Don't Miss!
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- News Lok Sabha Elections 2024: ಬೆಂಗಳೂರಿನಲ್ಲಿ ಮತದಾನದ ದಿನ ಏನಿರುತ್ತೆ...ಏನಿರಲ್ಲ..?
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆ ಬಂಧನಕ್ಕೊಳಗಾದ 'ಬಿಂದಾಸ್ ಹುಡುಗಿ' ನಟಿ ಪ್ರಿಯಾ ಹಾಸನ್
ಸ್ಯಾಂಡಲ್ ವುಡ್ ನ ಹೆಚ್ಚಿನ ನಟ-ನಟಿಯರು ಒಂಟಿ ಜೀವನಕ್ಕೆ ಬಾಯ್ ಬಾಯ್ ಹೇಳಿ, ಜಂಟಿಯಾಗಲು ಹಾತೊರೆಯುತ್ತಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಜಂಟಿಯಾಗುತ್ತಿರುವ ಬೆನ್ನಲ್ಲೆ, ರಾಕ್ ಸ್ಟಾರ್ ಆರ್.ಜೆ ರೋಹಿತ್ ಅವರು ಕೂಡ ಮದುವೆ ಆಗುವ ಮನಸ್ಸು ಮಾಡಿದ್ದಾರೆ.
ಇದೀಗ 'ಜಂಬದ ಹುಡುಗಿ' ಚಿತ್ರದ ಖ್ಯಾತಿಯ ನಟಿ ಪ್ರಿಯಾ ಹಾಸನ್ ಅವರು ಕೂಡ ಇಂದು (ಸೆಪ್ಟೆಂಬರ್ 8) ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. 'ಸಂಸಾರ' ಎಂಬ ಹೊಸ ಪಾತ್ರವನ್ನು ನಿಜ ಜೀವನದಲ್ಲಿ ಮಾಡಲು ಪ್ರಿಯಾ ಅವರು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.[ಪ್ರಿಯಾ ಹಾಸನ್ ಒಂಟಿ ಬಾಳಲ್ಲಿ ಬಂದವನ್ಯಾರು?]
ಅಂದಹಾಗೆ ಜೂನಿಯರ್ ಮಾಲಾಶ್ರೀ ಅಂತಾನೇ ಕರೆಸಿಕೊಳ್ಳುತ್ತಿದ್ದ 'ಜಂಬದ ಹುಡುಗಿ'ಯ ಕತ್ತಿಗೆ ತಾಳಿ ಬಿಗಿಯೋ, ಆ ಸುರ ಸುಂದರಾಂಗ ಯಾರು ಅಂತ ನೋಡಲು, ಮುಂದೆ ಓದಿ....
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
'ಬಿಂದಾಸ್ ಹುಡುಗಿ' ಕನಸಿನ ರಾಜ ಇವರೆ
'ಬಿಂದಾಸ್ ಹುಡುಗಿ' ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಮಾಲಾಶ್ರೀ ಅವರ ತರಾನೇ ಫೈಟ್ ಮಾಡಿ, ಜೂನಿಯರ್ ಮಾಲಾಶ್ರೀ ಎನಿಸಿಕೊಂಡಿದ್ದ ನಟಿ ಪ್ರಿಯಾ ಹಾಸನ್ ಅವರ ಕೈ ಹಿಡಿಯುವ ಸುರ ಸುಂದರಾಂಗ ಎಸ್ ರಾಮು ಎಂಬುವವರು.[ಸೌತ್ ಸೂಪರ್ ಸ್ಟಾರ್ ಕಾಲೆಳೆದರೇ ಪ್ರಿಯಾ ಹಾಸನ್?]
ರಿಯಲ್ ಎಸ್ಟೇಟ್ ಉದ್ಯಮಿ
ಪ್ರಿಯಾ ಹಾಸನ್ ಕೈ ಹಿಡಿಯುತ್ತಿರುವ ಎಸ್ ರಾಮು ಅವರು ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ವಾಸವಾಗಿದ್ದಾರೆ.[ತೆಲುಗು ಚಿತ್ರದಲ್ಲಿ ಜಂಭದ ಹುಡುಗಿ ಪ್ರಿಯಾ ಹಾಸನ್]
ಲವ್ ಕಮ್ ಆರೇಂಜ್
ಕೆಲವು ತಿಂಗಳುಗಳ ಹಿಂದೆ ಟಿ ಪ್ರಿಯಾ ಹಾಸನ್ ಮತ್ತು ರಾಮು ಅವರಿಗೆ ಪರಿಚಯವಾಗಿ, ಸ್ನೇಹವಾಗಿತ್ತು. ಇದೀಗ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ.[ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಈಗ ಸ್ಮಗ್ಲರ್]
ಸಿಂಪಲ್ ಮದುವೆ
ಎಲ್ಲವೂ ತರಾ-ತುರಿಯಲ್ಲಿ ನಡೆದ ಕಾರಣ ಯಾರಿಗೂ ಹೇಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಪ್ರಿಯಾ ಅವರು. ಇಂದು (ಸೆಪ್ಟೆಂಬರ್ 8) ಬೆಳಗ್ಗೆ ಯಶವಂತಪುರದಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ, ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ರಾಮು ಮತ್ತು ಪ್ರಿಯಾ ಅವರ ವಿವಾಹ ಬಹಳ ಸರಳವಾಗಿ ನಡೆಯಲಿದೆ.
ಸೆಪ್ಟೆಂಬರ್ 13 ಅದ್ಧೂರಿ ಕಾರ್ಯಕ್ರಮ
ಇನ್ನು ಪ್ರಿಯಾ ಅವರು ಹೇಳದೇ-ಕೇಳದೆ ಮದುವೆಯಾಗುತ್ತಿದ್ದಾರೆ ಎಂಬ ಪ್ರಶ್ನೆ ಬರೋದು ಬೇಡ. ಸೆಪ್ಟೆಂಬರ್ 13ರಂದು ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಇಡೀ ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸುವ ಸಂಭವ ಇದೆ.
ಪ್ರಿಯಾ ಹಾಸನ್ ಕುರಿತು ಒಂಚೂರು...
'ಬಿಂದಾಸ್ ಹುಡುಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ ನಟಿ ಪ್ರಿಯಾ ಹಾಸನ್, ತದನಂತರ ಶ್ರೀ ವಾಸವಿ ವೈಭವಮ್ ತೆಲುಗು ಚಿತ್ರದಲ್ಲಿ ಮಿಂಚಿದರು. ನಂತರ 'ಸ್ಮಗ್ಲರ್', 'ಗಂಡು ಬೀರಿ', ಮತ್ತು ರೌಡಿ ರಾಣಿ ಚಿತ್ರದಲ್ಲಿ ನಟಿಸಿ ನಾಪತ್ತೆಯಾದರು.