Don't Miss!
- Finance ಅನಂತ್ ಅಂಬಾನಿ ರಾಧಿಕ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಖರ್ಚಾದ ಹಣ?
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರಿಶಿನ ಶಾಸ್ತ್ರ ಮುಕ್ತಾಯ: ಆದಿಚುಂಚನಗಿರಿ ತಲುಪಿದ ಅಮ್ಮು-ಜಗ್ಗಿ ಕುಟುಂಬ
ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಮೆಹೆಂದಿ(ಮದರಂಗಿ) ಶಾಸ್ತ್ರ ಮುಗಿಸಿರುವ ನಟಿ ಅಮೂಲ್ಯಗೆ ಇಂದು ಅರಿಶಿನ ಶಾಸ್ತ್ರ ನೇರವೇರಿದೆ.[ಅಮೂಲ್ಯ ಮೆಹೆಂದಿ ಶಾಸ್ತ್ರ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಸ್ತ್ ಡ್ಯಾನ್ಸ್]
ಮದುಮಗಳು ಅಮೂಲ್ಯ ರವರಿಗೆ ಶೇಷಾದ್ರಿಪುರಂ ನಲ್ಲಿರುವ ಅವರ ಮನೆಯಲ್ಲಿ ಇಂದು ಕುಟುಂಬದವರು ಬೆಳಿಗ್ಗೆಯಿಂದಲೇ ಹಲವು ಸಂಪ್ರದಾಯಿಕ ಶಾಸ್ತ್ರಗಳನ್ನು ಶುರು ಮಾಡಿ ಅರಿಶಿನ ಶಾಸ್ತ್ರ ಪೂರೈಸಿದರು. ಹಾಗೆಯೇ ವರ ಜಗದೀಶ್ ಮನೆಯಲ್ಲಿಯೂ ವಾದ್ಯ ಮೇಳ ಝೇಂಕಾರದೊಂದಿಗೆ ಹಲವು ಶಾಸ್ತ್ರಗಳನ್ನು ಮಾಡಲಾಯಿತು.
ಅರಿಶಿನ ಶಾಸ್ತ್ರ ಪೂರೈಸಿದ ನಂತರ ಅಮೂಲ್ಯ ಮತ್ತು ಜಗದೀಶ್ ಕುಟುಂಬದವರು ಕಲ್ಯಾಣ ನಡೆಯುವ ಸ್ಥಳ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಕ್ಷೇತ್ರಕ್ಕೆ ಹೋಗಿ ತಲುಪಿದ್ದಾರೆ. ನಾಳೆ ಅಮ್ಮು ಮತ್ತು ಜಗ್ಗಿ ಮದುವೆ ಹಿಂದೂ ಸಂಪ್ರದಾಯದಂತೆ ಆದಿ ಚುಂಚನಗಿರಿಯ ಕಾಲಬೈರವೇಶ್ವರ ಸನ್ನಿಧಿಯಲ್ಲಿ ನಡೆಯಲಿದೆ. ವಧು-ವರರು ಹಸಮಣೆ ಏರಲಿರುವ ಸಂದರ್ಭಕ್ಕೆ ಇಬ್ಬರ ಕುಟುಂಬದವರು, ಸಂಬಂಧಿಗಳು, ನಟ ಗಣೇಶ್- ಶಿಲ್ಪಾ ಗಣೇಶ್ ಮತ್ತು ಇತರೆ ಆಹ್ವಾನಿತರು ಸಾಕ್ಷಿಯಾಗಲಿದ್ದಾರೆ.