Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಜ್ ಮಹಲ್ ಮುಂಭಾಗದಲ್ಲಿ 'ಮುಮ್ತಾಜ್' ಮುಕ್ತಾಯ
ಮುಮ್ತಾಜ್ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವುದು ಸುಂದರ ತಾಜ್ ಮಹಲ್. ದೊರೆ ಶಹಜಾನ್ ತನ್ನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಿಸಿದ ಸುಂದರ ಸೌಧವಿದು. ಈ ಹಿಂದೆ ದಿನೇಶ್ ಬಾಬು ಅವರ ಬಳಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಪಡೆದಿರುವ ರಾಘವ ಮುರಳಿ ಆಧುನಿಕ ಮುಮ್ತಾಜ್ ಮತ್ತು ಶಹಜಹಾನ್ ರನ್ನು ತೆರೆಯ ಮೇಲೆ ತರುತ್ತಿದ್ದಾರೆ.
ನವಗ್ರಹ ಚಿತ್ರದಲ್ಲಿ "ಕಣ್ ಕಣ್ಣ ಸಲಿಗೆ..." ಎಂದು ಪ್ರೇಮರಾಗ ಹಾಡಿದ್ದ ಮುದ್ದಾದ ಜೋಡಿ ಧರ್ಮ ಕೀರ್ತಿರಾಜ್ ಹಾಗೂ ಶರ್ಮಿಳಾ ಮಾಂಡ್ರೆ ಒಟ್ಟಾಗಿ ಅಭಿನಯಿಸಿರುವ ಈ ಚಿತ್ರದ ಹೆಸರು 'ಮುಮ್ತಾಜ್'. ಅದೇ ಚಿತ್ರದಲ್ಲಿ ನಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ವಿಶೇಷ.
ಬೆಂಗಳೂರು, ಮೈಸೂರು, ಕೆ.ಜಿಎಫ್, ಬಲಮುರಿ ಹಾಗೂ ಆಗ್ರಾದ ತಾಜ್ ಮಹಲ್ ಬಳಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸುಮಾರು 55 ದಿಒನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು ತಾಜ್ ಮಹಲ್ ಮುಂಭಾಗದಲ್ಲಿ ಚಿತ್ರದ ಪ್ರಮುಖ ಭಾಗವನ್ನು ಚಿತ್ರೀಕರಿಸಲಾಗಿದೆ. ನಾಯಕನಟ ದರ್ಶನ್ ಈ ಚಿತ್ರದಲ್ಲಿ ಒಬ್ಬ ಡಾನ್ ಪಾತ್ರ ನಿರ್ವಹಿಸಿದ್ದು, ಈ ಪ್ರೇಮಿಗಳಿಬ್ಬರನ್ನೂ ಒಂದುಗೂಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಹೊಸದಾಗಿ ಪ್ರೇಮಪಾಶಕ್ಕೆ ಸಿಲುಕಿರುವವರು, ಮಾಜಿ ಪ್ರೇಮಿಗಳು, ಅಲ್ಲದೆ, ಮುಂದೆ ಪ್ರೇಮಿಗಳಾಗುವವರು ಮಾತ್ರವಲ್ಲದೆ, ಹೆತ್ತ ತಂದೆ-ತಾಯಂದಿರಿಗೂ ಚಿತ್ರ ನೋಡಿದ ಮೇಲೆ ಕಣ್ತುಂಬಿ ಬುರುವುದು ನಿಶ್ಚಿತ ಎನ್ನುವ ನಿರ್ದೇಶಕರು ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಿರತರಾಗಿದ್ದಾರೆ.
ಡಬ್ಬಿಂಗ್, ಎಡಿಟಿಂಗ್ ಮುಗಿಸಿ, ರೀ ರೆಕಾರ್ಡಿಂಗ್ ಹಂತರದಲ್ಲಿರುವ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ಏಪ್ರಿಲ್ ಮೊದಲ ವಾರದಲ್ಲಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆಕ್ಷನ್ ಕಟ್ ಕ್ರಿಯೇಷನ್ಸ್ ಅಡಿಯಲ್ಲಿ ಕೆ.ಎನ್. ನರಸಿಂಹಮೂರ್ತಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೆ.ವಿ. ಪ್ರವೀಣ್ ಅವರ ಸಂಗೀತ ಸಂಯೋಜನೆಯಿದೆ. (ಫಿಲ್ಮಿಬೀಟ್ ಕನ್ನಡ)