Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಬಾಳಲ್ಲಿ ಮತ್ತೆ ಮೂಡಿದ ಗೆಲುವಿನ ಚಿತ್ತಾರ
ಈ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರವು 'ಚೆಲುವಿನ ಚಿತ್ತಾರ' ಜೋಡಿ ಗಣೇಶ್-ಅಮೂಲ್ಯಾ ಜೋಡಿಯದ್ದು ಎಂಬುದು ಭಾರಿ ವಿಶೇಷತೆ ಪಡೆದಿದೆ. ಜೊತೆಗೆ, ಇನ್ನೊಂದು ವಿಶೇಷತೆಯೆಂದರೆ, ಈ ಚಿತ್ರಕ್ಕೆ ಇತ್ತೀಚಿನ ಯಶಸ್ವಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ. 'ಶಿಶಿರ' ಚಿತ್ರದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮಂಜು ಸ್ವರಾಜ್, ಈ ಚಿತ್ರವನ್ನೂ ಚೆನ್ನಾಗಿ ನಿರೂಪಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಗಣೇಶ್ ಡೈಲಾಗ್ ಹೇಳುವ ಶೈಲಿಗೆ ಬೋಲ್ಡ್ ಆಗದವರು ತೀರಾ ಕಡಿಮೆ. ಡೈಲಾಗ್ ಜೊತೆ ಗಣೇಶ್ ಅವರ ಬಾಡಿ ಲಾಂಗ್ವೇಜ್ ಕೂಡ ಸಾಕಷ್ಟು ಪರಿಣಾಮಕಾರಿ. ಇಂಥ ಗೋಲ್ಡನ್ ಸ್ಟಾರ್, ಇತ್ತೀಚಿಗೆ ತಮ್ಮ 'ಶ್ರಾವಣಿ ಸುಬ್ರಹ್ಮಣ್ಯ' ಸೆಟ್ ನಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿರುವ ಮಾತು ಎಲ್ಲರ ಗಮನಸೆಳೆದಿದೆ. ಗಣೇಶ್ ಸಾಕಷ್ಟು ಪ್ರಾಮಾಣಿಕರು ಹಾಗೂ ಪರಿಶ್ರಮ ಜೀವಿ ಎಂಬುದಕ್ಕೆ ಅವರ ಈ ಮಾತು ಸಾಕ್ಷಿಯಾಗಿದೆ...
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಗಣೇಶ್, "ನಟನೆಯಲ್ಲಿ ನಾನಿನ್ನೂ ಯುಕೆಜಿ. ಚಿತ್ರರಂಗದಲ್ಲಿ ಕಲಿಯುವಂತದ್ದು ತುಂಬಾ ಇದೆ. ನಾನು ಪ್ರತಿ ದೃಶ್ಯದಲ್ಲೂ ಹೊಸತನ್ನು ಕಲಿಯುತ್ತಿದ್ದೇನೆ. ಪ್ರತಿ ಚಿತ್ರದಲ್ಲೂ ಬೆಳೆಯಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅಮೂಲ್ಯಾ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕೆ 'ಗೋವಿಂದಾಯ ನಮಃ' ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಕೆ ಎ ಸುರೇಶ್ ನಿರ್ಮಾಪಕರು.
ಹತ್ತು ವರ್ಷಗಳ ಹಿಂದೆ ತೆಲುಗಿನಲ್ಲಿ ಬಂದಿದ್ದ 'ಇಟ್ಲು ಶ್ರಾವಣಿ ಸುಬ್ರಮಣ್ಯಂ' ಸಿನಿಮಾಗೂ ತಮ್ಮ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ನಿರ್ದೇಶಕ ಮಂಜು ಸ್ವರಾಜ್. ಇನ್ನು, ತೆಲುಗಿನಲ್ಲಿ ಇದೀಗ ಪ್ರಸಾರ ಕಾಣುತ್ತಿರುವ 'ಶ್ರಾವಣಿ ಸುಬ್ರಮಣ್ಯಂ' ಧಾರಾವಾಹಿಗೂ ಇದಕ್ಕೂ ಯಾವುದೇ ನಂಟು ಇಲ್ಲವಂತೆ. ಹೆಸರಿನಲ್ಲಿ ಮಾತ್ರ ಹೋಲಿಕೆ ಅಷ್ಟೇ.
"ನನ್ನ ನಿರ್ದೆಶನದ ಈ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ಕಥೆಯ ನಾಯಕನ ಹೆಸರು ಬಾಲಸುಬ್ರಹ್ಮಣ್ಯ ಹಾಗೂ ನಾಯಕಿ ಹೆಸರು ಶ್ರಾವಣಿ. ಆದರೆ 'ಬಾಲ'ವನ್ನು ಕಟ್ ಮಾಡಿ ಸುಬ್ರಹ್ಮಣ್ಯ ಹಾಗೂ ಶ್ರಾವಣಿ ಎಂಬುದನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಿಕೊಂಡಿದ್ದೇನೆ. ಈ ಚಿತ್ರದ ನಾಯಕ ಗಾಯಕ ಹಾಗೂ ಗಿಟಾರ್ ವಾದಕ. ಗಣೇಶ್ ಶೈಲಿಯ ಉದ್ದುದ್ದ ಸಂಭಾಷಣೆಗಳು ಈ ಚಿತ್ರದಲ್ಲೂ ಹೇರಳವಾಗಿದೆ" ಎಂದಿದ್ದಾರೆ ಮಂಜು ಸ್ವರಾಜ್.
'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕಾಗಿ ಗಣೇಶ್ ತಮ್ಮ ಎಂದಿನ ಕೇಶ ವಿನ್ಯಾಸಕ್ಕೆ ಕತ್ತರಿ ಹಾಕಿ ಹೊಸ ವಿನ್ಯಾಸದೊಂದಿಗೆ ಮಿಂಚುತ್ತಿದ್ದಾರೆ. ಇನ್ನು ಅಮೂಲ್ಯಾ ಕೂಡ ಚೆಲುವಿನ ಚಿತ್ತಾರಕ್ಕಿಂತಲೂ ಚೆಲುವಿನ ಗಣಿಯಾಗಿ ಕಂಗೊಳಿಸುತ್ತಿದ್ದಾರೆ. ಇದು ಮುಗಿದ ತಕ್ಷಣ ಗಣೇಶ್ ಚಿತ್ರ 'ಆಟೋರಾಜ' ಚಿತ್ರೀಕರಣ ಶುರು. ಒಟ್ಟಿನಲ್ಲಿ ಈ ವರ್ಷ ಗಣೇಶ್ ಅವರಿಗೆ ಶುಕ್ರದೆಸೆ ಹಾಗೂ ಅವರ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ ಎಂಬ ವಾತಾವರಣ ನಿರ್ಮಾಣವಾಗಿದೆ. (ಒನ್ ಇಂಡಿಯಾ ಕನ್ನಡ)