Don't Miss!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಚ್ಚರಿಯಾದರೂ ಸತ್ಯ....ಸುದೀಪ್, ದರ್ಶನ್ ನಡುವೆ ಕ್ಲ್ಯಾಷ್!
ಶಾಕಿಂಗ್!! ಸ್ಯಾಂಡಲ್ ವುಡ್ ನ ಕುಚಿಕು ಗೆಳೆಯರಿಬ್ಬರ ನಡುವೆ ಅವರಿಗೆ ಗೊತ್ತಿಲ್ಲದಂತೆ ಕ್ಲ್ಯಾಷಸ್ ಉಂಟಾಗಿದೆ ಅಂತ ಇಡೀ ಗಾಂಧಿನಗರದಲ್ಲಿ ಸುದ್ದಿಯಾಗಿದೆ.
ಹೌದು ಯಾರಪ್ಪ ಈ ಕುಚಿಕು ಗೆಳೆಯರು ಅನ್ಕೊಂಡ್ರ, ಅವರೇ ನಮ್ಮ ಪ್ರೀತಿಯ 'ನಲ್ಲ' ಕಿಚ್ಚ ಸುದೀಪ್ ಹಾಗೂ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಅಂದಹಾಗೆ ಇದು ರಿಯಲ್ ಲೈಫ್ ನಲ್ಲಿ ಆಗ್ತಿರೋ ಕ್ಲ್ಯಾಷಸ್ ಅಲ್ಲ ಕಣ್ರಿ ಬದ್ಲಾಗಿ ತಮ್ಮ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕಗಳಲ್ಲಿ ಉಂಟಾಗುತ್ತಿರುವ ಕ್ಲ್ಯಾಷ್.
ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಇಳೆಯದಳಪತಿ ವಿಜಯ್ ಮುಂತಾದ ಬಹುದೊಡ್ಡ ತಾರಾಗಣವೇ ಇರುವ ಈ ವರ್ಷದ ಬಹುನಿರೀಕ್ಷಿತ ತಮಿಳು ಚಿತ್ರ 'ಪುಲಿ' ಯನ್ನು ಅಕ್ಟೋಬರ್ 1 ರಂದು ತೆರೆ ಮೇಲೆ ತರಲು ನಿರ್ದೇಶಕ ಚಿಂಬು ದೇವನ್ ಅವರು ನಿರ್ಧರಿಸಿದ್ದಾರೆ.[ರೈತರ ಹೋರಾಟಕ್ಕೆ ಜೈಕಾರ ಹಾಕಿದ ಕಿಚ್ಚ ಸುದೀಪ್]
ಇದೀಗ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಭಾನುವಾರದಂದು ನಿರ್ದೇಶಕ ಎ.ಪಿ ಅರ್ಜುನ್ ಅವರು ದರ್ಶನ್ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಮಿಸ್ಟರ್ ಐರಾವತ' ಚಿತ್ರವನ್ನು ಅಕ್ಟೋಬರ್ 1 ರಂದು ತೆರೆ ಮೇಲೆ ತರವುದಾಗಿ ಘೋಷಿಸಿದ್ದಾರೆ.
ಜೊತೆಗೆ ಭಾನುವಾರದಂದು ನಿರ್ದೇಶಕ ಎ.ಪಿ ಅರ್ಜುನ್ ಅವರು 'ಐರಾವತ' ಚಿತ್ರದ ಫೈನಲ್ ಶಾಟ್ ಒಂದನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಗಿಸಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.
ಹೀಗಾಗಿ ಸದ್ಯಕ್ಕೆ ಚಂದನವನದ ಎರಡು ಬಾಕ್ಸಾಫೀಸ್ ಸುಲ್ತಾನರಿಗೆ ತಮ್ಮ ತಮ್ಮ ಬಹುನಿರೀಕ್ಷೆಯ ಚಿತ್ರಗಳು ಒಂದೇ ದಿನ ತೆರೆ ಕಾಣುವುದರಿಂದ ಈ ಕುಚಿಕು ಗೆಳೆಯರ ನಡುವೆ ಮಾತ್ರವಲ್ಲದೆ ಅಭಿಮಾನಿಗಳ ನಡುವೆಯೂ ಕ್ಲ್ಯಾಷ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.[ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]
ಆದರೆ ಬೇರೆ ಬೇರೆ ಭಾಷೆಯಲ್ಲಿ ತೆರೆ ಕಾಣುವುದರಿಂದ ಈ ಇಬ್ಬರು ಕುಚಿಕು ಗೆಳೆಯರಲ್ಲಿ ಯಾರಿಗೆ ಲಾಭ ಆಗಲಿದೆ ಯಾರಿಗೆ ನಷ್ಟ ಉಂಟಾಗಲಿದೆ ಜೊತೆಗೆ ಅಭಿಮಾನಿಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.