Don't Miss!
- News ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್ಗೆ ಯತ್ನಾಳ್ ಹೇಳಿಕೆ!
- Finance ತನ್ನ 4 ವರ್ಷದ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೀತ ರಚನೆಕಾರರು ಆದ್ರು ನವರಸ ನಾಯಕ
ಜಗ್ಗೇಶ್ ಸಾರಥ್ಯದಲ್ಲಿ 'ಮೇಲುಕೋಟೆ ಮಂಜ ಬರ್ತಾವ್ನೆ ಅನ್ನೋ ಮಾಹಿತೀನ ಇತ್ತೀಚೆಗಷ್ಟೆ ತಿಳಿಸಿದ್ವಿ. ಈಗ ಅದೇ ಚಿತ್ರಕ್ಕೆ ಜಗ್ಗೇಶ್ ತಾವೇ ಹಾಡು ಬರೆದಿದ್ದಾರೆ.[ಜಗ್ಗೇಶ್ ಸಾರಥ್ಯದ 'ಮೇಲುಕೋಟೆ ಮಂಜ' ಬರ್ತಾವ್ನೆ !]
ನಟ ಆಗಿ ಕಾಮಿಡಿ ಮಾತ್ರವಲ್ಲ ನಿರ್ದೇಶನದ ಜೊತೆಗೆ ಹಾಡುಗಳನ್ನು ಬರೆಯುವುದಾಗಿ ಜಗ್ಗೇಶ್ ತಿಳಿಸಿದ್ದಾರೆ. ಅಂದಹಾಗೆ ಜಗ್ಗೇಶ್ ಅವರು ಹಾಡುಗಳನ್ನು ಬರೆಯಲು ಸ್ಫೂರ್ತಿ ಜಯಂತ್ ಕಾಯ್ಕಿಟಿ ಅವರಂತೆ. ಹೌದು.. ಜಗ್ಗೇಶ್ ಬರೆದ ಹಾಡು ಯಾವುದು? ಅನ್ನೋ ಪ್ರಶ್ನೆ ಕಾಡುತ್ತಿದ್ಯಾ.. ಉತ್ತರಕ್ಕಾಗಿ ಮುಂದೆ ಓದಿ..
'ಕಣ್ಮುಚ್ಚಿ ನಡೆದಾಗ ಯಾಕಿಂಗೆ ಹೇಳು ಬಾ.. ' ಎಂಬ ಡ್ಯುಯೆಟ್ ಸಾಂಗ್ ಅನ್ನು ಜಗ್ಗೇಶ್ ಬರೆದಿದ್ದಾರೆ. ತಮ್ಮದೇ ನಿರ್ದೇಶನದ 'ಮೇಲುಕೋಟೆ ಮಂಜ' ಸಿನಿಮಾಗೆ ಈ ಹಾಡನ್ನು ಬರೆದಿದ್ದು, ಇನ್ನುಳಿದ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ರಾಮನಾರಾಯಣ್ ಸಾಹಿತ್ಯ ಬರೆದಿದ್ದಾರೆ.. ಚಿತ್ರಕ್ಕೆ ಗಿರಿ ಧವನ್ ಸಂಗೀತ ಸಂಯೋಜನೆ ಮಾಡಿದ್ದು, ಪುನೀತ್ ರಾಜ್ ಕುಮಾರ್ ಸಹ ಒಂದು ಹಾಡನ್ನು ಹಾಡಿದ್ದಾರೆ.
'ಮೇಲುಕೋಟೆ ಮಂಜ' ಚಿತ್ರದಲ್ಲಿ ಐಂದ್ರಿತಾ ರೇ ನಾಯಕ ನಟಿ ಆಗಿ ಅಭಿನಯಿಸಿದ್ದು, ರಂಗಾಯಣ ರಘು ಮತ್ತು ಜೀವನ್ ಸಹ ಇದ್ದಾರೆ. ಜಗ್ಗೇಶ್ ಒಟ್ಟಾರೆ 141 ಚಿತ್ರಗಳಲ್ಲಿ ನಟಿಸಿದ್ದು, ಅವರು ನಿರ್ದೇಶನ ಮಾಡುತ್ತಿರುವ 2 ನೇ ಸಿನಿಮಾ ಇದು.[ಜಗ್ಗೇಶ್ ಆಕ್ಷನ್ ಕಟ್ ನಲ್ಲಿ 'ಮೇಲುಕೋಟೆ ಮಂಜ']