Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮಲ್ ಹಾಸನ್ ಚಿತ್ರಕ್ಕೆ ನಮ್ಮ ರಮ್ಯಾ ಎಂಟ್ರಿ
ಚಿತ್ರರಂಗದಲ್ಲಿ ಒಬ್ಬರಿಗೆ ಚಾನ್ಸ್ ಮಿಸ್ ಆದ್ರೆ ಇಬ್ಬರಿಗೂ ಅದು ಲಾಭವಾಗುವುದು ಮಾಮೂಲಿ. ಕಾಲಿವುಡ್, ಟಾಲಿವುಡ್ ಹಾಗೂ ಇತ್ತೀಚೆಗೆ ಬಾಲಿವುಡ್ ಗೂ ಕಾಲಿಟ್ಟಿರುವ ಕಾಜಲ್ ಅಗರವಾಲ್ ಗೂ ಇದೇ ರೀತಿ ಆಗಿದೆ.
ನಿರ್ಮಾಪಕ ಎನ್ ಲಿಂಗುಸ್ವಾಮಿ ಅವರ ನಿರ್ಮಾಣದ ಕಮಲ್ ಹಾಸನ್ ಅವರ ಹೊಸ ಚಿತ್ರದ ಆಫರ್ ಅನ್ನು ಕಾಜಲ್ ಬದಿಗೊತ್ತಿದ್ದಾರೆ. ಬಾಲಿವುಡ್ ನಲ್ಲಿ ಬ್ಯುಸಿ ಇದ್ದೇನೆ. ಡೇಟ್ಸ್ ಪ್ರಾಬ್ಲಂ ಒಳ್ಳೆ ಅವಕಾಶ ಮಿಸ್ ಆಯ್ತು ಎಂದು ಕಾಜಲ್ ಹಲುಬುತ್ತಿದ್ದಾಳೆ.
ಸದ್ಯಕ್ಕೆ ಈ ದೊಡ್ಡ ಆಫರ್ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಮನೆ ಬಾಗಿಲು ಬಡಿಯುತ್ತದೆ. ಆದರೆ, ಈ ಬಗ್ಗೆ ರಮ್ಯಾ ಎಲ್ಲೂ ಬಾಯ್ಬಿಟ್ಟಿಲ್ಲ ಹಾಗೂ ಟ್ವೀಟ್ ಕೂಡಾ ಮಾಡಿಲ್ಲ.
ತಮಿಳಿನಲ್ಲಿ ವಿಜಯ್ ಜೊತೆ ತುಪಾಕಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾಜಲ್ ಅಗರವಾಲ್ ಈಗ ವರ್ಷವಿಡಿ ಬ್ಯುಸಿಯಂತೆ. ಇಲ್ಲದಿದ್ದರೆ ಕಮಲ್ ಸರ್ ಜೊತೆ ಚಿತ್ರ ಎಂದರೆ ಹೇಗೆ ಮಿಸ್ ಮಾಡಿಕೊಳ್ಳುತ್ತಿದೆ. ಮತ್ತೊಮ್ಮೆ ಅವಕಾಶ ಸಿಗಬಹುದು ನೋಡೋಣ ಎಂದಿದ್ದಾಳೆ.
ಸದ್ಯಕ್ಕೆ ಚಿತ್ರ ಮಾತುಕತೆ ಹಂತದಲ್ಲಿರುವುದರಿಂದ ರಮ್ಯಾ ಅವರು ನಟಿಸುತ್ತಾರೋ ಇಲ್ಲವೋ ಇನ್ನೂ ಗೊತ್ತಿಲ್ಲ. ಚೆನ್ನೈನ ನಮ್ಮ ಪ್ರತಿನಿಧಿ ನಿರ್ಮಾಪಕ ಲಿಂಗುಸ್ವಾಮಿ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ.
ಮುಂಬರುವ
ದಿನಗಳಲ್ಲಿ
ಈ
ಬಗ್ಗೆ
ಸುದ್ದಿಗೋಷ್ಠಿ
ನಡೆಸಿ
ಪ್ರಕಟಿಸುತ್ತೇವೆ
ಎಂದು
ಹೇಳಿದ್ದಾರೆ.
ಒಟ್ಟಾರೆ
ಬಹುತೇಕ
ರಮ್ಯಾ
ಅವರು
ಆಗಸ್ಟ್
ನಂತರ
ಮತ್ತೆ
ಕಾಲಿವುಡ್
ಗೆ
ಕಾಲಿಡುವುದು
ಖಚಿತ
ಎನ್ನಬಹುದು..
ಸದ್ಯಕ್ಕೆ
ಈ
ಚಿತ್ರದ
ಬಗ್ಗೆ
ನಡೆದ
ಬೆಳವಣಿಗೆ
ಚಿತ್ರಸರಣಿಯಲ್ಲಿ
ನಿಮ್ಮ
ಮುಂದಿದೆ.
