Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೋದವಾರ 5 ಚಿತ್ರ: ಎಲ್ಲಾ ಗೋವಿಂದಾಯ ನಮಃ
ಬಿಡುಗಡೆಯಾದ ಹೊಸ ಪ್ರೇಮ ಪುರಾಣ, ಸಂಸಾರದಲ್ಲಿ ಗೋಲ್ಮಾಲ್, ಶ್ರೀ ಚೌಡೇಶ್ವರಿ ಮಹಿಮೆ, ಒಲವಿನ ಓಲೆ ಮತ್ತು ಕಟ್ಟ ಕೊನೆಯದಾಗಿ ಆಶಾಕಿರಣಗಳು ಚಿತ್ರದ ನಿರ್ಮಾಪಕರು ಆಕಾಶ ನೋಡುವಂತಾಗಿದೆ ಎನ್ನುತ್ತಿದೆ ಗಾಂಧಿನಗರದ ಬಾಕ್ಸ್ ಆಫೀಸ್ ರಿಪೋರ್ಟ್.
ಇತ್ತೀಚೆಗೆ ಇಂಥದ್ದೊಂದು ದೊಡ್ಡ ಸಾಹಸ ನಮ್ಮ ಚಿತ್ರರಂಗದಲ್ಲಿ ನಡೆದಿರಲಿಲ್ಲ. ವಾರಕ್ಕೆ ಮೂರು-ಎರಡು-ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು ಇದೆ. ಅದರಲ್ಲಿ ಒಂದೋ ಎರಡೋ ಸಕ್ಸಸ್ ಕಂಡು ಉಳಿದವು ಥಿಯೇಟರಿನಿಂದ ಎತ್ತಂಗಡಿ ಆಗಿದ್ದೂ ಇದೆ.
ಆದರೆ ಐದಕ್ಕೆ ಐದೂ ಚಿತ್ರಗಳು ಮನೆ ಸೇರಿದ್ದು ಇದೇ ಮೊದಲ ಬಾರಿಗೆ ಇತಿಹಾಸ ಎನ್ನಬಹುದು. ಖಂಡಿತ ಇದು ವ್ಯಂಗ್ಯವಲ್ಲ, ವಾಸ್ತವತೆ. ಚಿತ್ರರಂಗದಲ್ಲಿ ಈ ಮಟ್ಟದ ಸೋಲು ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ.
ಸಾಯಿಪ್ರಕಾಶ್ ನಿರ್ದೇಶನಕ್ಕೆ ಬೆಲೆ ಸಿಗಲಿಲ್ಲ. ಚೌಡೇಶ್ವರಿಯ ಮಹಿಮೆ ಜನಕ್ಕೆ ಮುಟ್ಟಲಿಲ್ಲ. ಪ್ರೇಮ ಪುರಾಣ ಚಿತ್ರಕ್ಕೆ ಸಂಬಂಧಪಟ್ಟಂತೇ ನಿರ್ಮಾಪಕರು ಪೂಜಾಗಾಂಧಿಯ ಮೇಲೆ ದೂರು ಹೇಳಿದ್ದೇ ಬಂತು.
ಒಲವಿನ ಓಲೆ ಚಿತ್ರದ ನಾಯಕಿ ನೇಹಾ ಪಾಟೀಲ್ ಒಂದೇ ಕಣ್ಣಲ್ಲಿ ನೀರು ಸುರಿಸಿದ್ದೇ ಬಂತು, ಗಾಸಿಪ್ ಮಾಡಿದ್ದೇ ಬಂತು. ಆಶಾಕಿರಣಗಳು ಚಿತ್ರದಲ್ಲಿ ದುನಿಯಾ ರಶ್ಮಿ ರೀ ಎಂಟ್ರಿ ಕೊಟ್ಟಿದ್ದು ಯಾವುದೇ ರೀತಿಯ ಅಡ್ಡ ಅಥವಾ ಉದ್ದ ಪರಿಣಾಮ ಬೀರಲಿಲ್ಲ.
ಹೀಗಾದರೆ ಮುಂದಿನ ಗತಿ ಏನ್ ಶಿವಾ? ಪೋಸ್ಟರ್ ಕಾಸು ಬಂದಿಲ್ಲಾಂದ್ರೆ ಹೆಂಗಪ್ಪಾ...ಜೀವನ.