twitter
    For Quick Alerts
    ALLOW NOTIFICATIONS  
    For Daily Alerts

    ಬುಡಕಟ್ಟಿನವರ ನಡುಕಟ್ಟು ಬಲು ಚೆಂದ, ಕಾಶೀನಾಥ್

    By Rajendra
    |

    ಎರಡು ದಶಕಗಳ ಹಿಂದೆ 'ಭೂಮಿಗೀತ' ಎನ್ನುವ ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಬದುಕು ಬವಣೆಯನ್ನು ತೋರಿಸಲಾಗಿತ್ತು. ನಂತರ ಅಂತಹ ಪ್ರಯೋಗಾತ್ಮಕ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಪ್ರಸಕ್ತ 'ಗೊರೂಕನ' ಎಂಬ ಹೊಸ ಚಿತ್ರದಲ್ಲಿ ಬಿಳಿಗಿರಿರಂಗನ ಬೆಟ್ಟದ ಸೂಲಿಗಾರರ ಕಥೆಯನ್ನು ಹೆಕ್ಕಿಕೊಂಡು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆ ಹಂತಕ್ಕೆ ಬಂದಿದೆ.

    ಚಿತ್ರದ ಪ್ರಚಾರ ಕಾರ್ಯ ಮೊದಲ ಅಂಗವಾಗಿ ಹಾಡುಗಳ ಧ್ವನಿಸಾಂದ್ರಿಕೆ ಇತ್ತೀಚೆಗೆ ಹೊಂಬೆಗೌಡ ಕಾಲೇಜಿನಲ್ಲಿ ಅನಾವರಣಗೊಂಡಿತು. ಐದು ಹಾಡುಗಳಿಗೆ ಸಂಗೀತ ಒದಗಿಸಿರುವ ವಿ.ಮನೋಹರ್ ಮಾತನಾಡುತ್ತಾ ಕಾಮಿಡಿ, ಸೆಂಟಿಮೆಂಟ್, ಆಕ್ಷನ್ ನಂತಹ 100 ಚಿತ್ರಗಳು ಬರುವುದು ಸಾಮಾನ್ಯವಾಗಿದೆ. ಆದರೆ 50 ವರ್ಷದ ಹಿಂದೆ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡಿರುವುದು ನಿರ್ಮಾಪಕಿ ಭಾಗ್ಯ ಚಿನ್ನಸ್ವಾಮಿರವನ್ನು ಮೆಚ್ಚಬೇಕಾಗಿದೆ ಎಂದರು.

    Kashinath
    ಕಾಡಿನ ಮಹತ್ವ, ಕಾಡು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಸಾಲು ಮರದ ತಿಮ್ಮಕ್ಕ ನೂರಾರು ಗಿಡಗಳನ್ನು ನೆಟ್ಟು ಇತರರಿಗೆ ಮಾದರಿಯಾಗಿದ್ದರು. ಅಂತಹ ಹಲವಾರು ಸನ್ನಿವೇಶಗಳು ಚಿತ್ರದಲ್ಲಿ ಬರುತ್ತದೆ. ಕಾಡನ್ನು ಬೆಳಸಿ, ಉಳಿಸಿ ಎಂದು ಸಂದೇಶ ಸಾರುವ ಚಿತ್ರವಾಗಿದೆ ಎಂಬುದು ನಿರ್ದೇಶಕ ಆನಂದ್.ಪಿ.ರಾಜು ಉಕ್ತಿ.

    ಮುಖ್ಯ ಅತಿಥಿಗಳಾಗಿ ಆಗಮಿಸಿ ಸಿಡಿ ಬಿಡುಗಡೆ ಮಾಡಿದ ಹಿರಿಯ ನಟ ಕಾಶೀನಾಥ್ ಕಾಲೇಜು ದಿನಗಳನ್ನು ನೆನಪಿಸಿಕೊಂಡು, ಈಗಿನ ಕಾಲೇಜು ಹುಡುಗರನ್ನು ನೋಡಿದರೆ ಅಸೂಯೆ ಆಗುತ್ತದೆ. ಕೊನೆಯ ಬೆಂಚ್ ವಿದ್ಯಾರ್ಥಿಯಾಗಿದ್ದರಿಂದಲೇ ನಟ, ನಿರ್ದೇಶಕನಾದೆ. ಬುಡಕಟ್ಟು ಜನಾಂಗದವರ ನಡುಕಟ್ಟು, ತಲೆಕಟ್ಟು ಎಲ್ಲವು ಚೆನ್ನಾಗಿರುತ್ತದೆ.

    ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿ ಅಂತ ಅಲವತ್ತುಕೊಂಡು ತಾವೆ ವಂದಾನಾರ್ಪಣೆ ಮಾಡುವಾಗ ಮತ್ತೊಬ್ಬ ಅತಿಥಿ ನಟ ದೀಪಕ್ ಜಸ್ಟ್ ಎರಡು ಗಂಟೆ ತಡವಾಗಿ ಬಂದು ಚಿತ್ರದ ಬಗ್ಗೆ ಕಡಿಮೆ ಮಾತನಾಡಿ ತನ್ನ ವೈಯಕ್ತಿಕ ಸಿನಿಮಾರಂಗದ ಬಗ್ಗೆ ಹೆಚ್ಚು ಹೇಳಿಕೊಂಡರು. ಇದಕ್ಕೂ ಮೊದಲು ನಾಯಕ ನಿಶಾಂತ್ ಮತ್ತು ನಾಯಕಿ ಸೌಜನ್ಯಾ ಚಿತ್ರ ನೋಡಿ ಹರಸಿ ಎಂಬ ಒಕ್ಕೊರಲ ಮಾತುಗಳು ಕೇಳಿಬಂದವು.

    ಸಂಭಾಷಣೆಗೆ ಪ್ರಹ್ಲಾದ್ ಪೆನ್ನು ಕೆಲಸ ಮಾಡಿದೆ. ಭಾಗ್ಯ ಚಿನ್ನಸ್ವಾಮಿ ಪುತ್ರನ ವ್ಯಾಮೋಹಕ್ಕೋಸ್ಕರ ನಿರ್ಮಾಣ ಮಾಡಿದ್ದಾರೆ. ಕಾಶಿನಾಥ್ ರ ಸಿನಿಮಾ ಹಾಡಿಗೆ ನೃತ್ಯ ಹಾಗೂ ಹಲವು ಹಿಟ್ ಗೀತೆಗಳಿಗೆ ಕಾಲೇಜು ವಿದ್ಯಾರ್ಥಿಗಳಿಂದ ಡ್ಯಾನ್ಸ್ ಕಾರ್ಯಕ್ರಮವು ಕಣ್ಣಿಗೆ ತಂಪು ತಂದಿತು. ಪ್ರೋ.ಎಸ್.ಜಿ.ಸಿದ್ದರಾಮಯ್ಯ ರವರು ರಚಿಸಿದ ಸಾಹಿತ್ಯವನ್ನು ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಚಿತ್ರವು ಸದ್ಯದಲ್ಲೆ ತೆರೆಗೆ ಬರಲಿದೆ.

    ಚಿತ್ರ ತಂಡ, ನಟ ಹರ್ಷ, ಮರಿಯಪ್ಪ ಕಾಲೇಜಿನ ಕಾರ್ಯದರ್ಶಿಗಳಾದ ಲೋಕೇಶ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಕಾಲೇಜು ಪ್ರಿನ್ಸಿಪಾಲ್ ನಿರೂಪಣೆಯಲ್ಲಿ ಎಲ್ಲರನ್ನು ವಾದ್ಯಗೋಷ್ಠಿಯಲ್ಲಿ ಹೇಳುವಂತೆ ಹಾಗೂ ಉತ್ರೇಕ್ಷೆ ಮಾತುಗಳು ಅನಾಸಿನ್ ಮಾತ್ರೆಗೆ ಮೊರೆ ಹೋಗುವಂತೆ ಮಾಡಿತು. (ಒನ್ಇಂಡಿಯಾ ಕನ್ನಡ)

    English summary
    Kannada film 'Gorukana' by Anand P Raju, the story is about Soliga community of BR Hills. V Manohar composed audio was released at Homegowda College in Gayathri Nagar in Bangalore after a cultural show. 
    Tuesday, October 15, 2013, 17:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X