Don't Miss!
- News ವಿರಾಟ್ ಕೊಹ್ಲಿ ಬಳಿ ಬಂದ ಅಭಿಮಾನಿಯನ್ನು ಕಾಲಲ್ಲಿ ತುಳಿದ ಸೆಕ್ಯೂರಿಟಿ ಸಿಬ್ಬಂದಿ-ರೂಪೇಶ್ ರಾಜಣ್ಣ ಹೇಳಿದ್ದೇನು?
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೆವರೇಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದ್ರೆ!
ಕೆಸಿಎನ್ ಕುಮಾರ್ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಈ ಚಿತ್ರದಲ್ಲಿ, ಆರ್ಜಿವಿ ಅವರ ಫೆವರಿಟ್ ನಟರಲ್ಲಿ ಒಬ್ಬರಾಗಿರುವ ಕನ್ನಡ ನಟ ಸುದೀಪ್ ಅವರು ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ವರ್ಮಾ ಅವರು ಕನ್ನಡ ಚಿತ್ರವನ್ನು ನಿರ್ದೇಶಿಸುವುದು ಬಿಡುವುದು ಸುದೀಪ್ ಅವರ ಮೇಲೆಯೇ ನಿರ್ಭರವಾಗಿದೆ.
ಇನ್ನೂ ಹೆಸರಿಡದ ಚಿತ್ರದ ಚಿತ್ರಕಥೆ, ನಟವರ್ಗ, ಚಿತ್ರೀಕರಣದ ಶೆಡ್ಯೂಲ್, ತಾಂತ್ರಿಕ ವರ್ಗ ಯಾವುದೂ ಫೈನಲೈಸ್ ಆಗಿಲ್ಲ. ವರ್ಮಾ ಅವರು ಕನ್ನಡ ಚಿತ್ರವನ್ನು ನಿರ್ದೇಶಿಸಬೇಕೆಂಬುದು ಸುದೀಪ್ ಅವರು ಬಹುಕಾಲದ ಇಚ್ಛೆ. ಸುದೀಪ್ ಮನಸು ಮಾಡಿದರೆ ವರ್ಮಾ ಅವರನ್ನು ಕನ್ನಡಕ್ಕೆ ಎಳೆದು ತರುವುದು ಅಷ್ಟು ಕಷ್ಟದ ಕೆಲಸವಾಗಲಿಕ್ಕಿಲ್ಲ ಎಂದು ಕೆಸಿಎನ್ ಕುಮಾರ್ ಅವರು ಹೇಳಿದ್ದಾರೆ.
ಒಂದು ಮೂಲದ ಪ್ರಕಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಗಿ ಮಿಂಚುತ್ತಿರುವ ದರ್ಶನ್ ಅವರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಸುದೀಪ್ ಅವರು ಆರಂಭದಲ್ಲಿ ದನಿ ನೀಡಿದ್ದಾರೆ. ಆದರೆ, ವರ್ಮಾ ಎಂದು ಕನ್ನಡಕ್ಕೆ ಎಂದು ಅಡಿಯಿಡಲಿದ್ದಾರೆ ಎಂಬುದು ಸದ್ಯಕ್ಕೆ ನಿಖರವಾಗಿ ಉತ್ತರಿಸಲಾಗದ ಪ್ರಶ್ನೆಯಾಗಿದೆ.
ಸದ್ಯಕ್ಕೆ ಸುದೀಪ್ ಅವರು ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ 'ವರದನಾಯಕ' ಮತ್ತು ಭಾರೀ ನಿರೀಕ್ಷೆ ಇಟ್ಟುಕೊಂಡಿರುವ 'ಬಚ್ಚನ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಾರೀ ಬಿಜಿಯಾಗಿದ್ದಾರೆ. ಬಚ್ಚನ್ ಬಿಡುಗಡೆಯಾದ ನಂತರವೇ ರಾಮ್ ಗೋಪಾಲ್ ವರ್ಮಾ ಅವರನ್ನು ಕನ್ನಡಕ್ಕೆ ಕರೆತರುವ ಬಗ್ಗೆ ಸುದೀಪ್ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ.
ಫೂಂಕ್ ಚಿತ್ರದ ಮುಖಾಂತರ ಸುದೀಪ್ ಅವರನ್ನು ಬಾಲಿವುಡ್ಗೆ ಪರಿಚಯಿಸಿದವರು ರಾಮ್ ಗೋಪಾಲ್ ವರ್ಮಾ. ನಂತರ ವರ್ಮಾ ಅವರೊಡನೆ ರಕ್ತ್ ಚರಿತ್ರ ಮತ್ತು ರಣ್ ಹಿಂದಿ ಚಿತ್ರಗಳಲ್ಲಿ ನಟಿಸಿ ಸುದೀಪ್ ನಟಿಸಿದರು. 'ಈಗ' ಚಿತ್ರ ಸೂಪರ್ ಡೂಪರ್ ಹಿಟ್ ಆದ ಮೇಲೆ ಸುದೀಪ್ ತಾರಾಮೌಲ್ಯ ಹೆಚ್ಚಾಗಿದ್ದು, ಸುದೀಪ್ ಕೇಳಿದರೆ ಕನ್ನಡಕ್ಕೆ ರಾಮ್ ಗೋಪಾಲ್ ವರ್ಮಾ ಬರಲಾರರೆ ಎಂಬ ಮಾತು ಕೇಳಿಬರುತ್ತಿದೆ.