Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ನಯನತಾರಾಗೆ ಅಭಿಮಾನಿಗಳಿಂದ ಮಂದಿರ
ತಮ್ಮ ನೆಚ್ಚಿನ ತಾರೆಗಳ ಹೆಸರಿನಲ್ಲಿ ಮಂದಿರ ಕಟ್ಟುವ ಪರಿಪಾಠ ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಎಲ್ಲರೂ ತಮ್ಮ ನೆಚ್ಚಿನ ತಾರೆಗಳನ್ನು ಹೃದಯವೆಂಬ ಮಂದಿರದಲ್ಲಿ ಆರಾಧಿಸಿದರೆ, ತಮಿಳರು ಮಾತ್ರ ಮಂದಿರ ಕಟ್ಟಿ ಆರಾಧಿಸುವಷ್ಟು ಅಭಿಮಾನ ತೋರುತ್ತಾರೆ.
ಇದುವರೆಗೂ ನಟಿ ಖುಷ್ಬೂ ಹಾಗೂ ನಗ್ಮಾ ಅವರಿಗೆ ಮಂದಿರಗಳನ್ನು ನಿರ್ಮಿಸಿ ಪೂಜೆ, ಪುನಸ್ಕಾರ, ಅರ್ಚನೆ, ಅಷ್ಟೋತ್ತರ ಮಾಡುತ್ತಿದ್ದಾರೆ ಅಭಿಮಾನಿಗಳು. ಇದೀಗ ನಟಿ ನಯನತಾರಾ ಅವರಿಗೂ ಮಂದಿರ ನಿರ್ಮಿಸಲು ಹೊರಟಿದ್ದಾರೆ ಅವರ ಅಭಿಮಾನಿಗಳು.
ಆದರೆ ಅಭಿಮಾನಿಗಳ ಆಸೆಗೆ ನಯನತಾರಾ ತಣ್ಣೀರೆರಚಿದ್ದಾರೆ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನನ್ನನ್ನು ನೀವೆಲ್ಲಾ ದೇವತೆಯಂತೆ ಆರಾಧಿಸುವುದು ಬೇಡ ಎಂದು ನಯವಾಗಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ.
ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಲಿಲ್ಲವೇ, "ಉಳ್ಳವರು ಶಿವಾಲಯ ಮಾಡುವರು ನಾನೆನು ಮಾಡಲಿ ಬಡವನೆಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ".