Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಜೊತೆ ಡ್ಯುಯೆಟ್ ಸಾಂಗ್ ಹಾಡ್ತಾರಂತೆ ಕಾಜಲ್
ಪವರ್ ಸ್ಟಾರ್ ಪುನೀತ್ ಅವರ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ದಿನದಿಂದ ದಿನಕ್ಕೆ ಭಾರಿ ಸುದ್ದಿ ಮಾಡುತ್ತಿದೆ. ಪುನೀತ್ ಅವರಿಗೆ ವಿರುದ್ಧವಾಗಿ ವಿಲನ್ ರೋಲ್ ನಲ್ಲಿ ತಮಿಳಿನ ಖ್ಯಾತ ನಟ ಅರುಣ್ ವಿಜಯ್ ಕಾಣಿಸಿಕೊಂಡು ಸುದ್ದಿ ಆಯ್ತು.
ಆಮೇಲೆ ತೆಲುಗು ಯಂಗ್ ಟೈಗರ್ ಜೂನಿಯರ್ NTR ಅವರು ಹಾಡುವ ಮೂಲಕ ಸಿನಿಮಾ ಸುದ್ದಿ ಆಯ್ತು. ಇದೀಗ ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ತೆಲುಗು-ತಮಿಳಿನ ಖ್ಯಾತ ನಟಿ ಕಾಜಲ್ ಅಗರ್ ವಾಲಾ ಅವರು.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]
ಹೌದು NTR ಅವರು ಹಾಡಿದ ಬೆನ್ನಲ್ಲೇ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ಕಾಜಲ್ ಅವರು 'ಚಕ್ರವ್ಯೂಹ' ಸಿನಿಮಾದ ಹಾಡೊಂದಕ್ಕೆ ತಮ್ಮ ಧ್ವನಿ ನೀಡುತ್ತಿದ್ದಾರೆ.
ನಟಿ ಕಾಜಲ್ ಅವರನ್ನು ಚಿತ್ರತಂಡ ಸಂಪರ್ಕಿಸಿದಾಗ ಅವರು ಹಾಡಲು ಬಹಳ ಉತ್ಸುಕತೆಯಿಂದ ಒಪ್ಪಿಕೊಂಡಿದ್ದಾರೆ. ಕಾಜಲ್ ಅವರು ನಿರ್ಮಾಪಕ ಎನ್.ಕೆ ಲೋಹಿತ್ ಅವರ ಒಳ್ಳೆಯ ಗೆಳತಿ. ಹಾಗಾಗಿ ನಟಿಯನ್ನು ಸಂಪರ್ಕಿಸಿದಾಗ ಬಹಳ ಖುಷಿಯಿಂದ ಹಾಡಲು ಒಪ್ಪಿಕೊಂಡರಂತೆ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ]
ಕಾಜಲ್ ಅವರ ಕಂಠ ಸುಮಧುರವಾಗಿದ್ದರೂ ಕೂಡ ಇದೇ ಮೊದಲ ಬಾರಿಗೆ ಅವರು ಹಾಡುತ್ತಿದ್ದು, ಪುನೀತ್ ಅವರ 'ಚಕ್ರವ್ಯೂಹ' ದಿಂದ ಈ ನಟಿಯ ಕೌಶಲ್ಯ ಬೆಳಕಿಗೆ ಬರಲಿದೆಯಂತೆ.
ಇನ್ನು ಈ ಡ್ಯುಯೆಟ್ ಸಾಂಗ್ ಗೆ ಕಾಜಲ್ ಅವರ ಜೊತೆ ಪುನೀತ್ ಅವರು ಹಾಡುವ ಮೂಲಕ ಸಾಥ್ ನೀಡಿದ್ದು, ಈಗಾಗಲೇ ಪುನೀತ್ ಭಾಗದ ಹಾಡಿನ ರೆಕಾರ್ಡಿಂಗ್ ಕೂಡ ಮುಗಿದಿದೆ.[ಪುನೀತ್-ನಂದ ಕಿಶೋರ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ!]
ತಮಿಳು-ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟಿ ಕಾಜಲ್ ಅವರು ಈ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಜನವರಿ 7 ರಿಂದ ಹಾಡುಗಳ ಚಿತ್ರೀಕರಣಕ್ಕೆ ಪುನೀತ್, ರಚಿತಾ ರಾಮ್, ನಿರ್ದೇಶಕ ಸರವಣನ್ ಅವರು ಚಿತ್ರತಂಡದೊಂದಿಗೆ ಪೋರ್ಚುಗಲ್ ಗೆ ತೆರಳಲಿದ್ದಾರೆ.