Don't Miss!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಪ್ಪ' ಆಗಲು ಸಿದ್ಧರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ನಮ್ಮ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಲ್ಲಿಯವರೆಗೆ ಹೀರೋ ಆಧಾರಿತ ಚಿತ್ರಗಳಲ್ಲಿ ಮಿಂಚಿ ಎಲ್ಲರ ಮನೆ-ಮನ ಗೆದ್ದು ನೆಚ್ಚಿನ ನಟ ಎನಿಸಿಕೊಂಡಿದ್ದರು.
ಇದೀಗ ತಮಿಳಿನಲ್ಲಿ ಬಿಡುಗಡೆಗೆ ತಯಾರಾಗಿ ನಿಂತಿರುವ 'ಅಪ್ಪ' ಎಂಬ ಚಿತ್ರದಲ್ಲಿ ನಟಿಸಲು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಆಫರ್ ಬಂದಿದ್ದು, ಶಿವಣ್ಣ ಅವರು ಕೂಡ ನಟಿಸಲು ಒಪ್ಪಿಕೊಂಡಿದ್ದಾರಂತೆ.[ಶಿವಣ್ಣ ಕಡೆಯಿಂದ ದಿಢೀರ್ ನಿರ್ಣಯ.! ಇಡೀ ಸ್ಯಾಂಡಲ್ ವುಡ್ ಗೆ ಹೆಮ್ಮೆ.!]
ತಮಿಳು ನಟ ಕಮ್ ನಿರ್ದೇಶಕ ಸಮುದ್ರಕಣಿ ನಟಿಸಿ-ನಿರ್ದೇಶನ ಮಾಡುತ್ತಿರುವ 'ಅಪ್ಪ' ಚಿತ್ರವನ್ನು ಕನ್ನಡ, ತೆಲುಗು ಮತ್ತು ಹಿಂದಿಯಲ್ಲೂ ಮಾಡಲು ನಿರ್ಧರಿಸಿದ್ದು, ಕನ್ನಡದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಟಿಸಲು ಸಮುದ್ರಕಣಿ ಕೇಳಿಕೊಂಡಿದ್ದಾರೆ.
ಕನ್ನಡದಲ್ಲಿ 'ತಂದೆ' ತೆಲುಗಿನಲ್ಲಿ 'ನಾನಾ' ಮತ್ತು ಹಿಂದಿಯಲ್ಲಿ 'ಪಾಪಾ' ಎಂಬ ಹೆಸರಿನಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದು, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅನಿಲ್ ಕಪೂರ್ ಅವರಿಗೆ ನಟಿಸಲು 'ಯಾರೇ ಕೂಗಾಡಲಿ' [ಪುನೀತ್ ಅಭಿನಯದ ಯಾರೇ ಕೂಗಾಡಲಿ ವಿಮರ್ಶೆ] ಖ್ಯಾತಿಯ ನಿರ್ದೇಶಕ ಆಗ್ರಹಿಸಿದ್ದಾರೆ.
''ಅಪ್ಪ' ಚಿತ್ರ ತಂದೆ-ಮಗನ ಸಂಬಂಧದ ಜೊತೆಗೆ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆಯೂ ಚರ್ಚಿಸುತ್ತದೆ. ಅವಕಾಶ ಸಿಕ್ಕರೆ ಇದನ್ನು ಸುಮಾರು 15 ಭಾಷೆಗಳಲ್ಲಿ ಮಾಡುವ ಆಸೆ ನನಗೆ. ಸದ್ಯಕ್ಕೆ 3 ಭಾಷೆಗಳಲ್ಲಿ ಮಾಡಲು ತಯಾರಿ ಮಾಡುತ್ತಿದ್ದೇನೆ' ಎಂದಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಕಮ್ ನಿರ್ದೇಶಕ ಸಮುದ್ರಕಣಿ ಅವರು.
ಸಮುದ್ರಕಣಿ ಅವರೇ ನಟಿಸಿದ್ದ 'ಸಾತ್ತೈ' ಚಿತ್ರದ ಮುಂದಿನ ಭಾಗವಾಗಿರುವ 'ಅಪ್ಪ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸುಮಾರು 3 ಲಕ್ಷ ಜನರ ವೀಕ್ಷಣೆಗೆ ಒಳಪಟ್ಟು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.['ರಥಾವರ' ಚಂದ್ರಶೇಖರ್ ರ ಜೊತೆ ಶಿವರಾಜ್ ಕುಮಾರ್ ಕಮಾಲ್]
'ಕನ್ನಡಕ್ಕೆ ಶಿವರಾಜ್ ಕುಮಾರ್ ಅವರು ನನ್ನ ಮೊದಲ ಅದ್ಯತೆ ಎಂದಿರುವ ನಿರ್ದೇಶಕರು ಈಗಾಗಲೇ ಚಿತ್ರದ ಬಗ್ಗೆ ಶಿವಣ್ಣ ಅವರಲ್ಲಿ ಚರ್ಚಿಸಿದ್ದು, ಅವರು ಕೂಡ ಆಸಕ್ತಿ ವಹಿಸಿದ್ದಾರೆ. ಈ ಪಾತ್ರಕ್ಕೆ ಶಿವಣ್ಣರನ್ನು ಬಿಟ್ಟರೆ ನನ್ನ ಮನಸ್ಸಿಗೆ ಬೇರೆ ಯಾರು ಬರುತ್ತಿಲ್ಲ' ಎನ್ನುತ್ತಾರೆ ನಿರ್ದೇಶಕರು.
'ಇನ್ನೇನು ಎರಡು ವಾರದಲ್ಲಿ ಶಿವಣ್ಣ ಅವರಿಗೆ 'ಅಪ್ಪ' ಸಿನಿಮಾ ತೋರಿಸಿ ಚಿತ್ರದ ಬಗ್ಗೆ ಅವರ ಅನಿಸಿಕೆ ಬೇಕು. ಆನಂತರ ಅವರು ಡೇಟ್ ಕೊಟ್ಟ ನಂತರ ಕನ್ನಡದಲ್ಲಿ ಚಿತ್ರೀಕರಣ ಆರಂಭ ಮಾಡುತ್ತೇನೆ. ಆನಂತರ ಇಡೀ ಕರ್ನಾಟಕದ ಮಕ್ಕಳೆಲ್ಲಾ ಅವರನ್ನು 'ಅಪ್ಪ' ಎಂದು ಕರೆಯುತ್ತಾರೆ' ಎಂದಿದ್ದಾರೆ ನಿರ್ದೇಶಕ ಸಮುದ್ರಕಣಿ. 'ಅಪ್ಪ' ಚಿತ್ರದ ತಮಿಳು ಟ್ರೈಲರ್ ಇಲ್ಲಿದೆ ನೋಡಿ...