Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐ ಆಮ್ ಇನ್ ಲವ್: ನಟಿಯರಿಗೆ ತಾರಾ ಮೇಡಂ ಪಾಠ
'ಐ ಆಮ್ ಇನ್ ಲವ್' ಚಿತ್ರದ ಪತ್ರಿಕಾಗೋಷ್ಠಿಗೆ ತಡವಾಗಿ ಬಂದ ತಾರಾ, ಈ ಇಬ್ಬರೂ ನಾಯಕಿ ನಟಿಯರು ಹಾಕಿಕೊಂಡಿದ್ದ ಡ್ರೆಸ್ ನೋಡಿ ಕೋಪಗೊಂಡಿದ್ದಾರೆ. ತಕ್ಷಣವೇ ಆ ಇಬ್ಬರು ನಟಿಯರನ್ನು ಕುರಿತು ತಾರಾ ಮೇಡಂ "ಸಿನಿಮಾದಲ್ಲೇನೋ ಓಕೆ, ಪಾತ್ರಕ್ಕೆ ತಕ್ಕ ಡ್ರೆಸ್ ಹಾಕಿಕೊಳ್ಳಲೇ ಬೇಕು. ಆದರೆ 'ಪ್ರೆಸ್ ಮೀಟ್' ಗಳಿಗೆ ಹೀಗೆಲ್ಲಾ ಬರೋದು ಸಭ್ಯತೆಯ ಲಕ್ಷಣವಲ್ಲ" ಎಂಬ ಮಾತು ಹೇಳಿ ನೆರೆದಿದ್ದವರಿಗೆ 'ಶಾಕ್' ಕೊಟ್ಟರು. ಕಾವ್ಯಾ ಹಾಗೂ ನೇಹಾ ಒಂದು ಕ್ಷಣ ತಬ್ಬಿಬ್ಬಾದರು.
ಮುಂದುವರಿದ ತಾರಾ, "ನಮ್ಮ ಸಂಸ್ಕೃತಿ ಉಳಿಸಿ ಬೆಳೆಸೋದು ನಮ್ಮ ಕರ್ತವ್ಯ ಅಲ್ಲಾ? ಒಬ್ಬಳು ಹಿರಿಯ, ಅನುಭವಸ್ಥ ನಟಿಯಾಗಿ ಈ ಮಾತು ಹೇಳುತ್ತಿದ್ದೇನೆ. ನನ್ನ ಮಾತುಗಳಿಂದ ಯಾರೂ ಬೇಜಾರು ಮಾಡಿಕೊಳ್ಳಬೇಡಿ" ಎಂದು ಕೊನೆಯಲ್ಲಿ ಸೇರಿಸಿ ಎಲ್ಲರನ್ನೂ ತಮ್ಮ ಮಾತಿನೇಟಿನಿಂದ ಕಂಗಾಲಾಗಿಸಿದರು. ಚಿತ್ರದ ಪತ್ರಿಕಾಗೋಷ್ಠಿಯೇನೋ ಮುಗಿಯಿತಾದರೂ ಎಲ್ಲರೂ ತಾರಾ ಮಾತುಗಳನ್ನೇ ಚರ್ಚಿಸತೊಡಗಿದ್ದರು.
ಅಲ್ಲಿದ್ದವರಲ್ಲೊಬ್ಬರು ತಾರಾ ಮೇಡಂಗೆ ಒಂದು ಬಾಣ ಬಿಟ್ಟರು..."ನೀವು ಚಿಕ್ಕ ನಟಿಯರಿಗಷ್ಟೇ ಹೇಳ್ತೀರಾ...ದೊಡ್ಡ ನಟಿಯರಿಗೆ ಯಾಕೆ ಹೇಳಲ್ಲ?". ತಕ್ಷಣ ತಾರಾ, "ಅಯ್ಯೋ ರಾಮಾ.., ನನಗೆ ಚಿಕ್ಕವರಾದ್ರೇನು ದೊಡ್ಡವರಾದ್ರೇನು? ರಾಗಿಣಿಗೂ ನಾನೊಮ್ಮೆ ಈ ಮಾತು ಹೇಳಿದೀನಿ. ನನ್ನ ಕಣ್ಣಿಗೆ ಬಿದ್ದಾಗ ಹೇಳೇ ಹೇಳ್ತೀನಿ... ಹುಡುಕಿಕೊಂಡು ಹೋಗಿ ಹೇಳೋಕಾಗುತ್ಯೇ?!" ಎಂದು ಮರುಬಾಣ ಬಿಟ್ಟು ಸುಮ್ಮನಾದರು.
ಅದೆಲ್ಲಾ ಆದ್ಮೇಲೆ "ನಿಮಗೆ ತಾರಾ ಮಾತಿನಿಂದ ಏನು ಅನ್ನಿಸಿತು ಕಾವ್ಯಾ?" ಎಂದು ನಟಿಯರಲ್ಲೊಬ್ಬರನ್ನು ಕೇಳಲಾಗಿ "ಒಬ್ಬೊಬ್ಬರದು ಒಂದೊಂದು ಟೇಸ್ಟ್ ಇರುತ್ತೆ...ಅಭಿಪ್ರಾಯ ಇರುತ್ತೆ" ಎಂದು ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿ ಇನ್ನೊಬ್ಬಳು ನಟಿ ನೇಹಾರನ್ನು ನೋಡಿದರು. ಅವರು 'ಅಷ್ಷೇ!' ಎನ್ನುವಂತೆ ಕಾವ್ಯಾಳ ಮಾತನ್ನು ಅನುಮೋದಿಸಿದರು. ಅಲ್ಲಿದ್ದ ಯಾರೋ 'ಅವರಿಷ್ಟದಂತೆ ಬದುಕುವ ಸ್ವಾತಂತ್ರಕ್ಕೆ ಎಲ್ಲರೂ ಬದ್ಧರು' ಎಂಬ ಮಾತನ್ನು ತಾರಾ ಸೇರಿದಂತೆ ಎಲ್ಲರೂ ಕೇಳಿಸಿಕೊಂಡರಂತೆ ಎಂಬಲ್ಲಿಗೆ ಈ ಸುದ್ದಿ ಸಮಾಪ್ತಿ. (ಒನ್ ಇಂಡಿಯಾ ಕನ್ನಡ)