Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೆರಳು' ಚಿತ್ರ ಬಿಡುಗಡೆ ಎರಡು ವಾರ ಮುಂದಕ್ಕೆ
ಈ ಹಿಂದೆ ತಿಳಿಸಲಾಗಿದ್ದ ವಿಚಾರ 'ನೆರಳು' ಚಿತ್ರವೂ ಇದೆ ಜುಲೈ 26ರಂದು ಬಿಡುಗಡೆ ಆಗುವುದು ಎಂದು, ಈಗ ಎರಡು ವಾರ ಮುಂದೆ ಹೋಗಿದೆ. ಅಂದರೆ ಆಗಸ್ಟ್ 9 ರಂದು 'ನೆರಳು' ಬಿಡುಗಡೆ ಆಗಲಿದೆ. ಸದ್ಯದ ಇನ್ನೊಂದು ವಿಚಾರ ಅಂದರೆ ಈ ಚಿತ್ರದ ವಿಡಿಯೋ ತುಣುಕುಗಳು ಯೂಟ್ಯೂಬ್ ನಲ್ಲಿ ಹೆಚ್ಚು ವೀಕ್ಷಕರನ್ನು ಸೃಷ್ಟಿಸಿಕೊಂಡಿರುವುದು.
ಚಿತ್ರಕಥೆ,
ಸಂಭಾಷಣೆ
ಬರೆದು
ಚಿತ್ರದ
ನಿರ್ದೇಶನ
ಮಾಡಿದ್ದ
ಯುವ
ಪ್ರತಿಭೆ
ವಿನೋದ
ಖಣದಾಳೆ
ಚಿತ್ರ
ಬಿಡುಗಡೆಗೂ
ಮುನ್ನವೇ
ಅನಾರೋಗ್ಯದಿಂದ
ವಿಧಿವಶರಾಗಿದ್ದು
ಮಾತ್ರ
ವಿಪರ್ಯಾಸ.
ನಿರ್ಮಾಪಕ
ಅತುಲ್
ಕುಲಕರ್ಣಿ
ಅವರ
ಪ್ರಥಮ
ಕಾಣಿಕೆ
'ನೆರಳು'
ಚಿತ್ರ.
ವಿನೋದ್
ಕೆ.
ಅವರ
ಪ್ರಥಮ
ನಿರ್ದೇಶನದ
ಚಿತ್ರ
ಮನರಂಜನೆ
ಜೊತೆಗೆ
ಮನಕ್ಕೆ
ಒಪ್ಪುವ
ವಿಚಾರವನ್ನು
ಸಹ
ಪ್ರೇಕ್ಷಕನ
ಮುಂದೆ
ಇಡಲಿದೆ.
ತಪ್ಪು ಮಾಡದವರು ಯಾರವ್ರೆ... ಆ ತಪ್ಪು ಸರಿಪಡಿಸಿಕೊಂಡು ಹೋಗುವುದೇ ಜೀವನ. ಆದರೆ ಕೆಲವರು ತಪ್ಪು ಮಾಡುತ್ತಲೆ ಇರುತ್ತಾರೆ. ಅಂತಹವರಿಗೆ ಪಾಪಪ್ರಜ್ಞೆ ನೆರಳಿನಂತೆ ಕಾಡುತ್ತಲೆ ಇರುವುದು. ಇಂತಹ ವಿಚಾರವನ್ನು ಇಟ್ಟುಕೊಂಡು ಬೆಳಗಾವಿಯಲ್ಲಿ 'ಜೈ ಕರ್ನಾಟಕ' ಪತ್ರಿಕೆಯ ಮಾಧ್ಯಮ ಮಿತ್ರರು ಕೆಲವು ಟಿ.ವಿ ಸೀರಿಯಲ್ ಗಳಿಗೆ (ಕಪ್ಪು ತೆರೆ, ಕುಂಕುಮ ಭಾಗ್ಯ, ತೇಲಿಹೋದ ನೌಕೆ) ಧಾರವಾಹಿಗಳಿಗೆ ಕೆಲಸ ಮಾಡಿದ ಅನುಭವದಿಂದ ದೊಡ್ಡ ಪರದೆಯ ಚಿತ್ರ ನಿರ್ದೇಶಿಸಿದ್ದಾರೆ.
ನಿರ್ಮಾಪಕ ಅತುಲ್ ಕುಲಕರ್ಣಿ ಅವರು ಇದೊಂದು ಥ್ರಿಲ್ ನೀಡುವ ಜೊತೆ ಮನೆಮಂದಿಗೆ ಇಷ್ಟ ಆಗುವ ಸಿನೆಮಾ ಅಂತಾರೆ. ಅವರು ಮಹಾರಾಷ್ಟ್ರ ಮೆಟೀರಿಯಲ್ ಟೆಸ್ಟಿಂಗ್ ಕಾರ್ಖಾನೆ ಒಡೆಯ. ಇದೇ ಮೊದಲ ಬಾರಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಪಾತ್ರವರ್ಗದಲ್ಲಿ ಸಂಜೀವ್, ಆಕಾಶ್, ಶಶಿಕುಮಾರ್, ಹಿರಿಯ ನಟ ಅವಿನಾಷ್ ಹಾಗೂ ಸುಧಾ ಬೆಳವಾಡಿ ಜೋಡಿ ಈ ಚಿತ್ರದಲ್ಲಿದೆ. ಹೊನ್ನವಳ್ಳಿ ಕೃಷ್ಣ, ಶಂಕರ್ ಅಶ್ವಥ್ ಇದ್ದಾರೆ. ಶಿವರಾಜ್ ಮೇಹು ಅವರ ಸಂಕಲನ, ಶಂಕರ್ ಅವರ ಛಾಯಾಗ್ರಹಣ, ಶ್ರೀಹರ್ಷ ಅವರ ಸಂಗೀತ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)