ರಮ್ಯಾ ಕೈಲಿರುವ ಚಿತ್ರಗಳು
ನೀರ್ ದೋಸೆ, ದಿಲ್ ಕಾ ರಾಜಾ, ಆರ್ಯನ್ ಜೊತೆಗೆ ತೆಲುಗಿನ ಅರುಂಧತಿ ಖ್ಯಾತಿ ಕೋಡಿ ರಾಮಕೃಷ್ಣ ಅವರ ಒಂದು ಚಿತ್ರ, ಸುದೀಪ್ ನಿರ್ದೇಶನ, ನಾಯಕತ್ವದ ಒಂದು ಚಿತ್ರ ಎಲ್ಲವೂ ರಮ್ಯಾ ಅವರು ಬ್ಯುಸಿಯಾಗಿಡಲಿದೆ.
ಪುರುಸೊತ್ತು ಮಾಡಿಕೊಂಡು ಈ ಟಿವಿ ಸೀರಿಯಲ್ ಅಶ್ವಿನಿ ನಕ್ಷತ್ರ ಕಥೆ ಹೇಳುವ ಜವಾಬ್ದಾರಿ ಕೂಡಾ ರಮ್ಯಾ ಹೆಗಲಿಗೇರಿಸಿಕೊಂಡಿದ್ದಾರೆ.
ರಮ್ಯಾ ಬೆಳವಣಿಗೆ
ರಮ್ಯಾ ಆಗಿ ತಮಿಳು ಚಿತ್ರರಂಗ (ಕಾಲಿವುಡ್) ಪ್ರವೇಶಿಸಿದವರು ನಂತರ ದಿವ್ಯ ಸ್ಪಂದನ ಆದರು. ಕುತ್ತು ರಮ್ಯಾ ಎಂದು ಕರೆಯಲ್ಪಡುತ್ತಿದ್ದ ರಮ್ಯಾ ನಂತರ ಧನುಷ್ ಜೊತೆ ಪೊಲ್ಲಾದವನ್, ಸೂರ್ಯ ಜೊತೆ ವಾರನಂ ಆಯಿರಮ್ ಚಿತ್ರದಲ್ಲಿ ಅಭಿನಯಿಸಿದರು.
ಲೇಖಾಗೂ ಅವಕಾಶ
ಮೊದಲಿಗೆ ಲೇಖಾ ವಾಷಿಂಗ್ಟನ್ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ನಂತರ ಬೇರೆ ಪಾತ್ರ ನೀಡುವ ಭರವಸೆ ನೀಡಲಾಯಿತು. ಲೇಖಾ ಈ ಚಿತ್ರದಲ್ಲಿ ನಾಯಕಿ ಅಲ್ಲದಿದ್ದರೂ ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಾರೆ ಎಂದು ನಿರ್ಮಾಪಕ ಲಿಂಗುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿವೇಕ್ ಮುಖ್ಯ ಪಾತ್ರ
ಪ್ರಮುಖ ಪಾತ್ರದಲ್ಲಿ ನಾಯಕನ ಜೊತೆಗೆ ವಿವೇಕ್ ಇರುತ್ತಾರಂತೆ. ಎರಡು ದಶಕಗಳ ನಂತರ ಕಮಲ್ ಹಾಸನ್ ಜೊತೆ ನಂಬರ್ ಒನ್ ಹಾಸ್ಯ ಪಾತ್ರಧಾರಿ ವಿವೇಕ್ ಕಾಣಿಸಿಕೊಳ್ಳುತ್ತಿರುವುದು ಕುತೂಹಲಕಾರಿಯಾಗಿದೆ.
ಚಿತ್ರದ ಹೆಸರೇನು?
ವಿಶ್ವರೂಪಂ -2 ನಿರೀಕ್ಷೆಯಲ್ಲಿ ಜನರಿರುವಾಗ ಈ ಚಿತ್ರ ಕೂಡಾ ಕುತೂಹಲ ಹುಟ್ಟಿಸಿದ್ದು ,ಚಿತ್ರದ ಹೆಸರು 'ಉತ್ತಮ ವಿಲನ್' ಎಂದು ಇಡಲಾಗಿದೆ ಎಂಬ ಸುದ್ದಿಯಿದೆ. ಕಮಲ್ ಹಾಸನ್ ಅವರು ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರ ತ್ವರಿತ ಗತಿಯಲ್ಲಿ ಚಿತ್ರೀಕರಣ ಮುಗಿಸುವ ಸಾಧ್ಯತೆ ಹೆಚ್ಚಾಗಿದೆ.