Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಿರ್ದೇಶಕರ ತಮಿಳು ಚಿತ್ರ 'ಉತ್ತಮ ವಿಲನ್'ಗೆ, 5 ಪ್ರಶಸ್ತಿ..!
ಕನ್ನಡದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಆಕ್ಷನ್-ಕಟ್ ಹೇಳಿರುವ ತಮಿಳು ಚಿತ್ರ 'ಉತ್ತಮ ವಿಲನ್' ಲಾಸ್ ಏಂಜಲೀಸ್ ಸ್ವತಂತ್ರ್ಯ ಚಿತ್ರೋತ್ಸವದಲ್ಲಿ (ಎಲ್. ಎ.ಐ.ಎಫ್.ಎಫ್.ಎ) ಭರ್ಜರಿ 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
'ಅತ್ಯುತ್ತಮ ಚಿತ್ರ', 'ಅತ್ಯುತ್ತಮ ನಟ'(ಕಮಲ್ ಹಾಸನ್), 'ಅತ್ಯುತ್ತಮ ಸಂಗೀತ'(ಗಿಬ್ರಾನ್), 'ಅತ್ಯುತ್ತಮ ಹಾಡು', ಮತ್ತು 'ಅತ್ಯುತ್ತಮ ಧ್ವನಿಗ್ರಹಣ' (ಕುನಾಲ್ ರಾಜನ್), ಪ್ರಶಸ್ತಿಗಳನ್ನು ತಮಿಳು ಚಿತ್ರ 'ಉತ್ತಮ ವಿಲನ್' ತನ್ನ ಮುಡಿಗೇರಿಸಿಕೊಂಡಿದೆ. ಜೊತೆಗೆ ವಿಶೇಷವಾಗಿ ಈ ಚಿತ್ರದ ಸಂಗೀತ ನಿರ್ದೇಶನಕ್ಕೆ ರಷ್ಯನ್ ಚಿತ್ರೋತ್ಸವದಲ್ಲೂ ಪ್ರಶಸ್ತಿ ದೊರಕಿದೆ.
ಕನ್ನಡದ ಖ್ಯಾತ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ತಮ್ಮ ಕುಚಿಕು ಗೆಳೆಯ ನಟ ಕಮಲ್ ಹಾಸನ್ ಅವರಿಗಾಗಿಯೇ 'ಉತ್ತಮ ವಿಲನ್' ಎನ್ನುವ ವಿಭಿನ್ನ ಸಿನಿಮಾವನ್ನು ತಮಿಳು ಭಾಷೆಯಲ್ಲಿ ತಯಾರು ಮಾಡಿದ್ದರು.
'ಈ ಚಿತ್ರವನ್ನು ನಾವೆಲ್ಲ ಶ್ರದ್ದೆಯಿಂದ ಮಾಡಿದ್ದೆವು, ಆದರೆ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಾಗ ಎಲ್ಲರೂ ಬೇಸರಗೊಂಡಿದ್ದೆವು. ಆದರೆ ನಾವು ಒಂದು ಒಳ್ಳೆ ಚಿತ್ರವನ್ನು ಮಾಡಿದ್ದೆವು, ಯಾವುದೇ ಫಾರ್ಮುಲಾಗಳನ್ನು ನಂಬದೇ ಮಾಡಿದ ಅಪ್ಪಟ ಚಿತ್ರ ಇದು.
ಆದರೆ ಆ ಕೆಲಸ ಇವಾಗ ಫಲ ಕೊಟ್ಟಿದೆ. ಚಿತ್ರೋತ್ಸವದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದನ್ನು ಕೇಳಿ ಸಂತೋಷಪಟ್ಟೆ. ಕಮಲ್ ಅವರು ಮೆಸೇಜ್ ಕಳಿಸಿ ಖುಷಿ ಹಂಚಿಕೊಂಡರು. ಕುನಾಲ್ ಅವರು ಈ ಎಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಎಂದು ರಮೇಶ್ ಅರವಿಂದ್ ಅವರು ಸಂಭ್ರಮ ಹಂಚಿಕೊಂಡಿದ್ದಾರೆ.