Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿ.ಕೆ.ರವಿ ರಿಯಲ್ ಲೈಫ್ ಸ್ಟೋರಿ ಇದೇನಾ?
ನಿಷ್ಠಾವಂತ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಪ್ರಕರಣ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಇಡೀ ವಿಧಾನಸೌಧವನ್ನೇ ಅಲುಗಾಡಿಸುತ್ತಿರುವ ಈ ಪ್ರಕರಣ ಸ್ಯಾಂಡಲ್ ವುಡ್ ನಲ್ಲಂತೂ ಹಾಟ್ ಟಾಪಿಕ್ ಆಗಿದೆ.
ಒಂದ್ಕಡೆ, ದಕ್ಷ ಅಧಿಕಾರಿ ಡಿ.ಕೆ.ರವಿ ಸಾವು ಪ್ರಕರಣ ಸಿಬಿಐಗೆ ವಹಿಸಬೇಕು ಅನ್ನುವ ಕೂಗು ಹೆಚ್ಚಾಗುತ್ತಿದೆ. ಆದ್ರೆ, ಗಾಂಧಿನಗರದಲ್ಲಿ ಮಾತ್ರ ಡಿ.ಕೆ.ರವಿ ಲೈಫ್ ಸ್ಟೋರಿಯನ್ನಿಟ್ಟುಕೊಂಡು ಸಿನಿಮಾ ಮಾಡೋಕೆ ಸಜ್ಜಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ.
ನಿನ್ನೆಯಷ್ಟೇ 'ಡಿ.ಕೆ.ರವಿ' ಟೈಟಲ್ ರಿಜಿಸ್ಟರ್ ಮಾಡಿಸುವುದಕ್ಕೆ ಅನೇಕ ನಿರ್ಮಾಪಕರುಗಳು ಕ್ಯೂ ನಿಂತಿದ್ದರು. ಆದ್ರೀಗ, ವಾಣಿಜ್ಯ ಮಂಡಳಿ ಅಡ್ಡದಿಂದ ಬಂದಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಪ್ರಾಮಾಣಿಕ ಅಧಿಕಾರಿಯ ಕಥೆ ಹೊತ್ತಿರುವ ಚಿತ್ರವೊಂದು ಏಪ್ರಿಲ್ ನಲ್ಲಿ ಸೆಟ್ಟೇರಲಿದೆ. ಮುಂದೆ ಓದಿ.....
ಬೆಳ್ಳಿತೆರೆ ಮೇಲೆ 'ಡಿ.ಕೆ.ರವಿ' ಲೈಫ್ ಸ್ಟೋರಿ..?
ಭೂ ಮಾಫಿಯಾ, ಮರಳು ದಂಧೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ನಿಗೂಢವಾಗಿ ಸಾವನ್ನಪ್ಪಿರುವ ಡಿ.ಕೆ.ರವಿ ಯಶೋಗಾಥೆ ಇದೀಗ ಅನೇಕ ನಿರ್ಮಾಪಕರುಗಳ ಅಚ್ಚುಮೆಚ್ಚಿನ ಕಥೆಯಾಗಿದೆ. ಡಿ.ಕೆ.ರವಿ ನಿಜ ಬದುಕನ್ನ ತೆರೆಮೇಲೆ ತರುವುದಕ್ಕೆ ಪ್ರೊಡ್ಯೂಸರ್ಸ್ ನಾ ಮುಂದು, ತಾ ಮುಂದು ಅಂತ ಮುಗಿಬೀಳ್ತಿದ್ದಾರೆ. ಇದೇ ಗ್ಯಾಪ್ ನಲ್ಲಿ 'ಸರ್ಕಾರಿ ಕೆಲಸ ದೇವರ ಕೆಲಸ' ಅನ್ನುವ ಸಿನಿಮಾ ಅನೌನ್ಸ್ ಆಗಿದೆ. [ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗೆ ನೂಕುನುಗ್ಗಲು]
'ಸರ್ಕಾರಿ ಕೆಲಸ ದೇವರ ಕೆಲಸ'
'ಡಿ.ಕೆ.ರವಿ' ಟೈಟಲ್ ಪಡೆದುಕೊಳ್ಳುವುದಕ್ಕೆ ಅನೇಕ ನಿರ್ಮಾಪಕರುಗಳು ಒದ್ದಾಡುತ್ತಿರುವಾಗಲೇ, 'ಸರ್ಕಾರಿ ಕೆಲಸ ದೇವರ ಕೆಲಸ' ಅನ್ನುವ ಸಿನಿಮಾ ಅನೌನ್ಸ್ ಆಗಿದೆ. ಸಾಲದಕ್ಕೆ 'ಎಲ್ರೂ ---- ನನ್ ಮಕ್ಳು' ಅಂತ ಕ್ಯಾಪ್ಷನ್ ಕೂಡ ಚಿತ್ರಕ್ಕಿದೆ. ಖಡಕ್ ಆಫೀಸರ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸುತ್ತಿದ್ದಾರೆ.
