twitter
    For Quick Alerts
    ALLOW NOTIFICATIONS  
    For Daily Alerts

    'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್

    By Bharath Kumar
    |

    ಶಾಸಕ ಹಾಗೂ ನಿರ್ಮಾಪಕ ಮುನಿರತ್ನ 'ಕುರುಕ್ಷೇತ್ರ' ಚಿತ್ರವನ್ನ ಘೋಷಣೆ ಮಾಡಿದ್ದೇ ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಂದು ಹಾಟ್ ನ್ಯೂಸ್ ಹರಿದಾಡುತ್ತಲೇ ಇದೆ.

    ಧರ್ಮರಾಯ ಪಾತ್ರವನ್ನ ಇವರು ಮಾಡ್ತಿದ್ದಾರಂತೆ? ಕೃಷ್ಣ ಪಾತ್ರದಲ್ಲಿ ಈ ನಟ ಕಾಣಿಸಿಕೊಳ್ಳುತ್ತಿದ್ದಾರಂತೆ? ದ್ರೌಪದಿ ಪಾತ್ರಕ್ಕೆ ಆ ನಟಿ ಬರ್ತಾರಂತೆ? ಹಾಗೆ, ಹೀಗೆ ಎಂಬ ಸುದ್ದಿಗಳು ಚಿತ್ರಪ್ರೇಮಿಗಳ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]

    ಅದೇ ರೀತಿ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ ಅವರ ಬಗ್ಗೆ ಕೂಡ ಒಂದು ಸುದ್ದಿ ಹರಿದಾಡುತ್ತಿತ್ತು. 'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ ಕೂಡ ಇದ್ದಾರೆ. ಅವರು ಪ್ರಮುಖ ಪಾತ್ರವನ್ನ ಮಾಡ್ತಿದ್ದಾರೆ ಅಂತ.....ಇದೀಗ, ಈ ಸುದ್ದಿಗೆ ಸ್ವತಃ ಜಗ್ಗೇಶ್ ಅವರೇ ಸ್ವಷ್ಟನೆ ನೀಡಿದ್ದಾರೆ.

    'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ'!

    'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ'!

    ಮೂಲಗಳ ಪ್ರಕಾರ ನವರಸ ನಾಯಕ ಜಗ್ಗೇಶ್ ಅವರು 'ಕುರುಕ್ಷೇತ್ರ'ದಲ್ಲಿ 'ಶಕುನಿ' ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಅನುಮಾನವನ್ನ ಜಗ್ಗೇಶ್ ಅವರೇ ಬಗೆಹರಿಸಿದ್ದಾರೆ.['ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ ]

    'ಶಕುನಿ' ಪಾತ್ರ ನನಗೆ ಇಷ್ಟವಿಲ್ಲ!

    'ಶಕುನಿ' ಪಾತ್ರ ನನಗೆ ಇಷ್ಟವಿಲ್ಲ!

    ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!ಈ ವದಂತಿಗೆ ತೆರೆ ಎಳೆದ ಜಗ್ಗೇಶ್, ನಾನು ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಶಕುನಿ ಪಾತ್ರವನ್ನ ಮಾಡುವಷ್ಟು ಅದ್ಭುತ ಕಲಾವಿದ ನಾನಲ್ಲ, ಮತ್ತು ಶಕುನಿ ಪಾತ್ರ ಮಾಡಲು ನನಗೆ ಇಷ್ಟವೂ ಇಲ್ಲ ಎಂದು ನೇರವಾಗಿ ರಿಜೆಕ್ಟ್ ಮಾಡಿದ್ದಾರೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

    ಇದು ಪಬ್ಲಿಸಿಟಿ ಪ್ಲಾನ್ ಅಷ್ಟೇ!

    ಇದು ಪಬ್ಲಿಸಿಟಿ ಪ್ಲಾನ್ ಅಷ್ಟೇ!

    ಇಂತಹ ಚಿತ್ರಗಳು ಸುಮ್ಮನೆ ದೊಡ್ಡ ನಟರ ಹೆಸರುಗಳನ್ನ ಬಳಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತೆ. ಹಾಗಾಗಿ ನನ್ನ ಹೆಸರು ತೇಲಿ ಬಂದಿರಬಹುದು ಅಷ್ಟೇ. ಅನೇಕ ಹಿರಿಯ ಕಲಾವಿದರು ಇದ್ದಾರೆ. ಅವರನ್ನ ಬಳಸಿಕೊಳ್ಳಿ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.[ಕುರುಕ್ಷೇತ್ರಕ್ಕೆ 'ದ್ರೌಪದಿ' ಫಿಕ್ಸ್! ಕನ್ನಡದ ನಟಿಯೇ 'ಪಾಂಚಾಲಿ'?]

    'ಕುರುಕ್ಷೇತ್ರ'ದಲ್ಲಿ ಇರಲ್ಲ ಜಗ್ಗೇಶ್

    'ಕುರುಕ್ಷೇತ್ರ'ದಲ್ಲಿ ಇರಲ್ಲ ಜಗ್ಗೇಶ್

    ಈ ಮೂಲಕ 'ಕುರುಕ್ಷೇತ್ರ' ಚಿತ್ರದ ಪಟ್ಟಿಯಲ್ಲಿರುವ ನಾಯಕ ನಟರ ಪೈಕಿ, ಜಗ್ಗೇಶ್ ಅವರಿಲ್ಲ ಎಂದು ಸ್ವತಃ ಜಗ್ಗೇಶ್ ಅವರೇ ಬಹಿರಂಗ ಪಡಿಸಿದ್ದಾರೆ.[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.! ]

    ದರ್ಶನ್ 'ದುರ್ಯೋಧನ'

    ದರ್ಶನ್ 'ದುರ್ಯೋಧನ'

    ಮುನಿರತ್ನ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ನಟ ದರ್ಶನ್ ದುರ್ಯೊಧನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ. ಉಳಿದಂತೆ ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಅಂಬರೀಶ್, ಉಪೇಂದ್ರ, ಯಶ್, ರವಿಚಂದ್ರನ್ ಸೇರಿದಂತೆ ಹಲವು ನಟರು ಈ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

    English summary
    Kannada Actor Jaggesh Gives Clarity About Upcoming Movie 'Kurukshetra'. Source Said Jaggesh Will Playing Shakuni Role in Darshan Kurukshetra.
    Tuesday, May 30, 2017, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X