Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್
ಕನ್ನಡ ಚಿತ್ರರಂಗದಲ್ಲಿ ನಮ್ಮ ನಟರ ಮಧ್ಯೆ ಸ್ಟಾರ್ ವಾರ್ ಇದೆ. ಬಾಕ್ಸ್ ಆಫೀಸ್ ನಲ್ಲಿ ನಮ್ಮ ನಟರೇ ಕಿತ್ತಾಡುತ್ತಾರೆ ಎಂಬ ಸಂಪ್ರದಾಯವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುರಿದು ಹಾಕಿದ್ದಾರೆ.
ಅಷ್ಟೇ ಅಲ್ಲದೇ, ಪರಭಾಷೆ ಚಿತ್ರಗಳಿಗೆ 'ಚಕ್ರವರ್ತಿ' ಬಹಿರಂಗವಾಗಿ ಸವಾಲೆಸೆದಿದ್ದಾರೆ. ಕಾಂಪಿಟೇಶನ್ ಅಂತ ಬಂದಾಗ 'ನಾವು-ನೀವಾ' ನೋಡೇ ಬಿಡೋಣ ಅಂತ ತೊಡೆ ತಟ್ಟಿ ಘರ್ಜಿಸಿದ್ದಾರೆ.['ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!]
ಹೌದು, ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ದಾಸ ದರ್ಶನ್ ಪರಭಾಷೆ ಚಿತ್ರಗಳಿಗೆ ಈ ಚಾಲೆಂಜ್ ಹಾಕಿದ್ದಾರೆ? ಮುಂದೆ ಓದಿ....
ಬಹಿರಂಗ ಸವಾಲೆಸೆದ ದರ್ಶನ್!
ಕನ್ನಡ ಚಿತ್ರಗಳು ಇಂದು ಪರಭಾಷೆ ಚಿತ್ರಗಳು ಜೊತೆ ಹೆಚ್ಚು ಕಾಂಪಿಟೇಶನ್ ಮಾಡಬೇಕಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಚಿತ್ರಗಳಿಗಿಂತ ಹೊರಾಜ್ಯಗಳ ಚಿತ್ರಗಳು ಹೆಚ್ಚು ಬಿಡುಗಡೆಯಾಗುತ್ತಿವೆ. ಇದು ಕನ್ನಡ ಸಿನಿಮಾಗಳಿಗೆ ಹಿನ್ನಡೆಯಾಗಲು ಕಾರಣವಾಗುತ್ತಿದೆ. ಈ ಸಂಪ್ರದಾಯದ ವಿರುದ್ಧ ನಟ ದರ್ಶನ್ ಬಹಿರಂಗವಾಗಿ ಸವಾಲೆಸಿದಿದ್ದಾರೆ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']
ಕಾಂಪಿಟೇಶನ್ ಗೆ ನಾವು ರೆಡಿ!
'' ಕಾಂಪಿಟೇಶನ್ ಅಂತ ಬಂದ್ಮೇಲೆ ನಾವು ಕಾಂಪಿಟೇಶನ್ ಗೆ ರೆಡಿ. ಆದ್ರೆ, ನಮ್ಮ ಕಾಂಪಿಟೇಶನ್ ನಮ್ಮ ಚಿತ್ರಗಳ ಜೊತೆಯಲ್ಲಿ ಅಲ್ಲ. ಪರಭಾಷೆ ಚಿತ್ರಗಳ ಜೊತೆ ಎಂದು'' ನೇರವಾಗಿ ಸವಾಲೆಸಿದ್ದಿದ್ದಾರೆ.['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']
ನೀನಾ....ನಾನಾ....ನೋಡೋಣ!
''ಈ ಸಲ ಕಾಂಪಿಟೇಶನ್ ನಲ್ಲಿ ನೀನಾ....ನಾನಾ ನೋಡೇ ಬಿಡೋಣ'' ಎಂದ ದರ್ಶನ್, 'ಚಕ್ರವರ್ತಿ' ಸಿನಿಮಾ ಪರಭಾಷೆ ಚಿತ್ರಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಸಮರ್ಥಿಸಿಕೊಂಡರು.['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]
ನಮ್ಮ ಜೊತೆ ನಮ್ಮ ಜನ ಇದ್ದಾರೆ!
''ನಮಗೆ ನಮ್ಮ ಮೇಲೆ ಅಭಿಮಾನ ಇದೆ. ನಮ್ಮ ಜನತೆಗೆ ಕನ್ನಡದ ಮೇಲೆ ಅಭಿಮಾನ ಜಾಸ್ತಿಯಿದೆ. ನಿರೀಕ್ಷೆ ಅಂತ ಬಂದಾಗ, ಈ ಎಕ್ಸ್ ಪೆಕ್ಟೇಶನ್ ನ ನಾವು ಕಮ್ಮಿ ಮಾಡಲ್ಲ. ಪರಭಾಷೆ ಚಿತ್ರಗಳು ಎಷ್ಟೆ ಎಗರಾಡಿದ್ರು ಅವರಿಗೆ ಉತ್ತರ ಕೊಡೊಕೆ ಈ ಸಿನಿಮಾ ಸಾಕು'' ಎಂದಿದ್ದಾರೆ.[ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]