ಡಿ.ಕೆ.ರವಿ ಪಾತ್ರದಲ್ಲಿ ರವಿಶಂಕರ್ ಗೌಡ?
ಹುರಿಗಟ್ಟಿದ ಮೀಸೆ, ಕಪ್ಪು ಕನ್ನಡಕ ಧರಿಸಿ ಥೇಟ್ ಡಿ.ಕೆ.ರವಿಯಂತೆ ರವಿಶಂಕರ್ ಗೌಡ ಪೋಸ್ ಕೊಟ್ಟಿರುವುದರಿಂದ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರದ ಬಗ್ಗೆ ಆಗಲೇ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ.
ರವಿಶಂಕರ್ ಗೌಡ ಹೇಳುವುದೇನು?
''ಸರ್ಕಾರಿ ಕೆಲಸ ದೇವರ ಕೆಲಸ' ಒಂದೊಳ್ಳೆ ಸಿನಿಮಾ. ಭ್ರಷ್ಟರ ವಿರುದ್ಧ ಸಮರ ಸಾರುವ ಸಿನಿಮಾ. ನಾನು ಖಡಕ್ ಆಫೀಸರ್ ರೋಲ್ ಪ್ಲೇ ಮಾಡುತ್ತಿದ್ದೇನೆ. ನಿಷ್ಠಾವಂತ ಅಧಿಕಾರಿಯ ಸುತ್ತ ನಡೆಯುವ ಕಥೆ ಚಿತ್ರದ ಹೂರಣ. ಇಷ್ಟು ಬಿಟ್ಟು ಬಾಕಿ ಏನನ್ನೂ ಬಹಿರಂಗಪಡಿಸುವ ಹಾಗಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಟ ರವಿಶಂಕರ್ ಗೌಡ ಹೇಳಿದರು.
ಚಿತ್ರಕ್ಕೆ ಅಶ್ವಿನಿ ರಾಮ್ ಪ್ರಸಾದ್ ಬಂಡವಾಳ
'ಜೋಗಿ', 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರಗಳನ್ನ ನಿರ್ಮಿಸಿದ್ದ ಅಶ್ವಿನಿ ಆಡಿಯೋ ಕಂಪನಿ ಮಾಲೀಕ ರಾಮ್ ಪ್ರಸಾದ್, 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ 'ಪರೀಕ್ಷೆ' ಅನ್ನೋ ಸಿನಿಮಾ ನಿರ್ದೇಶಿಸಿದ್ದ ರವೀಂದ್ರ, ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ಶಿರಡಿಯಲ್ಲಿ ಸ್ಕ್ರಿಪ್ಟ್ ಪೂಜೆಯಲ್ಲಿ ತೊಡಗಿರುವ ಚಿತ್ರತಂಡ, ಏಪ್ರಿಲ್ 2 ರಂದು ಶೂಟಿಂಗ್ ಗೆ ಚಾಲನೆ ನೀಡಲಿದೆ.