Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆನೆಹೊತ್ತ ಮಹಿಳೆಯ ಕೈಹಿಡಿದ ಎಸ್ ನಾರಾಯಣ್
ಈ ಬಗ್ಗೆ ಮಾತನಾಡಿರುವ ಎಸ್ ನಾರಾಯಣ್, "ರಾಜಕೀಯಕ್ಕೆ ಬರುತ್ತೇನೆ ಎಂಬ ಕಲ್ಪನೆಯೇ ನನಗಿರಲಿಲ್ಲ. ಇದನ್ನು ನಿರೀಕ್ಷಿಸಿರಲಿಲ್ಲ. ಇದೊಂದು ದಿಢೀರ್ ಬೆಳವಣಿಗೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆ ಸ್ವತಃ ಅವರೇ ಬೆರಗಾಗಿದ್ದಾರೆ.
ನಾರಾಯಣ್ ಅವರಿಗೆ ಸಿನೆಮಾ ಸಾಕಾಯ್ತೆ? ಎಂದರೆ ಸಿನೆಮಾ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಸಾಕಷ್ಟಿದೆ. ಸಿನೆಮಾ ಮಾಡಬೇಡಿ ಎಂದು ನನಗೆ ಯಾರು ಹೇಳಿಲ್ಲ. ಬಹುಶಃ ಈ ಕ್ಷೇತ್ರದಲ್ಲಿ ತಾವು ಮಾಡಬೇಕಾದ ಕೆಲಸ ಸಾಕಷ್ಟಿದೆ. ಈ ಜನ್ಮದಲ್ಲಿ ಮುಗಿಯದಷ್ಟು ಕೆಲಸವಿದೆ ಎಂದಿದ್ದಾರೆ.
ಅದು ರಾಜಕೀಯವೇ ಇರಲಿ, ಸಿನೆಮಾ ಕ್ಷೇತ್ರವೇ ಇರಲಿ ನನ್ನ ತನವನ್ನು ನಾನು ಬಿಟ್ಟುಕೊಡಲ್ಲ. ನಾನು ಯಾವುದನ್ನೂ ಸುತ್ತಿ ಬಳಸಿ ಹೇಳುವ ಪೈಕಿಯಲ್ಲ. ಎಲ್ಲವನ್ನೂ ನೇರ ನಿಷ್ಠುರವಾಗಿ ಹೇಳುತ್ತೇನೆ. ಚಿತ್ರೋದ್ಯಮದಲ್ಲಿರುವ ಎಲ್ಲರಿಗೂ ಇದು ಗೊತ್ತು. ರಾಜಕೀಯದಲ್ಲೂ ಅಷ್ಟೇ ಇದೇ ರೀತಿ ಇರುತ್ತೇನೆ.
ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದಿರುವ ಕಲಾಸಾಮ್ರಾಟ್, ಜೆಡಿಎಸ್ ಪಕ್ಷದಲ್ಲಿ ತಮಗೆ ಯಾವ ಸ್ಥಾನ ನೀಡುತ್ತಾರೆ ಎಂಬ ಬಗ್ಗೆ ಇನ್ನಷ್ಟೇ ನೋಡಬೇಕು ಎಂದಿದ್ದಾರೆ. ಮೂಲಗಳ ಪ್ರಕಾರ ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಾಜಿನಗರ ಅಥವಾ ಭದ್ರಾವತಿಯಿಂದ ಟಿಕೆಟ್ ನೀಡಬಹುದು ಎನ್ನಲಾಗಿದೆ.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೂ ಎಸ್ ನಾರಾಯಣ್ ಅವರಿಗೂ ಮೊದಲಿನಿಂದಲೂ ಒಡನಾಟವಿತ್ತು. ಕುಮಾರಸ್ವಾಮಿ ಅವರ ಬ್ಯಾನರ್ ನಲ್ಲಿ ಬಂದಂತಹ ಹಲವಾರು ಚಿತ್ರಗಳನ್ನು ನಾರಾಯಣ್ ನಿರ್ದೇಶಿಸಿದ್ದಾರೆ. ಅವುಗಳಲ್ಲಿ 'ಸೂರ್ಯವಂಶ', 'ಗಲಾಟೆ ಅಳಿಯಂದಿರು', 'ಚಂದ್ರಚಕೋರಿ' ಪ್ರಮುಖವಾದವು.
ನಾರಾಯಣ್ ನಿರ್ದೇಶಿಸಿರುವ ಲೇಟೆಸ್ಟ್ ಚಿತ್ರ 'ಅಪ್ಪಯ್ಯ' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೆ ಕನ್ನಡ ಚಿತ್ರರಂಗದ ತಾರೆಗಳಾದ ಪೂಜಾಗಾಂಧಿ, ಮಾಳವಿಕಾ ಅನಿನಾಶ್ ಅವರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಕೈಹಿಡಿದ್ದಾರೆ. ತಾರೆ ರಕ್ಷಿತಾ ಅವರು ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜಾಡಿನಲ್ಲಿ ಈಗ ಕಲಾ ಸಾಮ್ರಾಟ್ ಹೆಜ್ಜೆ ಹಾಕುತ್ತಿರುವುದು ವಿಶೇಷ. (ಒನ್ ಇಂಡಿಯಾ ಕನ್ನಡ)