Don't Miss!
- Finance ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
- News Ganesamoorthy Death: ಟಿಕೆಟ್ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಲಿ ಸಂಸದ ಸಾವು
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Automobiles ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀರು ನಿಲ್ಲಿಸಿ, ಅದೇನಾಗುತ್ತೋ ನೋಡೋಣ: ತಾರಾ
ಪದೇ ಪದೇ ಕಾವೇರಿ ನೀರಿನ ವಿವಾದ ಕರ್ನಾಟಕ ಹಾಗೂ ತಮಿಳುರಾಜ್ಯಗಳ ನಡುವೆ ಸಂಭವಿಸುತ್ತಿದ್ದರೂ ಅದಕ್ಕೊಂದು ಶಾಶ್ವತ ಪರಿಹಾರ ಕೊಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ಅಷ್ಟೇ ಅಲ್ಲ, ನಮ್ಮ ರಾಜ್ಯದ ರಾಜಕಾರಣಿಗಳೂ ಕೂಡ ಈ ವಿಷಯದಲ್ಲಿ ಸೂಕ್ತ ನ್ಯಾಯ ದೊರಕಿಸಿಕೊಳ್ಳಲು ವಿಫಲವಾಗಿವೆ. ಹೀಗೆ ರಾಜಕೀಯ ಮಾಡಿ ತಮ್ಮನ್ನು ಆರಿಸಿಕಳುಹಿಸಿದ ಪ್ರಜೆಗಳಿಗೆ ಅನ್ಯಾಯ ಮಾಡುವುದಕ್ಕಿಂತ ರಾಜಿನಾಮೆ ನೀಡುವುದೇ ಸೂಕ್ತ" ಎಂದಿದ್ದಾರೆ ತಾರಾ.
ಮುಂದುವರಿದ ತಾರಾ "ತುಂಬಾ ದಿನಗಳು ಅಧಿಕಾರದಲ್ಲಿ ಇರುವುದಕ್ಕಿಂತ ನಾಲ್ಕೇ ದಿನಗಳು ಇದ್ದರೂ ತೊಂದರೆಯಿಲ್ಲ. ಹರಿದುಹೋಗುತ್ತಿರುವ ನೀರನ್ನು ಮೊದಲು ನಿಲ್ಲಿಸಿ. ಇರುವ ನಾಲ್ಕು ದಿನಗಳಲ್ಲಿ ಹೀರೋ ಆಗಿಯೇ ಇರೋಣ. ಸಾಮೂಹಿಕ ರಾಜಿನಾಮೆ ನೀಡುವ ಪ್ರಸಂಗ ಬಂದರೂ ಬರಲಿ. ಆದರೆ ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ" ಎಂದು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ಗುಡುಗಿದ್ದಾರೆ ನಟಿ ತಾರಾ.
ಇತ್ತೀಚಿಗಷ್ಟೇ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿರುವ ತಾರಾ, ಮೊನ್ನೆ (06 ಅಕ್ಟೋಬರ್ 2012) ನಡೆದ ಕಾವೇರಿ ಬಂದ್ ಸಂದರ್ಭದಲ್ಲಿ ಚಿತ್ರರಂಗವು ನಡೆಸಿದ ಕಾವೇರಿ ಪರ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅಂದು ಕೂಡ ಸಕ್ರಿಯರಾಗಿ ಭಾಗವಹಿಸಿದ್ದ ತಾರಾ ದಿಟ್ಟ ಹೇಳಿಕೆ ನೀಡಿ ಗಮನಸೆಳೆದಿದ್ದರು. ತಾರಾ ಮಾತುಗಳನ್ನು ಕೇಳುತ್ತಿದ್ದರೆ ನಾಲ್ಕೇ ದಿನ ಅಧಿಕಾರದಲ್ಲಿದ್ದರೂ ದಿಟ್ಟ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ತಾರಾ ಅವರದ್ದು ಎನ್ನಬಹುದು. (ಒನ್ ಇಂಡಿಯಾ ಕನ್ನಡ)