Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಲ್ ಸ್ಟಾರ್ ಉಪೇಂದ್ರ ಬ್ರಹ್ಮ ಮೊದಲರ್ಧ ಹೇಗಿದೆ?
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಅವರ ಕಾಂಬಿನೇಷನ್ ಚಿತ್ರ ಎಂದ ಮೇಲೆ ನಿರೀಕ್ಷೆಗಳು ಸಾಕಷ್ಟು ಇದ್ದವು. ಅದಕ್ಕೆ ತಕ್ಕಂತೆ ಚಿತ್ರ ಇದೆಯೇ ಇಲ್ಲವೇ ಎಂಬುದು ಮೊದಲರ್ಧದಲ್ಲೇ ನಿರ್ಧರಿಸಲು ಸಾಧ್ಯವಿಲ್ಲ. ಇಲ್ಲಿರುವುದು ಕೇವಲ ಅನಿಸಿಕೆ ಎಂಬುದು ಗಮನಕ್ಕಿರಲಿ.
1970 ರ ದಶಕದಿಂದ ಆರಂಭವಾಗುವ ಚಿತ್ರ ಮಲೇಷ್ಯಾದಿಂದ ಇಂಡಿಯಾಗೆ ಹಾಗೂ ಅಲ್ಲಿಂದಿಲ್ಲಿಗೆ ಇಲ್ಲಿಂದ ಅಲ್ಲಿಗೆ ಹರಿದಾಡುತ್ತಾ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಲೇಷ್ಯಾದಲ್ಲಿ ಚಿತ್ರೀಕರಣಗೊಂಡಿರುವ ಎರಡು ಹಾಡುಗಳು ನೋಡಲು ಚೆನ್ನಾಗಿವೆ. ಕಣ್ಣಿಗೆ ಸೊಗಸು, ಕಿವಿಗೆ ಒಂಚೂರು ಇಂಪು.
ಸಯ್ಯಾಜಿ ಶಿಂಧೆ ಕನ್ನಡ ಅಷ್ಟಷ್ಟು ಮಾತ್ರವೆ. ರಂಗಾಯಣ ರಘು ಕಾಮಿಡಿ ಮೊದಲರ್ಧ ವರ್ಕ್ ಔಟ್ ಆಗಿದೆ. ಬ್ರಹ್ಮನ ಉದ್ದೇಶ ಏನು? ಅವನ್ಯಾರು ಎಂಬುದು ಗೊತ್ತಾಗಬೇಕಾದರೆ ಕೊನೆಯತನಕ ಕಾಯಲೇಬೇಕು.
ರಂಗಾಯಣ ರಘು ಅದೃಷ್ಟವಂತನಾಗಿ ಮೊದಲರ್ಧ ಕಾಮಿಡಿಯಿಂದ ತುಂಬಿ ತುಳುಕಿದೆ. ಮೊದಲರ್ಧ ನೋಡಿದ ಮೇಲೆ ಇದು ಚಂದ್ರು ಚಿತ್ರ ಅನ್ನಿಸುವುದಕ್ಕಿಂತ ಉಪ್ಪಿ ಚಿತ್ರ ಅನ್ನಿಸುತ್ತದೆ.
ಚಂದ್ರು ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಅವರ ಮ್ಯಾಜಿಕ್ ಗಿಂತ ಉಪ್ಪಿ ಮ್ಯಾಜಿಕ್ ಹೆಚ್ಚಾಗಿ ಕಾಣುತ್ತದೆ. ಒಟ್ತಾರೆಯಾಗಿ ಚಂದೆಉ ಏನು ಹೇಳಲು ಹೊರಟಿದ್ದಾರೆ ಎಂಬುದು ಮಾತ್ರ ಕುತೂಹಲವಾಗಿದೆ.