Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕಂದ' ಜಗ್ಗೇಶ್ ರವರಿಗಿಂದು 54ನೇ ಹುಟ್ಟುಹಬ್ಬದ ಸಂಭ್ರಮ
ಒಂದ್ಕಡೆ ಅಪ್ಪು ಬರ್ತಡೇಗಾಗಿ ಇಂದು ಪವರ್ ಸ್ಟಾರ್ ಅಭಿಮಾನಿಗಳು ಸಡಗರ-ಸಂಭ್ರಮ ಪಡುತ್ತಿದ್ದರೆ, ಇನ್ನೊಂದ್ಕಡೆ 'ನವರಸ ನಾಯಕ'ನ ಕಟ್ಟಾ ಭಕ್ತರೂ ಕೂಡ ಹಬ್ಬದ ಮೂಡ್ ನಲ್ಲಿದ್ದಾರೆ. ಯಾಕಂದ್ರೆ, ಇವತ್ತು ಕನ್ನಡದ ಹೆಮ್ಮೆಯ ನಟ ಜಗ್ಗೇಶ್ ರವರ 54ನೇ ಹುಟ್ಟುಹಬ್ಬ.
ಮನಸ್ಸು ಮತ್ತು ನಾಲಿಗೆ ಮಧ್ಯೆ ಫಿಲ್ಟರ್ ಇಲ್ಲದೇ.. ಅನಿಸಿದ್ದನ್ನ ನೇರವಾಗಿ ಹೇಳುವ 'ಭಂಡ'.. ಕಾಮಿಡಿ ಕಚಗುಳಿ ಇಡುವ 'ಕಿಲಾಡಿ' ಜಗ್ಗೇಶ್ ಇವತ್ತು ತಮ್ಮ 54ನೇ ಜನ್ಮದಿನದ ಪ್ರಯುಕ್ತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. [ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ]
''ನನ್ನ ಹರಸಿದ ಎಲ್ಲಾ ಉಸಿರಿನಲ್ಲಿ ಬೆರೆತ ಕನ್ನಡ ಕಲಾಭಿಮಾನಿಗಳ ಪಾದಾರವಿಂದಕ್ಕೆ ಜಗ್ಗೇಶನ ಸಹಸ್ರಾರು ಶರಣಾರ್ಥಿ'' ಅಂತ ತಮಗೆ ಶುಭಾಶಯ ಕೋರಿದ ಎಲ್ಲರಿಗೂ ಟ್ವೀಟ್ ಮೂಲಕ ಜಗ್ಗೇಶ್ ಧನ್ಯವಾದ ಸಲ್ಲಿಸಿದ್ದಾರೆ.
'ನಂಜನಗೂಡು ನಂಜುಂಡೇಶ್ವರ'ನ ವರ ಪ್ರಸಾದದಿಂದ ಹುಟ್ಟಿದ 'ಈಶ್ವರ್' ಸ್ಯಾಂಡಲ್ ವುಡ್ ನಲ್ಲಿ 'ನವರಸ ನಾಯಕ' ಜಗ್ಗೇಶ್ ಅಂತಲೇ ಚಿರಪರಿಚಿತ.
ಭಿನ್ನ-ವಿಭಿನ್ನ ಚಿತ್ರಗಳಿಂದ ದಶಕಗಳಿಂದ ಎಲ್ಲರನ್ನೂ ರಂಜಿಸುತ್ತಿರುವ ಜಗ್ಗೇಶ್ ರವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.