Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಠಾರಿವೀರ ಬಗ್ಗೆ ನನಗೆ ತೀರಾ ಹೋಪ್; ಅಂಬರೀಷ್
ಇಂದು (ಮೇ 10, 2012) ಬಿಡುಗಡೆಯಾಗಿರುವ ಕಠಾರಿವೀರ ಸುರಸುಂದರಾಂಗಿ ಚಿತ್ರದ ಬಗ್ಗೆ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಷ್ ತೀರಾ ನಿರೀಕ್ಷೆ ಇಟ್ಟಿದ್ದಾರಂತೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅಂಬಿ, "ಆ ಚಿತ್ರದಲ್ಲಿ ಮಾಡಿರುವ ಯಮನ ಪಾತ್ರ ತುಂಬಾ ಖುಷಿ ಕೊಟ್ಟಿದೆ. 15 ಕೆಜಿ ಆಭರಣಗಳನ್ನು ಮೈಮೇಲೆ ಹಾಕಿಕೊಂಡು ಚಿತ್ರೀಕರಣದಲ್ಲಿ ಭಾಗವಹಿಸಿರುವುದು ಅಪೂರ್ವ ಅನುಭವ ನೀಡಿದೆ" ಎಂದಿದ್ದಾರೆ.
ಕನ್ನಡದ ಮೊಟ್ಟ ಮೊದಲ ಸಂಪೂರ್ಣ '3ಡಿ' ಚಿತ್ರದಲ್ಲಿ ನಟಿಸಿರುವುದು ಹಾಗೂ ಚಿತ್ರದಲ್ಲಿರುವ ಎಲ್ಲಾ ವರ್ಗಗಳಿಗೂ ಇಷ್ಟವಾಗಬಹುದಾದ, ತಮಾಷೆಯಿಂದ ಕೂಡಿದ ಸಂಭಾಷಣೆ ತಮಗೆ ಇಲ್ಲಿಯವೆರೆಗೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ಅನುಭವ ನೀಡಿದೆ ಎಂದಿದ್ದಾರೆ. ಯಮನ ಗೆಟಪ್ ನಲ್ಲಿ ಅವರಿದ್ದಾಗ ಎದುರುಗಡೆ ನಟಿಸುತ್ತಿದ್ದ ಪಾತ್ರಧಾರಿಗಳಿಗೆ ನಡುಕ ಬಂದಾಗ ತಮಗೂ ನಗು ಬಂದಿಬಿಡುತ್ತಿತ್ತು ಎಂದಿದ್ದಾರೆ.
ಇದೀಗ ಪ್ರದರ್ಶನ ಕಾಣುತ್ತಿರುವ ಕಠಾರಿವೀರನಿಗೆ ರಾಜ್ಯಾದ್ಯಂತ ಅತ್ಯುತ್ತಮ ಅಭೂತಪೂರ್ವ ಸ್ವಾಗತ ದೊರೆತಿದೆ. ಉಪೇಂದ್ರರ ಮುಖ್ಯ ಪಾತ್ರ, ರಮ್ಯಾರ ದೇವಕನ್ಯೆಯ ಪಾತ್ರ ಮಾತ್ರವಲ್ಲದೇ ಅಂಬರೀಷ್ ಅಭಿನಯಿಸಿರುವ 'ಯಮ'ನ ಪಾತ್ರ ಪ್ರೇಕ್ಷಕರಿಂದ ತೀವ್ರ ಪ್ರಶಂಸೆಗೆ ಪಾತ್ರವಾಗಿದೆ ಎಂಬುದು ಇದೀಗ ಬಂದ ವರದಿಯಿಂದ ತಿಳಿದುಬಂದಿದೆ. ಅಂಬಿ ಈ ಚಿತ್ರದ ಯಶಸ್ಸಿನ ಬಗ್ಗೆ ಇಟ್ಟಿರುವ ಅತೀವ ನಿರೀಕ್ಷೆ ನಿಜವಾಗುವ ಲಕ್ಷಣಗಳು ಗೋಚರಿಸತಡಗಿವೆ. (ಒನ್ ಇಂಡಿಯಾ ಕನ್ನಡ)