Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್, ಕೋಮಲ್ ತಂದೆ ಶಿವಲಿಂಗೇಗೌಡ ದೈವಾಧೀನ
ಕನ್ನಡದ ಖ್ಯಾತ ಹಾಸ್ಯನಟರಾದ ಜಗ್ಗೇಶ್ ಹಾಗೂ ಕೋಮಲ್ ಕುಮಾರ್ ಅವರ ತಂದೆ ಶಿವಲಿಂಗೇಗೌಡ ಅವರು ನಿನ್ನೆ (29 ಸೆಪ್ಟೆಂಬರ್ 2012) ಸಂಜೆ 4.45ರ ಸಮಯದಲ್ಲಿ ಬೆಳ್ಳೂರಿನ ಶ್ರೀಆದಿಚುಂಚನಗಿರಿ (ಬಿಜಿಎಸ್) ಆಸ್ಪತ್ರೆಯಲ್ಲಿ ದೈವಾಧೀನರಾದರು. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸದೇ ಕೆಲವು ದಿನಗಳಾಗಿದ್ದವು.
ಎಂಭತ್ತಾರು ವಯಸ್ಸಿನ ಶಿವಲಿಂಗೇಗೌಡರಿಗೆ ಜಗ್ಗೇಶ್, ಕೋಮಲ್ ಸೇರಿದಂತೆ ಮೂರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶಿವಲಿಂಗೇಗೌಡ ಅವರ ಅಂತ್ಯಕ್ರಿಯೆ ಇಂದು (30 ಸೆಪ್ಟೆಂಬರ್ 2012) ಮಧ್ಯಾಹ್ನ 1.30ಕ್ಕೆ ತುಮಕೂರು ಮಾಯಸಂದ್ರದ ಜಡೆಮಾಯಸಂದ್ರದಲ್ಲಿರುವ ಜಗ್ಗೇಶ್ ಅವರ ತೋಟದ ಮನೆಯಲ್ಲಿ ನಡೆಯಲಿದೆ. ಈ ಕಾರ್ಯದಲ್ಲಿ ಜಗ್ಗೇಶ್, ಕೋಮಲ್ ಕುಟಂಬ ಸೇರಿದಂತೆ ಚಿತ್ರರಂಗದ ಬಹಳಷ್ಟು ಗಣ್ಯರು ಭಾಗವಹಿಸಲಿದ್ದಾರೆ.
ಮಾಯಸಂದ್ರದ ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಶಿವಲಿಂಗೇಗೌಡರು. ಮಾಯಸಂದ್ರ ಹೋಬಳಿಯಲ್ಲಿ ಪ್ರಪ್ರಥಮವಾಗಿ ಚಲನಚಿತ್ರ ಪ್ರದರ್ಶನ ಮಾಡಿ ಚಲನಚಿತ್ರ ಮಂದಿರವನ್ನೂ ನಿರ್ಮಿಸಿದ ಹೆಗ್ಗಳಿಕೆ ಇವರದು. ಆ ಕಾಲದಲ್ಲೇ ನಾಟಕ, ಸಿನಿಮಾಗಳು ಸೇರಿದಂತೆ ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವುದರ ಜೊತೆ ಸಾಕಷ್ಟು ಸೃಜನಶೀಲ ಕಲೆಗಳಲ್ಲಿಯೂ ಒಲವು ಹೊಂದಿದವರಾಗಿದ್ದರು.
ಕನ್ನಡ ಚಲನಚಿತ್ರಕ್ಕೆ ತುಂಬಾ ಹಿಂದೆ ಈ ಮೂಲಕ ಕೊಡುಗೆ ಕೊಟ್ಟಿದ್ದ ಶಿವಲಿಂಗೇಗೌಡರ ಪುತ್ರರಾದ ಜಗ್ಗೇಶ್ ಹಾಗೂ ಕೋಮಲ್ ತಮ್ಮ ನಟನೆ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸುವುದರ ಜೊತೆ ಸಾಕಷ್ಟು ಸಾಮಾಜಿಕ ಸೇವೆಗಳ ಮೂಲಕವೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂದಹಾಗೆ, ಜಗ್ಗೇಶ್ ಅಭಿನಯದ 'ಮಂಜುನಾಥ, ಬಿಎಎಲ್ಎಲ್ ಬಿ' ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೆ ಕೋಮಲ್ ಅಭಿನಯದ 'ನಂದೀಶ ಚಿತ್ರೀಕರಣದ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)