿದ್ಯಾ? ಅದೇ...'ಎಡಕ್ಕಲ್ಲು ಗುಡ್ಡದ ಮೇಲೆ' ಚಿತ್ರದ ಹಾಟ್ ಅಂಡ್ ಹ್ಯಾಂಡ್ಸಮ್ ನಟ. ''ಸಂತೋಷ....ಸಂಗೀತ...'' ಅಂತ ಹಾಡ್ತಾ ಜಾಲಿಯಾಗಿ ಅಂದು ಬೈಕ್ ರೈಡ್ ಮಾಡಿದ್ದ ಈ ನಟ ಇದೀಗ ಲಾಂಗ್ ಗ್ಯಾಪ್ ನಂತರ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆಯಷ್ಟೆ 'ಪೂರ್ವಾಪರ' ಚಿತ್ರದ ನಿರ್ದೇಶಿಸಿದ್ದ ಚಂದ್ರಶೇಖರ್, ಇದೀಗ 'ಕೆಂಪಮ್ಮನ ಕೋರ್ಟ್ ಕೇಸ್' ಅನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಶೀರ್ಷಿಕೆ ಕೇಳಿದ ತಕ್ಷಣ 'ಕೆಂಪಮ್ಮನ ಕೋರ್ಟ್ ಕೇಸ್' ಕಲಾತ್ಮಕ ಸಿನಿಮಾ ಅಂತ ಭಾವಿಸಬೇಕಿಲ್ಲ. ಇದರಲ್ಲಿ ಕಮರ್ಶಿಯಲ್ ಅಂಶಗಳು ಕೂಡ ಇವೆ. ಹೀಗಾಗಿ ಇದನ್ನ ಬ್ರಿಡ್ಜ್ ಸಿನಿಮಾ ವರ್ಗಕ್ಕೆ ಸೇರಿಸಬಹುದು.
ನಟ 'ಸಿಹಿ ಕಹಿ' ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಈ ಚಿತ್ರದ ನಾಯಕಿ. ನೀನಾಸಂ ಸಿದ್ದಾರ್ಥ್, ತಾನಿಯಾ ಚಂದ್ರಶೇಖರ್, ರಾಧಾ ರಾಮಚಂದ್ರ, ಶ್ರೀನಾಥ್, ಜೈಜಗದೀಶ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಚಂದ್ರಶೇಖರ್ ಬಿಜಿಯಾಗಿದ್ದಾರೆ.