Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಣಿ ಕೊಲೆಗಳ ಸುತ್ತ ಹೊಸಬರ ಚಿತ್ರ 'ಮರೀಚಿಕೆ'
ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ತಾಂತ್ರಿಕತೆ ಹಾಗೂ ವಿಭಿನ್ನ ಶೈಲಿಯ ನಿರೂಪಣೆಯಿಂದಲೇ ಗೆಲುವು ಸಾಧಿಸಿವೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ದೊಡ್ಡ ಸ್ಟಾರ್ ಇಲ್ಲದಿದ್ದರೂ ಆ ಸಿನಿಮಾಗಳು ಪ್ರೇಕ್ಷಕರನ್ನು ಆಕರ್ಷಿಸುವ ಈ ನಿಟ್ಟಿನಲ್ಲಿ ಬರುತ್ತಿರುವ ಮತ್ತೊಂದು ಚಿತ್ರವೇ 'ಮರೀಚಿಕೆ.
ಕಲಾವಿದರು, ತಂತ್ರಜ್ಞರನ್ನೊಳಗೊಂಡಂತೆ ಸಂಪೂರ್ಣವಾಗಿ ಹೊಸಬರೇ ಸೇರಿಕೊಂಡು ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಆರ್.ಪಿ.ಸಿ.ಲೇಔಟ್ ನ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. [ಸ್ಯಾಂಡಲ್ ವುಡ್ ನಲ್ಲಿ 105 ಡಿಗ್ರಿ ಹಾರರ್ ಫೀವರ್]
ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ರೆಡಿ ಮಾಡಿಕೊಂಡು ಗಾಂಧಿನಗರದಲ್ಲಿ ಸಾಕಷ್ಟು ಅಲೆದಾಡಿದರೂ ಹೊಸಬರೆಂದು ಯಾವ ನಿರ್ಮಾಪಕರು ಒಪ್ಪದಿದ್ದಾಗ ನಿರ್ದೇಶಕರ ರಾಜ್ ಮಯೂರ್, ನಾಯಕ ಸಂಜಯ್ ಸೇರಿದಂತೆ 4 ಜನ ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನವೊಂದರ ಸುತ್ತ ನಡೆಯುವಂಥ ಕಥೆ ಇದಾಗಿದ್ದು, ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು 50 ದಿನಗಳ ಕಾಲ ಶೂಟಿಂಗ್ ನಡೆಸಲಾಗುವುದು. ಚಿತ್ರದ ಶೇ.60ರಷ್ಟು ಚಿತ್ರೀಕರಣ ಫಾರೆಸ್ಟ್ ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಇದೊಂದು ಮರ್ಡರ್ ಮಿಸ್ಟರಿಯಾಗಿದ್ದು 4 ಜನ ಗೆಳೆಯರು ಸೇರಿ ಟ್ರಾವೆಲ್ ಮಾಡುವಾಗ ನಡೆಯುವ ಅಪರೂಪದ ಘಟನೆಗಳೇ ಚಿತ್ರದ ಹೈಲೈಟ್ಸ್. ಒಟ್ಟಾರೆ ಹಣದ ಹಿಂದೆ ಮನುಷ್ಯ ಹೋದಾಗ ಆತ ಯಾವ ಮಟ್ಟ ತಲುಪುತ್ತಾನೆ. ಸ್ನೇಹ ಸಂಬಂಧಗಳು ಹೇಗೆ ಬೆಲೆ ಕಳೆದುಕೊಳ್ಳುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.
ಈ ಚಿತ್ರದ ನಾಯಕ ಸಂಜಯ್ ಮೂಲತಃ ಬೆಳಗಾವಿಯವರು. ಅಭಿನಯಿಸಬೇಕೆಂಬ ಆಸೆಯಿಂದ ತರಬೇತಿ ಕೂಡ ಪಡೆದಿದ್ದಾರೆ. ಅಲ್ಲದೆ ನಿರ್ದೇಶಕ ರಾಜ್ ಮಯೂರ್ ಇವರ ಸ್ನೇಹಿತ. ಇನ್ನು ನಾಯಕಿ ಮಾನಸಿ ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮೊಗ್ಗಿನ ಮನಸ್ಸು', 'ಬ್ಲಾಕ್ ರೋಜ್' ಇವರ ಪ್ರಮುಖ ಸಿನಿಮಾಗಳು.
ಈ ತರಹದ ಸಿನಿಮಾ ಈ ಹಿಂದೆ ಬಂದಿಲ್ಲ ಎಂದು ಹೇಳಿಕೊಂಡ ನಿರ್ದೇಶಕ ರಾಜ್ ಮಯೂರ್ ಹೊಸಬರ ಹೊಸ ಪ್ರಯತ್ನಕ್ಕೆ ಜನ ಖಂಡಿತ ಪ್ರೋತ್ಸಾಹಿಸುವರೆಂದು ಹೇಳಿದರು. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಸಮಾರಂಭಕ್ಕೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.
ಕಳೆದ 5-6 ವರ್ಷಗಳಿಂದ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮನೋಜ್.ಎಸ್. ಮೊದಲ ಬಾರಿಗೆ ಈ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದಾರೆ. ಸಂದೀಪ್ ಈ ಚಿತ್ರಕ್ಕೆ ಛಾಯಾಗ್ರಾಹಕರು. (ಒನ್ಇಂಡಿಯಾ ಕನ್ನಡ)