Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆಟಗಾರ'ನ ಓಟಕ್ಕೆ ಸೀಟಿ ಊದಿದ ಕಿಚ್ಚ ಸುದೀಪ್
ನಿರ್ದೇಶಕ ಕೆ.ಎಮ್ ಚೈತನ್ಯ ಆಕ್ಷನ್-ಕಟ್ ಹೇಳಿದ್ದು, ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ 49ನೆ ಚಿತ್ರ 'ಆಟಗಾರ' ನಿನ್ನೆ ಭರ್ಜರಿಯಾಗಿ ತೆರೆ ಕಂಡಿದ್ದು, ನಿಜ ಆದರೆ ಕೊನೆ ಕ್ಷಣದಲ್ಲಿ ಬೆಳಗಿನ ಮೊದಲ ಪ್ರದರ್ಶನ ಕಾಣುವುದು ಕೊಂಚ ಡಿಲೇ ಆಗಿತ್ತು.
ಈ ಸಂದರ್ಭದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಪತ್ಭಾಂದವರಂತೆ ಬಂದು ಸಹಕರಿಸಿ ಸಮಸ್ಯೆ ಬಗೆಹರಿಸಿದರಂತೆ. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಸುದೀಪ್ ಅವರು ಬಿಡುಗಡೆ ವೇಳೆ ಒದಗಿ ಬಂದ ಕಂಟಕವನ್ನು ಬಗೆಹರಿಸಿದ್ದಾರೆ.[ಆಟಗಾರನ ನೋಡಬೇಕು ಏಕೆ? ಇಲ್ಲಿದೆ ಕಾರಣಗಳು]
ಅಂದಹಾಗೆ ಚಿತ್ರ ಬಿಡುಗಡೆ ಕಾಣಲು ತಾಂತ್ರಿಕ ದೋಷ ಕಾರಣ ಅಂತ ಕೆಲವರು ಮಾತಾಡಿಕೊಂಡರು. ಆದ್ರೆ 'ಆಟಗಾರ'ನ ಎಂಟ್ರಿ ಲೇಟ್ ಆಗಲು ಕಾರಣ ನಿರ್ಮಾಪಕರು ಹಾಗೂ ಫೈನಾನ್ಶಿಯರ್ ಗಳ ನಡುವೆ ನಡೆದಿದ್ದ ಹಣಕಾಸಿನ ವ್ಯವಹಾರವೇ ಇದಕ್ಕೆ ನಿಜವಾದ ಕಾರಣವಾಗಿತ್ತಂತೆ.[ಹೌದು ಸ್ವಾಮಿ, 'ಆಟಗಾರ' ಪಕ್ಕಾ ಸ್ವಮೇಕ್ ಸಿನಿಮಾ.!]
ಆದರೆ ವಿಷಯ ತಿಳಿಯುತ್ತಿದ್ದಂತೆ ನಮ್ಮ ಕಿಚ್ಚ ಸುದೀಪ್ ಅವರು ಆಗಮಿಸಿ ತಾವೇ ಗ್ಯಾರಂಟಿಯಾಗಿ ನಿಂತು ಹಣಕಾಸು ವ್ಯವಹಾರವನ್ನು ನೋಡಿಕೊಂಡು ಪೂರ್ಣಗೊಳಿಸಿಕೊಡುವುದಾಗಿ ಭರವಸೆ ನೀಡಿದ ನಂತರವೇ 'ಆಟಗಾರ' ನ ಅಸಲಿ ಆಟ ಶುರುವಾಗಿದೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ]
ಒಟ್ನಲ್ಲಿ ಸಾಹಸಸಿಂಹ ವಿಷ್ಣು ಅವರ ಆಪ್ತ ಗೆಳೆಯ ದ್ವಾರಕೀಶ್ ಅವರ ಕನಸಿನ ಚಿತ್ರಕ್ಕೆ ಬಂದೊದಗಿದ ಸಮಸ್ಯೆಯನ್ನು ಪರಿಹರಿಸಿ ಅಭಿಮಾನಿಗಳ ಕಡೆಯಿಂದ ಕಿಚ್ಚ ಸುದೀಪ್ ಅವರಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ತೆರೆಕಂಡ 'ಆಟಗಾರ' ಚಿತ್ರ ಕೂಡ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ.