Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಠಾರಿವೀರಕ್ಕೆ ಮುಂದುವರಿದ ಕಂಟಕದ ಸರಮಾಲೆ
ಕಠಾರಿವೀರ ಸುರಸುಂದರಾಂಗಿ ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಮಠಗಳ ಮುನಿವರ್ಯರು ಈ ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳನ್ನು ಚಿತ್ರಸಿರುವ ರೀತಿ ಹಾಗೂ ಕೆಲವು ಆಕ್ಷೇಪಾರ್ಹ ಸಂಭಾಷಣೆಗಳನ್ನು ಚಿತ್ರದಿಂದ ತೆಗೆದುಹಾಕಿ ಪ್ರದರ್ಶನ ಮುಂದುವರಿಸುವಂತೆ ಹೇರುತ್ತಿರುವ ಒತ್ತಡ ಹಾಗೇ ಮುಂದುವರಿದಿದೆ. ಚಿತ್ರದ ಪ್ರದರ್ಶನವೂ ಮುಂದುವರಿದಿದೆ.
ಚಿತ್ರದಲ್ಲಿರುವ ಯಾವುದೇ ದೃಶ್ಯಗಳಿಗೆ ಕತ್ತರಿ ಪ್ರಯೋಗದ ಅಗತ್ಯವಿಲ್ಲ ಎಂದು ಕೋರ್ಟ್ ಆದೇಶ ನೀಡಿದ ಮೇಲೂ ಸ್ವಾಮೀಜಿಗಳ ಆರೋಪ ಮುಂದುವರಿದಿದೆ. ಮಾಧ್ಯಮಗಳಲ್ಲಿ ಈ ಕುರಿತು ಸಾಕಷ್ಟು ವಾದ-ವಿವಾದಗಳು ಮುಂದುವರಿದಿವೆ. ಈ ನಡುವೆ, ಉಪೇಂದ್ರ ಹಾಗೂ ನಿರ್ಮಾಪಕ ಮುನಿರತ್ನ ಅವರು ಶಿರೂರು ಸ್ವಾಮಿಗಳ ಕ್ಷಮೆ ಕೇಳಿದ್ದು ಹಾಗೂ ಆಕ್ಷೇಪಾರ್ಹ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದ್ದೂ ನಡೆದಿದೆ.
ಒಟ್ಟಿನಲ್ಲಿ, ಕಠಾರಿವೀರ ಚಿತ್ರ ಬಿಡುಗಡೆಯದ ನಂತರ ಒಂದಲ್ಲ ಮತ್ತೊಂದು ವಿವಾದಗಳು ಚಿತ್ರದ ಸುತ್ತ ಸುತ್ತುತ್ತಲೇ ಇವೆ. ಹಿಂದೂ ಸಂಘಟನೆಗಳು ವಿವಾದವನ್ನು ದೊಡ್ಡದಾಗಿ ಬಿಂಬಿಸುವುದನ್ನು ಮುಂದುವರಿಸುತ್ತಲೇ ಇವೆ. ನಿರ್ಮಾಪಕ ಮುನಿರತ್ನ ಅವರು ಕೋರ್ಟ ಆದೇಶ, ಸೆನ್ಸಾರ್ ಮಂಡಳಿ ನಿಯಮಗಳು ಹಾಗೂ ಹಿಂದು ಸಂಘಟನೆಗಳ ಆಕ್ರೋಶಗಳ ಮಧ್ಯೆ ತಮ್ಮ ವಿವಾದಾತ್ಮಕ ಚಿತ್ರದ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಮುಂದೇನಾಗುವುದೋ...! (ಒನ್ ಇಂಡಿಯಾ ಕನ್ನಡ)