Don't Miss!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆ.ಮಂಜು, ಇಮ್ರಾನ್ ಏಟಿಗೆ ತಿರುಗೇಟು ಕೊಡಲು ಮಾಲಾಶ್ರೀ ತಯಾರು!
ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಇಂದು 'ಮತ್ತೊಂದು ತುರ್ತು ಸುದ್ದಿಗೋಷ್ಠಿ' ಕರೆದಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದಲ್ಲಿರುವ ಸಿಲ್ವರ್ ಸ್ಟಾರ್ ಹೋಟೆಲ್ ನಲ್ಲಿ ಮಾಲಾಶ್ರೀ ಹಾಗೂ ರಾಮು ರವರ 'ದಿಢೀರ್ ಸುದ್ದಿಗೋಷ್ಠಿ' ನಡೆಯಲಿದೆ. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]
ನಿನ್ನೆಯಷ್ಟೇ, 'ಉಪ್ಪು ಹುಳಿ ಖಾರ' ಚಿತ್ರದ ವಿವಾದದ ವಿಚಾರವಾಗಿ ನಟಿ ಮಾಲಾಶ್ರೀ 'ಟೈಮ್ ಸೆನ್ಸ್' ಬಗ್ಗೆ ಇಮ್ರಾನ್ ಸರ್ದಾರಿಯಾ ಬೇಸರ ವ್ಯಕ್ತಪಡಿಸಿದ್ದರು. [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]
''ನಟಿ ಮಾಲಾಶ್ರೀಗೆ ರಾಮು ದುಡ್ಡು ಕೊಡುವುದಿಲ್ಲ'' ಅಂತ ಮಾಲಾಶ್ರೀ ವೈಯುಕ್ತಿಕ ಜೀವನದ ಬಗ್ಗೆ ನಿರ್ಮಾಪಕ ಕೆ.ಮಂಜು ಕಾಮೆಂಟ್ ಮಾಡಿದ್ದರು.
ಸಾಲ್ದು ಅಂತ 'ನಟಿ ಮಾಲಾಶ್ರೀಗೆ 45 ಲಕ್ಷ ರೂಪಾಯಿ ಕೊಟ್ಟಿದ್ದರೂ, ಹೊಸ ಸಂಭಾವನೆ ಕೇಳುತ್ತಿದ್ದಾರೆ' ಅಂತ ಕೊಬ್ರಿ ಮಂಜು ಗರಂ ಆಗಿದ್ದರು. 'ಬೇಕಾದರೆ ನಾನು ಅಳುತ್ತೇನೆ' ಅಂತ ಪತ್ರಿಕಾ ಮಿತ್ರರ ಮುಂದೆ ಅಣಕು ಪ್ರದರ್ಶನ ಮಾಡಿದ್ದರು. ['ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!]
ಇದಾದ ನಂತರ ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡದ 'ಲೇಡಿ ಟೈಗರ್' ಮಾಲಾಶ್ರೀ ಇದೀಗ ಮತ್ತೊಂದು ಬಾರಿ ಪ್ರೆಸ್ ಮೀಟ್ ಮಾಡುತ್ತಿದ್ದಾರೆ. ಅವರೊಂದಿಗೆ ನಿರ್ಮಾಪಕ ರಾಮು ಕೂಡ ಕೆಲ ವಿಷಯಗಳನ್ನ ಬಹಿರಂಗ ಮಾಡಲು ನಿರ್ಧರಿಸಿದ್ದಾರೆ.
ಕೊಬ್ರಿ ಮಂಜು ಹಾಗೂ ಇಮ್ರಾನ್ ಸರ್ದಾರಿಯಾ ಕೊಟ್ಟಿರುವ ಏಟಿಗೆ ನಟಿ ಮಾಲಾಶ್ರೀ ಹೇಗೆ ತಿರುಗೇಟು ನೀಡ್ತಾರೋ, ಕಾದು ನೋಡೋಣ....