Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಠಾರಿವೀರ ಚಿತ್ರದಲ್ಲಿ ಹಿಂದು ದೇವತೆಗಳಿಗೆ ಅಪಮಾನ
'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿ, ಪೌರಾಣಿಕ ಪಾತ್ರ ಹಾಗೂ ಸಂಭಾಷಣೆಗಳ ಮೂಲಕ ಹಿಂದೂ ದೇವತೆಗಳನ್ನುಅವಮಾನಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸಿದೆ.
ಚಲನಚಿತ್ರದಲ್ಲಿ ಹಿಂದೂ ದೇವತೆಗಳನ್ನು ಪುರಾಣದ ಆಧಾರದಲ್ಲಿನ ಪಾತ್ರಗಳ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ. ಇದರಲ್ಲಿ ಕೇವಲ ಪಾತ್ರಗಳಲ್ಲದೇ ಅನೇಕ ಸಂಭಾಷಣೆಗಳ ಮೂಲಕವೂ ದೇವತೆಗಳನ್ನು ಹೀನ ಮಟ್ಟದಲ್ಲಿ ವಿಡಂಬನೆ ಮಾಡಲಾಗಿದೆ ಎಂದು ಸಮಿತಿ ದೂರಿದೆ. ಹಿಂದೂ ಜನಜಾಗೃತಿ ಸಮಿತಿ ಪಟ್ಟಿ ಮಾಡಿರುವ ಚಿತ್ರದಲ್ಲಿನ ಕೆಲ ಅವಹೇಳನಕಾರಿ ಅಂಶಗಳು ಮುಂದಿನಂತಿವೆ.
1. 'ಶ್ರೀರಾಮ ಮತ್ತು ಶ್ರೀಕೃಷ್ಣನೇ ತಪ್ಪು ಮಾಡಿರುವಾಗ, ಅಲ್ಲದೇ ತಪ್ಪುಗಳನ್ನು ಮಾಡಿಸಿರುವಾಗ ಅವರಿಗೇಕೆ ಶಿಕ್ಷೆ ನೀಡಲಿಲ್ಲ. ಮನುಷ್ಯರಿಗೆ ಮಾತ್ರ ಶಿಕ್ಷೆನಾ' ಎಂಬಂತಹ ಹೇಳಿಕೆಗಳ ಮೂಲಕ ದೇವತೆಗಳೊಂದಿಗೆ ಹುಲು ಮಾನವನ ತುಲನೆ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಅಳಿಸಲಾರದಂತಹ ಆಘಾತ ಮಾಡಲಾಗಿದೆ.
2. ಚಿತ್ರಗುಪ್ತನು ಪ್ರಾಣಿಮಾತ್ರರ ಪುಣ್ಯಪಾಪದ ಲೆಕ್ಕಾಚಾರವನ್ನಿಟ್ಟು ಅದರಂತೆ ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಹೀಗಿರುವಾಗ ಇದರಲ್ಲಿ 'ಚಿತ್ರಗುಪ್ತ' ಹಾಗೂ ಸ್ತ್ರೀಯೊಬ್ಬಳು ನಡುವಿನ ಅಸಭ್ಯ ವರ್ತನೆ, ಚಿತ್ರಗುಪ್ತನು ಸ್ತ್ರೀಯೊಬ್ಬಳನ್ನು ನೋಡಿ ಕಣ್ಣು ಹೊಡೆಯುವುದು' ಇಂತಹ ರೀತಿಯಲ್ಲಿ ಅವರ ಸ್ಥಾನಕ್ಕೇ ಅವಹೇಳನ ಮಾಡಲಾಗಿದೆ.