Don't Miss!
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಈಯರ್ ಎಂಡ್ ಕಳೀರಿ ಖುಷಿ ಖುಷಿಯಾಗಿ
ಗೋಲ್ಡನ್ ಸ್ಟಾರ್ ಗಣೇಶ್-ಗೋಲ್ಡನ್ ಕ್ವೀನ್ ಅಮೂಲ್ಯಾ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ನೋಡಿ ಸೂಪರ್ ಅಂದಿದ್ದವರಿಗೆ ಈ ಸೂಪರ್ ಹಿಟ್ ಜೋಡಿಯನ್ನ ಮತ್ತೆ ತೆರೆಮೇಲೆ ನೋಡೋ ಅವಕಾಶ ಬೇಗನೆ ಬರ್ತಿದೆ.
ಗಣೇಶ್
ಮುಂದಿನ
ಚಿತ್ರ
'ಖುಷಿ
ಖುಷಿಯಾಗಿ'
ಡಿಸೆಂಬರ್
21ಕ್ಕೆ
ಥಿಯೇಟರ್
ಗೆ
ಲಗ್ಗೆ
ಇಡೋ
ಸುದ್ದಿ
ಬಂದಿದೆ.
ಚಿತ್ರ
ಸೆನ್ಸಾರ್
ಮಂಡಳಿಯ
ಮುಂದಿದ್ದು
ಸೆನ್ಸಾರ್
ಮುಗಿಯೋದನ್ನ
ಚಿತ್ರತಂಡ
ಕಾಯ್ತಿದೆ,
ತೆಲುಗಿನ
'ಗುಂಡೆಜಾರಿ
ಗಲ್ಲಂತಯ್ಯಿಂದಿ'
ಚಿತ್ರದ
ರೀಮೇಕ್
ಈ
'ಖುಷಿ
ಖುಷಿಯಲಿ'.
[ಖುಷಿ
ಖುಷಿಯಾಗಿ
ಆಡಿಯೋ
ವಿಮರ್ಶೆ]
ತೆಲುಗಿನಲ್ಲಿ ನಿತ್ಯಾ ಮೆನನ್ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಅಮೂಲ್ಯಾ ಮಾಡ್ತಿದ್ದು ಗೊಲ್ಡನ್ ಸ್ಟಾರ್ ಲವರ್ ಬಾಯ್ ನಿತಿನ್ ಪಾತ್ರದಲ್ಲಿ ಮಸ್ತ್ ಮಜಾ ಕೊಡಲಿದ್ದಾರೆ. 'ಚೆಲುವಿನ ಚಿತ್ತಾರ'ದ ನಂತ್ರ ಸತತ ಯಶಸ್ಸುಗಳಿಂದ ಮುನ್ನುಗ್ತಿರೋ ಗಣೇಶ್-ಅಮೂಲ್ಯಾ ಜೋಡಿಯ ಮತ್ತೊಂದು ಅದಷ್ಟ ಪರೀಕ್ಷೆ ಈ ಈಯರ್ ಎಂಡ್ ನಲ್ಲಿ ನಡೆಯೋ ಸುದ್ದಿ ಬಂದಿದೆ.
ಈ ಅದೃಷ್ಟ ಪರೀಕ್ಷೆಯಲ್ಲಿ ಯಶಸ್ವಿ ಜೋಡಿ ಮೇಲೆ ನಿರೀಕ್ಷೆ ಹೆಚ್ಚಿದೆ ಆದ್ರೆ ಗಣೇಶ್ ಅಮೂಲ್ಯಾ ಅಭಿಮಾನಿಗಳಂತೂ ಈಯರ್ ಎಂಡ್ ನ ಖುಷಿ ಖುಷಿಯಾಗಿ ಕಳೆಯೋ ಸಮಯ ಬಂದಿದೆ. ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಅನೂಪ್ ರುಬೆನ್ಸ್ ಈ ಚಿತ್ರದ ಮೂಲಕ ಕನ್ನಡಕ್ಕೂ ಅಡಿಯಿಡುತ್ತಿದ್ದಾರೆ.
ಅಮೂಲ್ ಬೇಬಿ ಅಮೂಲ್ಯಾ ಮತ್ತು ಆಂಧ್ರ ಬೆಡಗಿ ನಂದಿನಿ ರೈ ಚಿತ್ರದ ನಾಯಕಿಯರು. ಈ ಹಿಂದೆ ‘ಜಂಬೂಸವಾರಿ' ಚಿತ್ರ ನಿರ್ಮಿಸಿದ್ದ ತೆಲುಗಿನ ನಿರ್ಮಾಪಕ ಹರಿಪ್ರಸಾದ್ ರಾವ್ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ತೆಲುಗು ಚಿತ್ರ ಹಾಡುಗಳ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು.