Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಡ್ಡಿದೋಸ್ತ್' ಚಿತ್ರದ ಟ್ರೇಲರ್ ಸೂಪರ್ ಹಿಟ್
ಈ ಚಿತ್ರದ ಟ್ರೇಲರ್ ಚೆನ್ನಾಗಿದೆ ಅಂದ್ರೆ ಇನ್ನು ಸಿನಿಮಾ ಸೂಪರ್ ಆಗಿರುತ್ತದೆ ಬಿಡು ಗುರು ಎಂಬ ಮಾತುಗಳು ಹಲವಾರು ಸಲ ಸಾಬೀತಾಗಿವೆ. ಈಗ ಅಂತಹದ್ದೇ ಮಾತುಗಳು ರಂಗಾಯಣ ರಘು ಹಾಗೂ ಸಾಧು ಕೋಕಿಲ ಅಭಿನಯದ ಕಾಮಿಡಿ ಚಿತ್ರ ಚಡ್ಡಿ ದೋಸ್ತ್ ಬಗ್ಗೆಯೂ ಕೇಳಿಸುತ್ತಿವೆ.
ಎರಡೂವರೆ ನಿಮಿಷಗಳ ಕಾಲವಧಿಯ ಈ ಚಿತ್ರದ ಟ್ರೇಲರ್ ಈಗ ಭಾರಿ ಸದ್ದು ಮಾಡುತ್ತಿದೆ. ಎಸ್.ಆರ್.ಎಸ್ ಮಿಡಿಯಾ ವಿಷನ್ ಲಾಂಛನದಲ್ಲಿ ಆನಂದ್ ಛಾಬ್ರಿಯಾ ಅವರು ನಿರ್ಮಿಸಿರುವ 'ಚಡ್ಡಿ ದೋಸ್ತ್ ಚಿತ್ರ ಸೆಪ್ಟಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದುಡ್ಡು ನೋಡುಕೊಂಡು ಪ್ರೀತ್ಸೋಳು ದುಡ್ದು ಇರೋತನಕ ಇರ್ತಾಳೆ. ಮನಸ್ಸು ನೋಡ್ಕೊಂಡು ಪ್ರೀತ್ಸೋಳು ಮಣ್ಣಿಗೆ ಹೋಗೋತನಕ ಇರ್ತಾಳೆ ಎಂಬ ಡೈಲಾಗ್ ಹಾಗೂ ಲವ್ ಒಂದ್ಸರಿ ಆಗೋಗ್ಬಿಟ್ರೆ ಕ್ಯಾನ್ಸರ್ ಬಂದಂಗೆ....ಎಂಬ ಹಾಡು ಈ ಟ್ರೇಲರ್ ನಲ್ಲಿದೆ.
ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಕಳೆದವಾರ ರಾಜ್ಯಾದ್ಯಂತ 120ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿ ಯಶಸ್ಸಿನತ್ತ ಸಾಗಿದೆ. 'ವಿಕ್ಟರಿ' ಚಿತ್ರ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿಗಳಲ್ಲೂ 'ಚಡ್ಡಿ ದೋಸ್ತ್' ಚಿತ್ರದ ಟ್ರೈಲರ್ ಪ್ರದರ್ಶಿಸಿಲಾಗುತ್ತಿದೆ. ಚಿತ್ರದ ಟ್ರೈಲರ್ ಗೆ ಜನರ ಮೆಚ್ಚುಗೆ ದೊರಕಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.
ಇದೇ ಟ್ರೈಲರ್ ಅನ್ನು ಯೂಟ್ಯೂಬ್ನಲ್ಲಿ ವೀಕ್ಷಿಸುತ್ತಿರುವವರ ಸಂಖ್ಯೆ ಕೂಡ ಅಧಿಕ ಎನ್ನುತ್ತಾರೆ ನಿರ್ದೇಶಕರು. ರಂಗಾಯಣರಘು ಹಾಗೂ ಸಾಧುಕೋಕಿಲ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಶ್ವಿನಿಗೌಡ, ರೂಪಶ್ರೀ, ಅವಿನಾಶ್, ಮಿತ್ರ, ಅಮಿತ್, ಅಶೋಕ್ ಮುಂತಾದವರಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತವಿರುವ 'ಚಡ್ಡಿದೋಸ್ತ್'ಗೆ ಕುಮಾರನ್ ಅವರ ಛಾಯಾಗ್ರಹಣವಿದೆ. ಶರವಣನ್ ಸಂಕಲನ, ಬಾಬಾ ಭಾಸ್ಕರ್, ಮನು ನೃತ್ಯ ನಿರ್ದೇಶನ, ಗುಣ ಅವರ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅಲೆಮಾರಿ ಸಂತು ರಚಿಸಿದ್ದಾರೆ. ಸಂಭಾಷಣೆಯನ್ನು ಜಿ.ನಟರಾಜ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)