Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ನಿರ್ಮಾಪಕನಾಗುವತ್ತ ಸಚಿವ ಆಂಜನೇಯ ಚಿತ್ತ!
ಚಿತ್ರರಂಗಕ್ಕೂ ರಾಜಕೀಯಕ್ಕೂ ಏನೋ ಒಂಥರಾ ಅವಿನಾಭಾವ ನಂಟು. ಅಲ್ಲಿದ್ದೋರು ಇಲ್ಲಿಗೆ, ಇಲ್ಲಿದ್ದೋರು ಅಲ್ಲಿಗೆ ಹೋಗೋದು ಬರೋದು ಸಾಮಾನ್ಯ. ಆದ್ರೆ ರಾಜಕೀಯ ರಂಗದಲ್ಲೇ ಇದ್ದುಕೊಂಡು ಚಿತ್ರ ನಿರ್ಮಾಣ ಮಾಡುವ ಕನಸ್ಸು ಕಂಡವರು ಬೆರಳೆಣಿಕೆ ಮಂದಿ ಮಾತ್ರ. ಅದ್ರಲ್ಲೂ ಆದಾಯದ ಮೂಲವಾಗಿ ಚಿತ್ರರಂಗವನ್ನ ಬಳಸಿಕೊಳ್ಳುವವರೇ ಹೆಚ್ಚು.
ಅಂತದ್ರಲ್ಲಿ,
ಈ
ವಿಚಾರವನ್ನು
ಬದಿಗೊತ್ತಿ,
ಸಮಾಜಿಕ
ಕಳಕಳಿಯ
ಜೊತೆ
ಸಾಮಾಜಿಕ
ಸ್ಥಾನಮಾನಗಳು,
ಪರಿಸ್ಥಿತಿಯನ್ನು
ಅರ್ಥಪೂರ್ಣವಾಗಿ
ಕಟ್ಟಿಕೊಡಲು
ಇಬ್ಬರು
ಸಚಿವರು
ಬಯಸುತ್ತಿದ್ದಾರೆ.
ಅವರೇ
ಸಣ್ಣ
ನೀರಾವರಿ
ಸಚಿವರಾದ
ಶಿವರಾಜ್
ತಂಗಡಗಿ
ಹಾಗೂ
ಸಮಾಜ
ಕಲ್ಯಾಣ
ಸಚಿವ
ಎಚ್.ಆಂಜನೇಯ.
ಯಡಿಯೂರಪ್ಪನವರ ಆಡಳಿತ ಕಾಲಾವಧಿಯ ರಾಜಕೀಯ ಹಾಗೂ ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನಾಧರಿಸಿ ಚಿತ್ರ ಮಾಡ್ತೀನಿ ಅಂತ ಈ ಹಿಂದೆ ಶಿವರಾಜ್ ತಂಗಡಗಿ ಹೊರಟಿದ್ರು. ಆದ್ರೆ ಸರಿಯಾದ ಕಾಲ ಕೂಡಿಬಾರದ ಕಾರಣ ಆ ಕಲ್ಪನೆಯ ಕೂಸು ಜೀವ ಪಡೆಯಲಿಲ್ಲ. ಈಗ ಇಂತದ್ದೇ ಪ್ರಯತ್ನಕ್ಕೆ ಕೈಹಾಕಿದ್ದಾರೆ ಸಮಾಜಕಲ್ಯಾಣ ಸಚಿವ ಆಂಜನೇಯ.
ರಾಜಕೀಯ
ರಂಗದಲ್ಲಿ
ತಮ್ಮದೇ
ಆದ
ಮ್ಯಾನರಿಸಂ
ನಿಂದ
ಸದ್ದು
ಸುದ್ದಿ
ಮಾಡಿರುವ
ಆಂಜನೇಯ
ಈಗ
ಚಿತ್ರ
ನಿರ್ಮಾಣಕ್ಕೆ
ಮುಂದಾಗಿ
ಅಲ್ಲೂ
ಹೊಸ
ಇನ್ನಿಂಗ್ಸ್
ಆರಂಭಿಸಲು
ಪ್ಲಾನ್
ಮಾಡಿಕೊಂಡಿದ್ದಾರೆ.
ಆ
ಮೂಲಕ
ತಮ್ಮ
ಬಹುದಿನಗಳ
ಕನಸನ್ನು
ಸಾಕಾರಗೊಳಿಸಲು
ಈಗವರು
ನಿರ್ಧರಿಸಿದ್ದಾರೆ.
[ಸಾಮೂಹಿಕ
ವಿವಾಹದಲ್ಲಿ
ಸಚಿವರ
ಪುತ್ರಿ
ಮದುವೆ!]
ಸಾಮಾಜಿಕ ಸಂದೇಶ ಸಾರುವ ಭಕ್ತಿಪ್ರಧಾನ ಚಿತ್ರವೊಂದರ ನಿರ್ಮಾಣಕ್ಕೆ ಆಂಜನೇಯ ಮುಂದಾಗಿದ್ದಾರೆ. ಹದಿನಾಲ್ಕನೇ ಶತಮಾನದ ಪಂಚಾಚಾರ್ಯರಲ್ಲಿ ಒಬ್ಬರಾದ 'ವಿಶ್ವಬಂಧು ಮರುಳ ಸಿದ್ಧರಾಜು' ರವರ ಜೀವನಕಥೆ ಆಧರಿಸಿ ಚಲನಚಿತ್ರ ನಿರ್ಮಾಣ ಮಾಡುವ ಯೋಚನೆ ಮಾಡಿದ್ದಾರೆ ಆಂಜನೇಯ.
ಈ ಸಂಬಂಧ ಹಿರಿಯ ನಿರ್ದೇಶಕ ರೇಣುಕಾಶರ್ಮ ಜೊತೆ ಚಿತ್ರಕಥೆ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರಂತೆ. ಆದಷ್ಟು ಬೇಗ ಚಿತ್ರ ನಿರ್ಮಾಣ ಮಾಡುವ ಉತ್ಸಾಹದಲ್ಲಿದ್ದಾರೆ ಸಚಿವ ಸಾಹೇಬರು. ಇಲ್ಲಿಯವರೆಗೂ ಚಿತ್ರಕಥೆ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದು ಪಾತ್ರವರ್ಗದ ಬಗ್ಗೆ ನಿರ್ಧಾರ ಮಾಡಿಲ್ಲ. ಅಂದುಕೊಂಡಿದ್ದು ಇನ್ ಟೈಂಗೆ ಆದ್ರೆ ಸಚಿವ ಆಂಜನೇಯ ಮುಂದೆ ರಾಜಕಾರಣಿ ಕಂ ನಿರ್ಮಾಪಕ ಅಂತ ಗುರುತಿಸಿಕೊಳ್ಳುವುದು ಖಚಿತ.