Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಕುಂತ್ಲೆ' ಜೊತೆಯಲ್ಲಿ 'ದೇಸಿ ದೊರೆ' ಹಂಸಲೇಖ ಹೊಸ ಸಾಹಸ!
ನಾದಬ್ರಹ್ಮ ಹಂಸಲೇಖ ರವರು ಗೀತೆ ರಚನಾಕಾರರಾಗಿ, ಸಂಗೀತ ನಿರ್ದೇಶಕರಾಗಿ, ಕಥೆ-ಚಿತ್ರಕಥೆ-ಸಂಭಾಷಣೆ ಬರಹಗಾರರಾಗಿ ಕನ್ನಡ ಸಿನಿ ಜಗತ್ತಿಗೆ ನೀಡಿದ ಕೊಡುಗೆ ಅಪಾರ. ಅಲ್ಲದೇ ಇಂದು ಚಂದನವನದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿರುವ ವಿ, ಮನೋಹರ್, ವಿ.ಹರಿಕೃಷ್ಣ, ಗೀತೆ ರಚನಾಕಾರರಾದ ವಿ.ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಮತ್ತು ಮುಂತಾದವರಿಗೆ ಮಾರ್ಗದರ್ಶನ ನೀಡಿದ್ದಾರೆ.[ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ]
ಈ ಹಿಂದೆ ತಮ್ಮ ಮಗನ ಚಿತ್ರವೊಂದಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಹಂಸಲೇಖ ರವರು ಈಗ ದೀರ್ಘಕಾಲದ ನಂತರ ಮತ್ತೆ ನಿರ್ದೇಶಕರಾಗಿ ಸಾಲು ಸಾಲು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ದೇಸಿ ದೊರೆ ಹಂಸಲೇಖ ರವರು ನಿರ್ದೇಶನ ಮಾಡಲು ಮುಂದಾಗಿರುವ ಆ ಸಿನಿಮಾಗಳು ಯಾವುವು ತಿಳಿಯಲು ಮುಂದೆ ಓದಿರಿ..
ಮತ್ತೆ ನಿರ್ದೇಶನಕ್ಕೆ ಮುಂದಾದ ಹಂಸಲೇಖ
ಈ ಹಿಂದೆ ತಮ್ಮ ಮಗನ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದ ಹಂಸಲೇಖ ರವರು ಈಗ ಮತ್ತೆ ದೀರ್ಘಕಾಲದ ನಂತರ ಡೈರೆಕ್ಟರ್ ಕ್ಯಾಪ್ ತೊಡಲು ಸಿದ್ದರಾಗಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಒಂದಲ್ಲಾ ಎರಡಲ್ಲ ಅವರು ಮೂರು ಸಾಲು ಸಾಲು ಚಿತ್ರಗಳಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.
ಇಂಟರೆಸ್ಟಿಂಗ್ ಆಗಿದೆ ಮೊದಲನೇ ಚಿತ್ರ
ಸದ್ಯದಲ್ಲೇ ಹಂಸಲೇಖರವರು ಆಕ್ಷನ್ ಹೇಳಲಿರುವ ಮೊದಲ ಸಿನಿಮಾ ಹೆಸರು 'ಶಕುಂತ್ಲೆ'. 'ಪ್ರೇಮಲೋಕ' ಚಿತ್ರದ ಹಾಡಿಗೆ ಗೀತೆ ರಚಿಸಿದ್ದ ಹಂಸಲೇಖ ರವರು ಹಾಡೊಂದರಲ್ಲಿ 'ನೀನೇನಾ ಶಂಕುತಲಾ' ಎಂದು ಬರೆದಿದ್ದರು. ಇಂದು ಅದೇ ಹೆಸರನ್ನು ಟೈಟಲ್ ಆಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ.
'ಶಕುಂತ್ಲೆ' ಚಿತ್ರೀಕರಣ ಯಾವಾಗ?
ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿರುವ ಹಂಸಲೇಖ ರವರು 'ಶಕುಂತ್ಲೆ' ಚಿತ್ರವನ್ನು ನಾಳೆ(ಜೂನ್ 23) ಇಂದಲೇ ಚಿತ್ರೀಕರಣ ಶುರು ಮಾಡುತ್ತಿದ್ದಾರೆ. ಅಲ್ಲದೇ ಈ ವಾರದಲ್ಲಿಯೇ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಲಿದ್ದಾರಂತೆ.
ಇತರೆ ಎರಡು ಸಿನಿಮಾಗಳ ಹೆಸರೇನು?
ನಾದಬ್ರಹ್ಮ ರವರು 'ಶಕುಂತ್ಲೆ' ನಂತರ 'ಐಯೋರಾ' ಮತ್ತು 'ಗಿಟಾರ್' ಎಂಬ ಮತ್ತೆರಡು ಚಿತ್ರಗಳನ್ನು ನಿರ್ದೇಶನ ಮಾಡಲಿದ್ದಾರಂತೆ.
'ಐಯೋರಾ' ಚಿತ್ರದ ವಿಶೇಷತೆ
'ಐಯೋರಾ' ಚಿತ್ರದಲ್ಲಿ ಐದು ಕತೆಗಳಿರಲಿದ್ದು, ಎರಡು ಕತೆಗಳನ್ನು ಹಂಸಲೇಖ ರವರೇ ಬರೆಯುತ್ತಾರಂತೆ. ಉಳಿದ ಮೂರು ಕಥೆಗಳನ್ನು ಇತರರು ಬರೆಯಲಿದ್ದಾರಂತೆ.
'ಗಿಟಾರ್' ಸಂಗೀತ ಪ್ರಧಾನ ಚಿತ್ರ
ಹಂಸಲೇಖ ಆಕ್ಷನ್ ಕಟ್ ಹೇಳಲಿರುವ 'ಗಿಟಾರ್' ಸಿನಿಮಾ ಸಂಗೀತ ಪ್ರದಾನ ಚಿತ್ರವಾಗಿರಲಿದ್ದು, ವಿಶ್ವ ಮಟ್ಟದಲ್ಲಿ ಗಮನಸೆಳೆಯಲಿದೆಯಂತೆ. ಈ ಚಿತ್ರದ ಸಂಗೀತಕ್ಕಾಗಿ ನಾದಬ್ರಹ್ಮ ಒಂಬತ್ತು ತಿಂಗಳಿನಿಂದ ವರ್ಕ್ ಮಾಡಿದ್ದಾರಂತೆ. ಅಲ್ಲದೇ ಹೊಸ ರೀತಿಯ ವಾದ್ಯಗಳನ್ನು ಈ ಚಿತ್ರದಲ್ಲಿ ಬಳಕೆ ಮಾಡಲಾಗುತ್ತದೆಯಂತೆ.
ನಿರ್ಮಾಪಕರು ಯಾರು?
ಹಂಸಲೇಖ ರವರು ನಿರ್ದೇಶನ ಮಾಡಲು ಮುಂದಾಗಿರುವ ಮೂರು ಚಿತ್ರಗಳನ್ನು ನಿರ್ಮಾಣ ಮಾಡುವವರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ. ಅಲ್ಲದೇ ಚಿತ್ರದ ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರಂತೆ.