Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಚಾಂದಿನಿ ಚಮಕ್
'ಎ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆಡಗಿ ಚಾಂದಿನಿ ಇದೀಗ 'ಖೈದಿ' ಸಿನಿಮಾದೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿರುವ ಸಂಗತಿ ನಿಮಗೆ ಗೊತ್ತಿದೆ. ಈಗ ಇದೇ ಚಾಂದಿನಿ ಕಾಲಿವುಡ್ ಮತ್ತು ಬಾಲಿವುಡ್ ಗೆ ಹಾರುತ್ತಿದ್ದಾರೆ.
ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಎಸ್.ಎಂ.ವಸಂತ್ ಆಕ್ಷನ್ ಕಟ್ ಹೇಳುತ್ತಿರುವ ದ್ವಿಭಾಷಾ ಚಿತ್ರಕ್ಕೆ ಚಾಂದಿನಿ ಸೆಲೆಕ್ಟ್ ಆಗಿದ್ದಾರೆ. ತಮಿಳು ಮತ್ತು ಹಿಂದಿಯಲ್ಲಿ ಏಕ ಕಾಲದಲ್ಲಿ ರೆಡಿಯಾಗುವ ಈ ಚಿತ್ರದಲ್ಲಿ ಚಾಂದಿನಿ ಜೊತೆಗೆ ಹಾಲಿವುಡ್ ಮಟ್ಟದಲ್ಲಿಯೂ ಹೆಸರಾಗಿರುವ ಗುಲ್ಷನ್ ಗ್ರೋವರ್ ಅಭಿನಯಿಸಲಿದ್ದಾರೆ. ["ಸಂಜೆ ಕೆಂಪಾದಾಗ" ಚಲೆಗಯಿ ಚಾಂದನಿ ಆಗಯಿ]
ಮೂಲತಃ ಕಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಭಾರತೀರಾಜಾ ಅವರ ಶಿಷ್ಯ ಎಸ್.ಎಂ.ವಸಂತ್. ಹೀಗಾಗಿ ಭಾರತೀರಾಜಾ ಅವರ ಸಮ್ಮುಖದಲ್ಲಿಯೇ, ಈ ಪ್ರಾಜೆಕ್ಟ್ ನ ಅನೌನ್ಸ್ ಮಾಡಿದ್ರು ಎಸ್.ಎಂ.ವಸಂತ್. ದ್ವಿಭಾಷೆಯಲ್ಲಿ ಚಿತ್ರ ರೆಡಿಯಾಗುವುದರಿಂದ ಬಾಲಿವುಡ್, ಕಾಲಿವುಡ್ ಮತ್ತು ಹಾಲಿವುಡ್ ನ ತಂತ್ರಜ್ಞರನ್ನ ಬಳಸಿಕೊಳ್ಳುತ್ತಾರಂತೆ.
ಏಕಕಾಲಕ್ಕೆ ಬಾಲಿವುಡ್ ಮತ್ತು ಕಾಲಿವುಡ್ ಗೆ ಹಾರುತ್ತಿರುವುದರಿಂದ ಫುಲ್ ಖುಷ್ ಆಗಿರುವ ಚಾಂದಿನಿ, ''ನಾನು ಎಲ್ಲಿಯೇ ಹೋದರೂ, ಕನ್ನಡದಿಂದ ಬಂದವಳೆಂದು ಹೇಳುತ್ತೇನೆ. ಈ ಚಿತ್ರಕ್ಕೆ ನನ್ನನ್ನ ಆಯ್ಕೆ ಮಾಡಿರುವುದು ನನಗೆ ಅಚ್ಚರಿ ತಂದಿದೆ. ತಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಅಭಿನಯಿಸುತ್ತೇನೆ'' ಅಂತಾರೆ ಚಾಂದಿನಿ. [''ತಾಳೆ ಹೂವ ಪೊದೆಯಿಂದ..'' ರೀಮಿಕ್ಸ್ ಹಾಡು ನೋಡಿದ್ದೀರಾ?]
ಅಂದ್ಹಾಗೆ, ಇನ್ನೂ ಹೆಸರಿಡದ ಈ ಚಿತ್ರ ಕಾದಂಬರಿ ಆಧಾರಿತ. ಯಾವ ಕಾದಂಬರಿ ಅನ್ನೋದನ್ನ ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. (ಫಿಲ್ಮಿಬೀಟ್ ಕನ್ನಡ)