Don't Miss!
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
125 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಸರ್ವಿಸ್ ಮಾಡಿದ ಶರಣ್-ಮಯೂರಿ
'ರಣವಿಕ್ರಮ' ಮತ್ತು 'ಜೆಸ್ಸಿ' ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಪವನ್ ಒಡೆಯರ್ ಅವರು ಕಾಮಿಡಿ ಕಿಂಗ್ ಶರಣ್ ಮತ್ತು ನಟಿ ಮಯೂರಿ ಅವರನ್ನು ಸೇರಿಸಿಕೊಂಡು 'ನಟರಾಜ ಸರ್ವಿಸ್' ಸ್ಟೇಷನ್ ಓಪನ್ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತು.
ಇದೀಗ ಚಿತ್ರದ ಶೂಟಿಂಗ್ ಕೊನೆಯ ಹಂತದವರೆಗೆ ತಲುಪಿದ್ದು, ಕೆಲವು ಹಾಡುಗಳ ಶೂಟಿಂಗ್ ಬಾಕಿ ಉಳಿದಿದೆ. ಅಂದಹಾಗೆ 'ನಟರಾಜ ಸರ್ವಿಸ್' ಚಿತ್ರತಂಡ, ನಟ ಶರಣ್ ಮತ್ತು ನಟಿ ಮಯೂರಿ ಅವರ ಜೊತೆಗೆ ಯಲ್ಲಾಪುರದ ಸುತ್ತ-ಮುತ್ತ ಶೂಟಿಂಗ್ ಗಾಗಿ ನಡೆದೇ ಕ್ರಮಿಸಿದ್ದಾರಂತೆ.[ಪವನ್ ಒಡೆಯರ್ 'ನಟರಾಜ ಸರ್ವೀಸ್' ಶೂಟಿಂಗ್ ದಿಢೀರ್ ನಿಂತಿದ್ಯಾಕೆ?]
ಸುಮಾರು 125 ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿ ಯಲ್ಲಾಪುರ ಸುತ್ತ-ಮುತ್ತ ಶೂಟಿಂಗ್ ಮುಗಿಸಿದ್ದು, ಚಿತ್ರೀಕರಣದ ವೇಳೆ ಕೂಡ ಕಾಲ್ನಡಿಗೆಯ ಮೂಲಕ ಸರ್ವಿಸ್ ಮಾಡಿದ್ದಾರೆ.
ಯಲ್ಲಾಪುರ ಪ್ರದೇಶಗಳಲ್ಲಿ ಪ್ರಯಾಣ ವ್ಯವಸ್ಥೆಗೆ ವಾಹನಗಳು ಸಿಗುವುದು ಕಷ್ಟಕರವಾದ್ದರಿಂದ ಆ ಪ್ರದೇಶದ ಬೇರೆ ಬೇರೆ ಜಾಗಗಳಿಗೆ ನಡೆದೇ ಹೋಗಬೇಕಾಯಿತು. ಸುಮಾರು 20 ದಿನಗಳಲ್ಲಿ 125 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಚಿತ್ರತಂಡ ಸಾಗಿದೆ.['ನಟರಾಜ ಸರ್ವಿಸ್' ಸ್ಟೇಷನ್ ನಲ್ಲಿ ಭರ್ಜರಿ ಟಪ್ಪಾಂಗುಚ್ಚಿ, ಡಾನ್ಸ್.!]
ಈಗಾಗಲೇ ಟಾಕಿ ಪೋರ್ಷನ್ ಪೂರ್ತಿಗೊಳಿಸಿರುವ ಚಿತ್ರತಂಡ ಹಾಡಿನ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಕ್ಕೆ ತಯಾರಿ ನಡೆಸುತ್ತಿದೆ. ಸದ್ಯಕ್ಕೆ ನಿರ್ದೇಶಕ ಪವನ್ ಕುಮಾರ್ ಅವರಿಗೆ ಅತಿಯಾದ ಕಣ್ಣು ಬೇನೆ ಆರಂಭವಾದ ಹಿನ್ನಲೆಯಲ್ಲಿ ಶೂಟಿಂಗ್ ಗೆ ಕೆಲವು ದಿನಗಳ ಕಾಲ ಬ್ರೇಕ್ ಬಿದ್ದಿದೆ.['ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ]
ದಾಂಡೇಲಿಯಲ್ಲಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟಿ ಮಯೂರಿ ನಟ ಶರಣ್ ಮತ್ತು ನಿರ್ದೇಶಕ ಪವನ್ ಒಡೆಯರ್ ಮಾಡಿದ ಮೋಜು ಮಸ್ತಿ ನೋಡಿ ಈ ವಿಡಿಯೋದಲ್ಲಿ...