Don't Miss!
- News ಕಾಂಗ್ರೆಸ್ ಬಿಗ್ ಶಾಕ್ : ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರ್ಪಡೆ
- Finance BBMP: ಬೆಂಗಳೂರಿನಲ್ಲಿ 138 ಕಿಮೀ ರಸ್ತೆ ನಿರ್ಮಾಣ, 5 ಕಂಪೆನಿಗಳಿಂದ ಟೆಂಡರ್
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಇನ್ನೋವಾ ಹೈಕ್ರಾಸ್ನ ಹೊಸ ರೂಪಾಂತರದ ವಿಶೇಷತೆಗಳೇನು?
- Technology ಇದೇ ಏಪ್ರಿಲ್ 22 ರಂದು ರಿಯಲ್ಮಿ ಈ ಹೊಸ ಫೋನ್ ಸೇಲ್ ಪ್ರಾರಂಭ!
- Lifestyle ಇದೇ ನೋಡಿ ಭಾರತದ ಮೊಟ್ಟ ಮೊದಲು ರೈಲು..! ಇಂದಿಗೆ ಈ ರೈಲು ಹೊರಟು 171 ವರ್ಷ..!
- Sports KKR vs RR: ಐಪಿಎಲ್ನ ಶತಕಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ ದಾಖಲೆ ಹಿಂದಿಕ್ಕಿದ ಜೋಸ್ ಬಟ್ಲರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ವಿಂಧ್ಯಾ ಚಂಚಲ ಸ್ವಭಾವದರು: ನಟ ಶ್ರೀಕಿ
ತೆರೆಕಾಣಬೇಕಿರುವ 'ಮನದ ಮರೆಯಲ್ಲಿ' ಚಿತ್ರದಲ್ಲಿ ನಟಿ ವಿಂಧ್ಯಾ ಜೊತೆ ಅಭಿನಯಿಸಿರುವ ಚಿತ್ರದ ನಾಯಕ ನಟ ಶ್ರೀಕಿ ಉರುಫ್ ಶ್ರೀಕಾಂತ್ ಅಕೆಯ ಆತ್ಮಹತ್ಯೆಗೆ ಪ್ರಯತ್ನಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಭದ್ರಾವತಿಯಲ್ಲಿರುವ ಅವರು ವಿಂಧ್ಯಾ ಚಿತ್ರೀಕರಣದಲ್ಲಿ ಹೇಗಿರುತ್ತಿದ್ದರು ಎಂಬ ಬಗ್ಗೆ ವಿವರ ನೀಡಿದ್ದಾರೆ.
ವಿಂಧ್ಯಾ ಆತ್ಮಹತ್ಯೆಗೆ ಯತ್ನಿಸಿರುವ ಮೇಸೇಜು ನನಗೆ ಈಗಷ್ಟೇ ಬಂತು. ಮಂಜುನಾಥ್ ಎಂಬುವವರನ್ನು ಅವರು ಲವ್ ಮಾಡುತ್ತಿದ್ದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಮೂಲಕ ನನಗೂ ಈಗಷ್ಟೇ ಗೊತ್ತಾಯಿತು. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು? ]
ಶೂಟಿಂಗ್ ಸ್ಪಾಟ್ ನಲ್ಲಿ ಮಂಜುನಾಥ್ ಎಂಬುವವರು ಎಂದೂ ಕಾಣಿಸಿಕೊಂಡಿರಲಿಲ್ಲ, ಬರುತ್ತಲೂ ಇರಲಿಲ್ಲ. ಆದರೆ ವಿಂಧ್ಯಾ ಅವರಿಗೆ ಮಾತ್ರ ಖಡಕ್ ಡಿಸಿಷನ್ ತೆಗೆದುಕೊಳ್ಳುವಷ್ಟು ಬುದ್ಧಿ ಇರಲಿಲ್ಲ. ಅವರು ಇನ್ನೂ ಒಂಥರಾ ಚೆಲ್ಲುಚೆಲ್ಲಾಗಿ ಆಡುತ್ತಿದ್ದರು. ಅವರು ಫಿಕಲ್ ಮೈಂಡೆಡ್.
ಒಂದು ಸನ್ನಿವೇಶವನ್ನು ಹೇಳಿದಾಗ ಓಕೆ ಓಕೆ ಮಾಡ್ತೀನಿ ಅಂತಿದ್ದರು. ಆದರೆ ಆಕ್ಷನ್ ಕಟ್ ಹೇಳಿದಾಗ ಅವರಿಗೆ ಅದಕ್ಕೆ ತಕ್ಕ ಹಾವ ಭಾವ ಪ್ರದರ್ಶಿಸಲು ಸಾಧ್ಯವಾಗುತ್ತಿರಲಿಲ್ಲ. ಶೂಟಿಂಗ್ ಟೈಮ್ ನಲ್ಲಿ ಫೋನ್ ಕಾಲ್ ಬರುತ್ತಿದ್ದಂತಹ ಘಟನೆಗಳೇನೂ ನನ್ನ ಗಮನಕ್ಕೆ ಬಂದಿಲ್ಲ.
ಶೂಟಿಂಗ್ ಮುಗಿಯುವ ತನಕ ಫೋನನ್ನು ಬೇರೆಯವರ ಕೈಗೆ ಕೊಡುತ್ತಿದ್ದರು. ಸಂಜೆವರೆಗೂ ಆಕೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಆದರೆ ಆಕೆಗೆ ಮಂಜುನಾಥ್ ಎಂಬುವವರಿಂದ ಕರೆಬರುತ್ತಿದ್ದದ್ದು ನನಗೆ ಗೊತ್ತಿಲ್ಲ.
ಮೊನ್ನೆ ನ್ಯೂಸ್ ಚಾನಲ್ ನಲ್ಲಿ ನೋಡಿದಾಗಲೇ ಆಕೆಯ ಲವ್ ವಿಚಾರ ಗೊತ್ತಾಗಿದ್ದು. ಇಷ್ಟು ದಿನ ಅವರ ಫ್ಯಾಮಿಲಿ ಜೊತೆಗೂ ನನಗೆ ಕಾಂಟ್ಯಾಕ್ಟ್ ಇರಲಿಲ್ಲ. ವಿಂಧ್ಯಾ ಅವರಿಗೆ ತಂದೆತಾಯಿ ಇದ್ದರು ಎಂಬುದಷ್ಟೇ ಗೊತ್ತಿತ್ತು. ಸದ್ಯಕ್ಕೆ ನಾನು ಭದ್ರಾವತಿಯಲ್ಲಿದ್ದೇನೆ. ಬೆಳಗ್ಗೆಯಷ್ಟೇ ವಿಂಧ್ಯಾ ಆತ್ಮಹತ್ಯೆಗೆ ಯತ್ನಿಸಿರುವುದು ನನಗೆ ಗೊತ್ತಾಯಿತು ಎಂದಿದ್ದಾರೆ ಶ್ರೀಕಿ. (ಒನ್ಇಂಡಿಯಾ ಕನ್ನಡ)