Don't Miss!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- News ವಿ ಸೋಮಣ್ಣಗೆ ಎದುರಾಯ್ತು ಸಂಕಷ್ಟ: ಕೈ ನಾಯಕರ ಸಂಪರ್ಕದಲ್ಲಿರುವ ಮಾಧುಸ್ವಾಮಿ: ಕಾಂಗ್ರೆಸ್ ಸೇರ್ಪಡೆ?
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಯದಾದ್ಯಂತ ಮುಂದುವರಿದ 'ಬಹದ್ದೂರ್' ಅಬ್ಬರ
ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯ ಅದ್ದೂರಿ ಚಿತ್ರ 'ಬಹದ್ದೂರ್' ಅಬ್ಬರ ರಾಜ್ಯದಾದ್ಯಂತ ಮುಂದುವರಿದೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಲಲ್ಲಿ ಅರ್ಧ ಶತಕ ಪೂರೈಸಿ ಶತಕದೆಡೆಗೆ ದಾಪುಗಾಲು ಹಾಕುತ್ತಿದೆ.
ಬಹದ್ದೂರ್ ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಧ್ರುವ ಸರ್ಜಾ ಹಾಗೂ ನಾಯಕಿ ರಾಧಿಕಾ ಪಂಡಿತ್ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. [ಬಹದ್ದೂರ್ ಚಿತ್ರ ವಿಮರ್ಶೆ]
ಮತ್ತೊಂದು ಸ್ವಮೇಕ್ ಚಿತ್ರದ ಮೂಲಕ ಧ್ರುವ ಸರ್ಜಾ ಗೆದ್ದಿದ್ದಾರೆ. ಪರಭಾಷೆಯ ಯಾವುದೇ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ 'ಬಹದ್ದೂರ್' ಚಿತ್ರವನ್ನು ತೆರೆಗೆ ತಂದಿರುವ ನಿರ್ಮಾಪಕ ಆರ್ ಶ್ರೀನಿವಾಸ್ ಅವರಿಗೆ ಕಂಪ್ಲೀಟ್ ಪೈಸಾ ವಸೂಲಿ ಚಿತ್ರ ಕೊಟ್ಟ ಖುಷಿ ಇದೆ.
ಅತ್ಯುತ್ತಮ ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಕನ್ನಡದಲ್ಲೇ ಮೊದಲ ಬಾರಿಗೆ ಬಳಸಿಕೊಂಡಿದೆ 'ಬಹದ್ದೂರ್' ಚಿತ್ರತಂಡ. ಬಾಲಿವುಡ್ ನಲ್ಲಿ ಬಳಸಿಕೊಂಡಿರೋ ಈ ಮುಂದುವರಿದ ತಂತ್ರಜ್ಞಾನದಿಂದ ಚಿತ್ರದ ಸೌಂಡ್ ಕ್ವಾಲಿಟಿ ಪ್ರೇಕ್ಷಕರನ್ನ ಥ್ರಿಲ್ಲಾಗಿಸಿದೆ. ಭೂಮಿಯಾಗ ಬೆಳೆ ಐತೆ, ಬಂದೂಕ್ ನಾಗ ಬುಲೆಟ್ ಐತೆ, ನನ್ ಮೈಯಾಗ ಪೊಗರೈತೇ ಎಂಬ ಡೈಲಾಗ್ ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. (ಫಿಲ್ಮಿಬೀಟ್ ಕನ್ನಡ)