Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎರಡನೇ ಸಲ'ದ 'ಆ' ಮಾತುಗಳಲ್ಲಿ 'ಗುರು'ಗಳ ದರ್ಶನ!
ಡಾಕ್ಟರ್:
''ಸೈಕಿಯಾಟ್ರಿಸ್
ಹತ್ರ,
ಅಡ್ವೋಕೇಟ್
ಹತ್ರ,
ಡಾಕ್ಟರ್
ಹತ್ರ,
ಬಿಗ್
ಬಾಸ್
ಹತ್ರ
ಏನೂ
ಮುಚ್ಚಿಡಬಾರದು......ಸೆಕ್ಸ್
ಬಗ್ಗೆನಾ
ಪರವಾಗಿಲ್ಲ
ಹೇಳಿ.....?
ಹುಡುಗಿ:
ನಾನು
ಅದನ್ನ
'ಕಾಫಿ'
ಅಂತ
ಹೇಳ್ಲಾ...?
ಕಾಲೇಜಿನಲ್ಲಿ
ಇರುವಾಗ,
ನಾನು
ಯಾವಗಲೂ
ಕಾಫಿ
ಕುಡಿತಿದ್ದೆ.
ನನಗೆ
ಗೊತ್ತಿರುವವರೇ
ಆವಾಗವಾಗ
ಕುಡಿಸುತ್ತಿದ್ದರು......
ಡಾಕ್ಟರ್:
ಮತ್ತೇನ್
ಪ್ರಾಬ್ಲಂ...?
ಹುಡುಗಿ:
ನಮ್ಮ
ಯಜಮಾನ್ರಿಗೆ
ಕಾಫಿ
ಅಂದ್ರೆನೇ
ಆಗಲ್ಲ''
''ಪ್ರೇಮ ಅಂದ್ಮೇಲೆ 'ತು' ಮತ್ತು 'ತು' ಸೇರುತ್ತೆರೀ....ಅಂದ್ರೆ ತುಟಿ ಮತ್ತು ತುಟಿ ಅಂತ''
ಇಂತಹ ಡಬಲ್ ಮೀನಿಂಗ್ ಡೈಲಾಗ್ ಗಳು ಕೇಳುಗರಿಗೆ ಸ್ವಲ್ಪ ಮುಜುಗರ ಉಂಟು ಮಾಡಿದ್ರು, ಪಡ್ಡೆ ಹೈಕ್ಳು ಮಾತ್ರ ಸಖತ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ, ಸಂಪ್ರದಾಯಸ್ಥ ಪ್ರೇಕ್ಷಕರು ಮಾತ್ರ ಈ ರೀತಿಯ ಸಂಭಾಷಣೆಯನ್ನ ಒಪ್ಪಿಕೊಳ್ಳುವುದಿಲ್ಲ ಬಿಡಿ.['ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ! ]
ಸದ್ಯ, ಇಂತಹ ಡೈಲಾಗ್ ಗಳಿಂದ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಿರೋ ಚಿತ್ರ 'ಎರಡನೇ ಸಲ'. ಗುರುಪ್ರಸಾದ್ ನಿರ್ದೇಶನ ಹಾಗೂ ಧನಂಜಯ್ ನಾಯಕನಾಗಿ ಅಭಿನಯಿಸಿರುವ ಚಿತ್ರ. ಇತ್ತೀಚೆಗಷ್ಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಬರೀ ಡೈಲಾಗ್ ಗಳಿಂದನೇ ಹೆಚ್ಚು ಸುದ್ದಿಯಾಗಿದೆ.
''ನಾವು ಹೀರೋಗಳು ಯಾವಾಗ ಬರ್ತಿವಿ, ಹೇಂಗೆ ಬರ್ತಿವಿ, ಯಾವ ಡ್ರೆಸ್ ನಲ್ಲಿ ಬರ್ತಿವಿ ಅಂತ ನಮ್ಗೆ ಗೊತ್ತಿರಲ್ಲ. ಇದು ಧನಂಜಯ್ ಕೋಟೆ ಕಣೋ''
''ವೃತ್ತ ಬರೆದಾಗಿದೆ. ವೃತ್ತದಲ್ಲಿ ಇರೋದೆಲ್ಲ ನಿಂದೆ. ಟೇಕ್ ಯುವರ್ ಓನ್ ಟೈಮ್ ಬಾಯ್''
ಇನ್ನೂ ಹೀರೋ ಹೇಳುವ ಇಂತಹ ಡೈಲಾಗ್ ಗಳು ಕೂಡ ಸ್ವಲ್ಪ ಫನ್ನಿ ಎನಿಸಿವೆ. ಈಗಾಗಲೇ ಸಿನಿಮಾಗಳಲ್ಲಿ ಬಂದು ಹೋಗಿರುವ ಮಾಸ್ ಡೈಲಾಗ್ ಗೆ, ಸ್ವಲ್ಪ ರಿಮಿಕ್ಸ್ ಮಾಡಿ ಕಾಮಿಡಿಯಾಗಿ ಬಳಸಲಾಗಿದೆ.
''ಅವನಯ್ಯನ್ ಇಕ್ಕು ಮಗ, ಇವನಯ್ಯನ್ ಇಕ್ಕು ಮಗ, ಮುಖ ಮೂತಿ ನೋಡಬೇಡ. ಚಚ್ಚು ಮಗ,,,,ಬಾರ್ಸೂ ಮಗ.....'' ಎಂಬ ಪದಗಳನ್ನ ಹಾಡಿನಲ್ಲಿ ಬಳಸಲಾಗಿದೆ.
ಅಂದ್ಹಾಗೆ, ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ಬೇರೆ ಯಾರು ಅಲ್ಲ. ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರೇ, ಗುರು ಪ್ರಸಾದ್ ಅವರ ಸಂಭಾಷಣೆ ಅಂದ್ರೆ ಕೇಳಬೇಕಾ. ಈ ಹಿಂದೆ 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳಲ್ಲೂ ಇದೇ ಶೈಲಿಯ ಸಂಭಾಷಣೆಯನ್ನ ಕೇಳಿದ್ದೀರಿ. ಈಗ 'ಎರಡನೇ ಸಲ' ಚಿತ್ರದಲ್ಲೂ ಗುರುಪ್ರಸಾದ್ ಅವರು ಇದು ನನ್ನ ಸಿನಿಮಾ ಅಂತ ಈ ರೀತಿ ಹೇಳಿದ್ದಾರೆ ಅನ್ಸುತ್ತೆ.
ಸದ್ಯ ಗಾಂಧಿನಗರದಲ್ಲಿ ಯಾರ ಬಾಯಲ್ಲಿ ನೋಡಿದ್ರೂ 'ಕಾಫಿ' ಎಂಬ ಪದ ಸರ್ವೇ ಸಾಮಾನ್ಯವಾಗಿದೆ. 'ಎರಡನೇ ಸಲ' ಚಿತ್ರದ ಎಫೆಕ್ಟ್ ಗೆ 'ಕಾಫಿ'ಗೆ ಹೊಸ ಅರ್ಥವೇ ಹುಟ್ಟಿಕೊಂಡಿದೆ. ಅದೇನೇ ಇರಲಿ, ಇದು ಬರಿ ಸ್ಯಾಂಪಲ್ ಮಾತ್ರ. ಖಾರ, ಖಡಕ್, ಪಂಚಿಂಗ್ ಅಂತಹ ಡೈಲಾಗ್ ಗಳು ಇನ್ನೂ ಸಿನಿಮಾದಲ್ಲಿ ನಿರೀಕ್ಷಿಸಿಬಹು.